ಮರಾಠಿ ಸಿನಿಮಾ ಗೋಂಡಾಲ್ online desk
ಸಿನಿಮಾ ಸುದ್ದಿ

ಆಸ್ಕರ್ 2027: ಮರಾಠಿ ಥ್ರಿಲ್ಲರ್ ಗೊಂಡಾಲ್ ಭಾರತದಿಂದ ಅಧಿಕೃತ ಆಯ್ಕೆ

99ನೇ ಆವೃತ್ತಿಯ ಅಕಾಡೆಮಿ ಪ್ರಶಸ್ತಿ ಸಮಾರಂಭ 2027ರ ಮಾರ್ಚ್ 14ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

ನವದೆಹಲಿ: 'ಗೊಂಡಲ್' (Gondhal) ಎಂಬ ಮರಾಠಿ ಥ್ರಿಲ್ಲರ್ ಚಲನಚಿತ್ರ 2027ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ ಎಂದು 'ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ' (FFI) ಶುಕ್ರವಾರ ಘೋಷಿಸಿದೆ.

ಸಂತೋಷ್ ದವಖರ್ ನಿರ್ದೇಶನದ ಈ ಚಿತ್ರ 99ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' (Best International Feature) ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಈ ಚಲನಚಿತ್ರ ನಿರ್ಮಾಪಕರು 'ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ' (IFFI) 2025ರಲ್ಲಿ 'ಸಿಲ್ವರ್ ಪೀಕಾಕ್ ಪ್ರಶಸ್ತಿ'ಯನ್ನು ಗೆದ್ದಿದ್ದರು.

ಈ ಆಯ್ಕೆ ಸಮಿತಿಯಲ್ಲಿ ಪಿ. ಶೇಷಾದ್ರಿ, ವಿಜಯ್ ಪಾಟ್ಕರ್, ಹುಟು ಕನೋಡಿಯಾ, ಶಾಂತಿ ಕುಮಾರ್, ಸಂದೀಪ್ ಪರಾಶರ್, ಸಂಜಯ್ ಪಾಟೀಲ್, ಸಾಬು ಜೋಸೆಫ್, ಅನಿಲ್ ಥಾಮಸ್, ವಿವೇಕ್ ವಸ್ವಾನಿ, ಬಿಜೋನ್ ದಾಸ್‌ಗುಪ್ತ, ಹಾಸನ್, ವಸನ್ ಮತ್ತು ತನಿಷ್ಠಾ ಚಟರ್ಜಿ ಅವರು ಸದಸ್ಯರಾಗಿದ್ದರು.

ಒಟ್ಟು 33 ಚಲನಚಿತ್ರಗಳನ್ನು ಪರಿಶೀಲನೆಗೆ ಸಲ್ಲಿಸಲಾಗಿತ್ತು. ಇವುಗಳಲ್ಲಿ 14 ಹಿಂದಿ, ತಲಾ ನಾಲ್ಕು ಮರಾಠಿ, ತೆಲುಗು ಮತ್ತು ಗುಜರಾತಿ, ಮೂರು ತಮಿಳು ಹಾಗೂ ತಲಾ ಒಂದು ಮಲಯಾಳಂ ಮತ್ತು ನಾಗಾಮೀಸ್ ಭಾಷೆಯ ಚಿತ್ರಗಳಿದ್ದವು. ಇದರಲ್ಲಿ ಒಂದು ಮೂಕ ಚಿತ್ರವೂ ಸೇರಿತ್ತು.

ಕಳೆದ ವರ್ಷ, ನೀರಜ್ ಘಯವಾನ್ ನಿರ್ದೇಶನದ ಕೋವಿಡ್-ಪರಿಣಾಮದ ಕುರಿತಾದ 'ಹೋಮ್‌ಬೌಂಡ್' (Homebound) ಚಿತ್ರವು ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿತ್ತು. ಇಶಾನ್ ಖಟ್ಟರ್ ಮತ್ತು ವಿಶಾಲ್ ಜೆಟ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರವು ಆಸ್ಕರ್‌ನ 'ದೀರ್ಘ ಪಟ್ಟಿ'ಯನ್ನು (long list) ತಲುಪುವಲ್ಲಿ ವಿಫಲವಾಗಿತ್ತು.

99ನೇ ಆವೃತ್ತಿಯ ಅಕಾಡೆಮಿ ಪ್ರಶಸ್ತಿ ಸಮಾರಂಭ 2027ರ ಮಾರ್ಚ್ 14ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!

ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ: ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video