ನಿವೇದಿತಾ ಗೌಡ, ಯೋಗಿ 
ಸಿನಿಮಾ ಸುದ್ದಿ

'ಬೇಲ್' ಚಿತ್ರದ 'ಕುಮಾರಿ' ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ-ಯೋಗಿ!

ಪವನ್ ಒಡೆಯರ್ ನಿರ್ದೇಶನದ ಬಹುತಾರಾಗಣದ 'ಬೇಲ್' ಚಿತ್ರದ 'ಕುಮಾರಿ' ಎಂಬ ವಿಶೇಷ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು 'ಲೂಸ್ ಮಾದ' ಯೋಗಿ ಮೈಚಳಿ ಬಿಟ್ಟು ಕುಣಿದಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ ಬಹುತಾರಾಗಣದ 'ಬೇಲ್' ಚಿತ್ರದ 'ಕುಮಾರಿ' ಎಂಬ ವಿಶೇಷ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು 'ಲೂಸ್ ಮಾದ' ಯೋಗಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ಈ ಹಾಡಿನಲ್ಲಿ ನಿವೇದಿತಾ ಅವರೊಂದಿಗೆ ಯೋಗಿ ಕೂಡ ಉತ್ಸಾಹಭರಿತವಾಗಿ ಹೆಜ್ಜೆ ಹಾಕಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಮತ್ತು ಮಂಗ್ಲಿ ಧ್ವನಿ ನೀಡಿದ್ದಾರೆ.

ಈ ಹಾಡು ಕೇವಲ ಪ್ರಚಾರಕ್ಕಾಗಿ ಬಳಸುವ ನೃತ್ಯದಂತೆ ತೋರದೆ, ಚಿತ್ರದ ಕಥೆಯೊಳಗೆ ನಡೆಯುವ ಮತ್ತೊಂದು ಸಿನಿಮಾದ ಚಿತ್ರೀಕರಣದ ಸನ್ನಿವೇಶದೊಂದಿಗೆ ಈ ಹಾಡನ್ನು ಬೆಸೆಯಲಾಗಿದೆ. ಹೀಗಾಗಿ ಚಿತ್ರಕಥೆಯಲ್ಲಿ 'ಕುಮಾರಿ' ಹಾಡಿಗೆ ಒಂದು ನಿರ್ದಿಷ್ಟ ಸಂದರ್ಭವನ್ನು ಕಲ್ಪಿಸಲಾಗಿದೆ. ಕೆವಿಎನ್ (KVN) ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸಿರುವ 'ಬೇಲ್' ಚಿತ್ರಕ್ಕೆ ಪವನ್ ಒಡೆಯರ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವೈದಿ ಎಸ್. ಛಾಯಾಗ್ರಾಹಕರಾಗಿದ್ದರೆ, ಶಶಾಂಕ್ ನಾರಾಯಣ್ ಸಂಕಲನದ (ಎಡಿಟಿಂಗ್) ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್, ಸಾಯಿಕುಮಾರ್, ಮಲಯಾಳಂ ನಟ ಜಯರಾಮ್, 'ಲೂಸ್ ಮಾದ' ಯೋಗಿ, ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿರುವ ಚಿತ್ರತಂಡವು ಇದೀಗ 'ಕುಮಾರಿ' ಹಾಡನ್ನು ಬಿಡುಗಡೆ ಮಾಡಿದೆ. 'ಬೇಲ್' ಚಿತ್ರವು ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಯುದ್ಧ ಆರಂಭಕ್ಕೆ ವಿಜಯದಶಮಿ ಪ್ರಶಸ್ತ ಕಾಲ, ಮಾಧ್ಯಮದವರಿಗೆ ಒಳ್ಳೆಯ ಆಹಾರ ನೀಡುತ್ತೇನೆ': HD ಕುಮಾರಸ್ವಾಮಿ

ನಾಯಕತ್ವ ಎಂದರೆ ತೊಂದರೆ ಬಂದಾಗ ಓಡಿಹೋಗುವುದಲ್ಲ: Biggboss ವೇದಿಕೆ ಮೇಲೆ ಸೇತುಪತಿ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ!

2,000 ರೂ.ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ? ಶೀಘ್ರದಲ್ಲೇ ನಿರ್ಧಾರ

ಪಶ್ಚಿಮ ಬಂಗಾಳ ಉಪಚುನಾವಣೆ: ನಂದಿಗ್ರಾಮದಲ್ಲಿ ಹತ್ಯೆಗೀಡಾದ ಸಿಎಂ ಆಪ್ತ ಸಹಾಯಕನ ತಾಯಿ ಕಣಕ್ಕೆ!

Ramayana ಮೊದಲ ಹಾಡು ಬಿಡುಗಡೆ:' ಶ್ರೀರಾಮನನ್ನು ವರ್ಣಿಸುವುದು ನನ್ನ ಪ್ರಯತ್ನವಾಗಿರಲಿಲ್ಲ'; ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಹೇಳಿದ್ದೇನು?