ನಟ ಯಶ್ 
ಸಿನಿಮಾ ಸುದ್ದಿ

'ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಬೇಡಿ, ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ': ಟಾಕ್ಸಿಕ್ ಬಿಡುಗಡೆಗೆ ಮುನ್ನ ನಟ ಯಶ್ ಮಾತು

'ಟಾಕ್ಸಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದಲೂ ಅದರ ಬೋಲ್ಡ್ ದೃಶ್ಯಗಳಿಗಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ; ಹೀಗಿರುವಾಗ, ಯಶ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ.

ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಬಿಡುಗಡೆಗೆ ಮುನ್ನ, ಚಿತ್ರತಂಡವು ಶನಿವಾರ (ಆಗಸ್ಟ್ 22) ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಭವ್ಯ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ತಮ್ಮ ಗುರಿಗಳನ್ನು ತಲುಪಲು ಪೂರ್ಣ ಮನಸ್ಸಿನಿಂದ ಶ್ರಮಿಸಬೇಕು ಎಂದು ಯಶ್ ಕರೆ ನೀಡಿದರು.

ಅಲ್ಲದೆ, ವೈಫಲ್ಯಕ್ಕೆ ಜಗತ್ತನ್ನು ದೂಷಿಸುವ ಬದಲು ಅದರ ಹೊಣೆಯನ್ನು ತಾವೇ ಹೊರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸಿನಿಮಾವನ್ನು ಅತಿಯಾಗಿ 'ಗಂಭೀರವಾಗಿ' ಪರಿಗಣಿಸಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

'ಟಾಕ್ಸಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದಲೂ ಅದರ ಬೋಲ್ಡ್ ದೃಶ್ಯಗಳಿಗಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ; ಹೀಗಿರುವಾಗ, ಯಶ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ. ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣವೇ ವೈರಲ್ ಆದವು.

'ಸಿನಿಮಾವನ್ನು ಎಂದಿಗೂ ಅತಿಯಾಗಿ ಗಂಭೀರವಾಗಿ ಪರಿಗಣಿಸಬೇಡಿ. ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ. ಜೀವನದಲ್ಲಿ ನೀವು ಏನನ್ನು ಮಾಡಲು ಬಯಸುತ್ತೀರೋ, ಅದರ ಬಗ್ಗೆ ಕನಸು ಕಾಣಿ ಮತ್ತು ಅದಕ್ಕಾಗಿ ಶ್ರಮಿಸಿ. ಆಗ ನಿಮಗೆ ಗೌರವ ಮತ್ತು ಯಶಸ್ಸು ಸಿಗುತ್ತದೆ. ಯಾವುದರಲ್ಲಾದರೂ ನಾವು ವಿಫಲರಾದರೆ, ಅದಕ್ಕೆ ಜಗತ್ತನ್ನು ದೂಷಿಸಬೇಡಿ. ಅದಕ್ಕೆ ನಾವೇ ಜವಾಬ್ದಾರರು' ಎಂದು ಯಶ್ ಹೇಳಿದರು.

ಹೈದರಾಬಾದ್‌ನ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ, ದೊಡ್ಡ ಸೌಂಡ್ ಬಾಕ್ಸ್ ಸೆಟ್-ಅಪ್ ಜನಸಂದಣಿ ಮೇಲೆ ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡರು.

ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಉದ್ದೇಶಿಸಿ ನಟ ಯಶ್ ವೇದಿಕೆ ಮೇಲೆ ಮಾತನಾಡುತ್ತಿದ್ದಾಗ ಈ ಅವಘಡ ಸಂಭವಿಸಿತು. ತಕ್ಷಣವೇ ಗದ್ದಲವನ್ನು ಗಮನಿಸಿದ ಅವರು, ತಮ್ಮ ಭಾಷಣವನ್ನು ನಿಲ್ಲಿಸಿ, ತೊಂದರೆಗೀಡಾದವರ ಸ್ಥಿತಿಯನ್ನು ಪರಿಶೀಲಿಸಿದರು. 'ಅವರು ಸುರಕ್ಷಿತವಾಗಿದ್ದಾರೆಯೇ? ದಯವಿಟ್ಟು ಪರಿಶೀಲಿಸಿ' ಎಂದು ವೇದಿಕೆಯಿಂದಲೇ ಹೇಳಿದ ಅವರು, ಪರಿಸ್ಥಿತಿಯನ್ನು ಗಮನಿಸುವಂತೆ ಆಯೋಜಕರು ಮತ್ತು ಭದ್ರತಾ ಸಿಬ್ಬಂದಿಗೆ ಸೂಚಿಸಿದರು.

ಘಟನಾ ಸ್ಥಳದಲ್ಲಿದ್ದ ಪೊಲೀಸರು ಕೂಡ ತಕ್ಷಣ ಮಧ್ಯಪ್ರವೇಶಿಸಿ, ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!

ಸೆಪ್ಟೆಂಬರ್ 11 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಧ್ಯತೆ

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!