ಸಾಯಿ ಪಲ್ಲವಿ Online Desk
ಸಿನಿಮಾ ಸುದ್ದಿ

'ನನ್ನ ಕಣ್ಣುಗಳ ಬದಲಿಗೆ ಜನರು ಮುಖದ ಮೊಡವೆಗಳನ್ನಷ್ಟೇ ನೋಡ್ತಾರೆ : 'ಸೀತೆ' ಪಾತ್ರದ ವಿವಾದದ ನಡುವೆ ಸಾಯಿ ಪಲ್ಲವಿ ಮಾತು ವೈರಲ್!

'ಜನರು ನನ್ನ ಕಣ್ಣುಗಳನ್ನಲ್ಲ, ನನ್ನ ಮೊಡವೆಗಳನ್ನೇ ನೋಡುತ್ತಾರೆ': 'ರಾಮಾಯಣ' ಚಿತ್ರದ ಪಾತ್ರವರ್ಗದ ಆಯ್ಕೆ ವಿವಾದದ ನಡುವೆ ಸಾಯಿ ಪಲ್ಲವಿ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ.

ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸಿರುವ ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದರ ಕುರಿತು ಪರ-ವಿರೋಧದ ಚರ್ಚೆಯು ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ. ಅನೇಕರು ಈ ನಟಿಯ ಸಹಜವಾದ ಪರದೆ ಮೇಲಿನ ಉಪಸ್ಥಿತಿ ಮತ್ತು ಅಭಿನಯ-ಕೇಂದ್ರಿತ ಧೋರಣೆಯನ್ನು ಸ್ವಾಗತಿಸಿದ್ದರೆ, ಮತ್ತೆ ಕೆಲವರು ಆ ಪೌರಾಣಿಕ ಪಾತ್ರದ ಕುರಿತಾದ ತಮ್ಮ ಕಲ್ಪನೆಗೆ ಅವರು ಹೊಂದಿಕೆಯಾಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಆನ್‌ಲೈನ್ ಚರ್ಚೆ ಮುಂದುವರಿದಂತೆ, ಸಾಯಿ ಪಲ್ಲವಿ ಅವರ ಹಳೆಯ ಸಂದರ್ಶನವೊಂದು ಮತ್ತೆ ವೈರಲ್ ಆಗಿದೆ. ಸೌಂದರ್ಯದ ಮಾನದಂಡಗಳು, ಮೊಡವೆಗಳು, ಚರ್ಮದ ಸಕಾರಾತ್ಮಕತೆ ಮತ್ತು ಉದ್ಯಮದ ಒತ್ತಡಗಳ ಹೊರತಾಗಿಯೂ ಅವರು ತಮ್ಮ ನೈಸರ್ಗಿಕ ನೋಟವನ್ನು ಏಕೆ ಅಳವಡಿಸಿಕೊಂಡರು ಎಂಬುದರ ಕುರಿತು ಮಾತನಾಡಿದ್ದಾರೆ.

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ: ಭಿನ್ನಾಭಿಪ್ರಾಯ

'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಅಭಿನಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

ಅವರ ಸರಳತೆ ಮತ್ತು ನಟನಾ ಸಾಮರ್ಥ್ಯವು ಅವರನ್ನು ಈ ಪಾತ್ರಕ್ಕೆ ಸೂಕ್ತ ಆಯ್ಕೆಯನ್ನಾಗಿಸಿದೆ ಎಂದು ಅನೇಕರು ಸಮರ್ಥಿಸಿಕೊಂಡಿದ್ದರೆ, ಮತ್ತೆ ಕೆಲವರು ಈ ಆಯ್ಕೆಯ ಬಗ್ಗೆ ತಮ್ಮ ಅಸಮ್ಮತಿ ಅಥವಾ ಸಂಶಯ ವ್ಯಕ್ತಪಡಿಸಿದ್ದಾರೆ.

ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು, 'ಇಲ್ಲಿ ಜನರು ಸಾಯಿ ಪಲ್ಲವಿ ಅವರ ಸೌಂದರ್ಯವನ್ನು ಪ್ರಶ್ನಿಸುತ್ತಿಲ್ಲ. ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳಿಗೆ ಅವರು ಬದ್ಧರಾಗಿರಬೇಕಾದ ಅಗತ್ಯವಿಲ್ಲ. ಆದರೆ ವಿಷಯವೇನೆಂದರೆ, ನಮ್ಮ ಧರ್ಮಗ್ರಂಥಗಳಲ್ಲಿ ವರ್ಣಿಸಲಾಗಿರುವಂತೆ ತಾಯಿ ಸೀತೆಯ ಸೌಂದರ್ಯದ ಸ್ವರೂಪಕ್ಕೆ ಇವರು ಹೊಂದಿಕೆಯಾಗುವುದಿಲ್ಲ. ತಾಯಿ ಸೀತೆ ಸೌಂದರ್ಯದ ಸಾಕಾರಮೂರ್ತಿಯಾಗಿದ್ದರು. ಅದಕ್ಕಾಗಿಯೇ ಅನೇಕರು ಅಸಮಾಧಾನಗೊಂಡಿದ್ದಾರೆ' ಎಂದಿದ್ದಾರೆ.

ಆದರೆ, ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳಿಗಿಂತ ನಟಿಯ ಅಭಿನಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಇತರ ಅನೇಕರು ವಾದಿಸಿದ್ದಾರೆ.

ಈ ವಿಷಯದ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, 'ದಿ ಹಿಂದೂ' ಪತ್ರಿಕೆಯೊಂದಿಗೆ ಸಾಯಿ ಪಲ್ಲವಿ ನಡೆಸಿದ್ದ ಹಿಂದಿನ ಸಂದರ್ಶನವೊಂದು ಮತ್ತೆ ಅಂತರ್ಜಾಲದಲ್ಲಿ ಮುನ್ನೆಲೆಗೆ ಬಂದಿದೆ.

ತೆರೆಯ ಮೇಲೆ ಹಾಗೂ ತೆರೆಯ ಹೊರಗೆ ಸದಾ 'ನೋ-ಮೇಕಪ್' (ಮೇಕಪ್ ಇಲ್ಲದ) ಲುಕ್ ಅನ್ನು ಅಳವಡಿಸಿಕೊಂಡಿರುವ ಈ ನಟಿ, ಮೊಡವೆ ಮತ್ತು ರೋಸೇಶಿಯಾ (rosacea) ಸಮಸ್ಯೆಗಳೊಂದಿಗೆ ಬದುಕುವ ಕುರಿತು ಹಾಗೂ ಸೌಂದರ್ಯದ ಬಗೆಗಿನ ತಮ್ಮ ದೃಷ್ಟಿಕೋನವನ್ನು ಪ್ರೇಕ್ಷಕರು ಹೇಗೆ ಬದಲಾಯಿಸಿದರು ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ತನ್ನ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ, ಪ್ರೇಕ್ಷಕರು ತನ್ನನ್ನು ತಾನು ಇರುವಂತೆಯೇ ಅಪ್ಪಿಕೊಂಡ ನಂತರ ತನ್ನನ್ನು ತಾನು ಒಪ್ಪಿಕೊಳ್ಳುವುದು ಸುಲಭವಾಯಿತು. 'ಜನರು ನನ್ನನ್ನು ಮೊಡವೆ ಇರುವ ಹುಡುಗಿಯಾಗಿ ಒಪ್ಪಿಕೊಂಡಾಗ, ಆತ್ಮವಿಶ್ವಾಸವೇ ನಿಜವಾದ ಸೌಂದರ್ಯ ಎಂದು ನಾನು ಕಲಿತಿದ್ದೇನೆ' ಎಂದು ಸಾಯಿ ಪಲ್ಲವಿ ಹೇಳಿದ್ದರು.

ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುವ ಬದಲು, ಸಹಜತೆಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ನಟಿ ಹಲವು ಬಾರಿ ಮಾತನಾಡಿದ್ದಾರೆ.

'ಪ್ರೇಮಂ' ಆಯ್ಕೆ ಮಾಡಿಕೊಂಡಿದ್ದು ಏಕೆ?

ಅದೇ ಸಂದರ್ಶನದಲ್ಲಿ, ತಮಿಳು ಚಿತ್ರರಂಗದ ಬದಲು ಮಲಯಾಳಂನ ಬ್ಲಾಕ್‌ಬಸ್ಟರ್ ಚಿತ್ರ 'ಪ್ರೇಮಂ' ಮೂಲಕ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದೇಕೆ ಎಂಬುದನ್ನೂ ಸಾಯಿ ಪಲ್ಲವಿ ಬಹಿರಂಗಪಡಿಸಿದರು.

'ನನ್ನ ಸ್ನೇಹಿತರೆಲ್ಲರೂ ತಮಿಳಿಗರು; ನಾನು ಬಲವಂತ ಮಾಡಿದರೂ ಅವರು ಆ ಚಿತ್ರವನ್ನು ('ಪ್ರೇಮಂ') ನೋಡುತ್ತಿರಲಿಲ್ಲ. ಹಾಗಾಗಿ, ಒಂದು ವೇಳೆ ಆ ಚಿತ್ರವು ಯಶಸ್ವಿಯಾಗದಿದ್ದರೂ ಯಾರಿಗೂ ಅದು ತಿಳಿಯುತ್ತಿರಲಿಲ್ಲ' ಎಂದು ಹೇಳಿದರು.

2015ರಲ್ಲಿ ಬಿಡುಗಡೆಯಾದ 'ಪ್ರೇಮಂ' ಭಾರಿ ಯಶಸ್ಸನ್ನು ಕಂಡಿತು ಮತ್ತು ದೇಶಾದ್ಯಂತದ ಪ್ರೇಕ್ಷಕರಿಗೆ ಸಾಯಿ ಪಲ್ಲವಿಯನ್ನು ಪರಿಚಯಿಸಿತು.

ಸಿನಿಮಾರಂಗಕ್ಕೆ ಬರುವ ಮುನ್ನ ಮೊಡವೆಗಳ ಸಮಸ್ಯೆಯಿಂದ ತಾವು ಪಟ್ಟ ಪಾಡು ಮತ್ತು ತಮ್ಮ ರೂಪವನ್ನು ಬದಲಾಯಿಸಿಕೊಳ್ಳಲು ವಿವಿಧ 'ಫೇರ್‌ನೆಸ್ ಕ್ರೀಮ್‌'ಗಳನ್ನು ಬಳಸಿದ್ದರ ಬಗ್ಗೆಯೂ ಸಾಯಿ ಪಲ್ಲವಿ ನೆನಪಿಸಿಕೊಂಡರು.

'ಪ್ರೇಮಂ' ಚಿತ್ರಕ್ಕೂ ಮೊದಲು, ನಾನು ನೂರಾರು ಫೇರ್‌ನೆಸ್ ಕ್ರೀಮ್‌ಗಳನ್ನು ಹಚ್ಚಿಕೊಳ್ಳುತ್ತಿದ್ದೆ. ನನಗೆ ವಿಪರೀತ ಮೊಡವೆಗಳಿದ್ದವು. ಆ ಸಮಯದಲ್ಲಿ ನಾನು ಸಾಕಷ್ಟು ಮಾನಸಿಕ ಸಂಕಟ ಅನುಭವಿಸಿದೆ. ನನಗೆ ಮನೆಯಿಂದ ಹೊರಗೆ ಹೋಗಲು ಇಷ್ಟವಾಗುತ್ತಿರಲಿಲ್ಲ. ಜನರು ನನ್ನ ಕಣ್ಣುಗಳ ಬದಲಾಗಿ ನನ್ನ ಮೊಡವೆಗಳನ್ನೇ ನೋಡುತ್ತಾ ಮಾತನಾಡಿಕೊಳ್ಳುತ್ತಾರೆ ಎಂದು ಭಾವಿಸಿ ನಾನು ಮನೆಯಲ್ಲೇ ಉಳಿದುಬಿಡುತ್ತಿದ್ದೆ' ಎಂದರು.

'ಪ್ರೇಮಂ' ನಂತರ, ನಾನು ಇರುವಂತೆಯೇ ಜನರು ನನ್ನನ್ನು ಸ್ವೀಕರಿಸಿದರು. ಅವರು ನನ್ನನ್ನು ಇನ್ನಷ್ಟು ಇಷ್ಟಪಟ್ಟರು ಮತ್ತು ಅದು ಯುವಜನತೆ ಮೇಲೆ ಎಷ್ಟೊಂದು ಪ್ರಭಾವ ಬೀರಿತು ಎಂಬುದನ್ನು ನಾನು ಕಂಡುಕೊಂಡೆ. ಇದು ನನಗೆ ಹೆಚ್ಚಿನ ಆತ್ಮವಿಶ್ವಾಸ ಮತ್ತು ಬಲವನ್ನು ನೀಡಿತು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ