ಕ್ರಿಕೆಟ್

ವಿಜಯ್ ಹಜಾರೆ ಟ್ರೋಫಿ: 52.4 ಓವರ್‌ಗಳಲ್ಲಿ 20 ವಿಕೆಟ್ ಪತನ, ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪೆರೇಡ್

Vishwanath S
ಕೋಲ್ಕತ್ತಾ: ವಿಜಯ್ ಹಜಾರೆ ಟ್ರೋಫಿಯ ಏಕದಿನ ಪಂದ್ಯದಲ್ಲಿ ಜಾರ್ಖಂಡ್ ಹಾಗೂ ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಕೇವಲ 52.4 ಓವರ್ ಗಳಲ್ಲಿ 20 ವಿಕೆಟ್ ಪತನ ಕಾಣುವುದರೊಂದಿಗೆ ಪಂದ್ಯ ಮುಕ್ತಾಯಗೊಂಡಿದೆ.
ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸಾರಥ್ಯದ ಜಾರ್ಖಂಡ್ 42 ರನ್ ಗಳಿಂದ ಸೌರಾಷ್ಟ್ರವನ್ನು ಮಣಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದೆ. 
ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ 27.3 ಓವರ್ ಗಳಲ್ಲಿ 125 ರನ್ ಗಳಿಗೆ ಸರ್ವಪತನ ಕಂಡಿತು. 126 ರನ್ ಗಳ ಬೆನ್ನಟ್ಟಿದ ಸೌರಾಷ್ಟ್ರ ತಂಡ 25.1 ಓವರ್ ಗಳಲ್ಲಿ ಕೇವಲ 83 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 42 ರನ್ ಗಳಿಂದ ಜಾರ್ಖಂಡ್ ಶರಣಾಯಿತು. 
SCROLL FOR NEXT