ಮುತ್ತಯ್ಯ ಮುರಳೀಧರನ್ 
ಕ್ರಿಕೆಟ್

ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್

"ಯುವಕರಾಗಿದ್ದಾಗ ಬೌಲಿಂಗ್ ನನಗೆ ಕಷ್ಟವೆನಿಸಿರಲಿಲ್ಲ. ನಾವು ಆಟವಾಡುವಾಗ ಬೌಲಿಂಗ್ ಸುಲಭವಿತ್ತು. ಈಗ ಬೌಲ್ ಮಾಡುವುದು ಸುಲಭವಲ್ಲ "

ಕೋಲ್ಕತ್ತಾ: "ಯುವಕರಾಗಿದ್ದಾಗ ಬೌಲಿಂಗ್ ನನಗೆ ಕಷ್ಟವೆನಿಸಿರಲಿಲ್ಲ. ನಾವು ಆಟವಾಡುವಾಗ ಬೌಲಿಂಗ್ ಸುಲಭವಿತ್ತು. ಈಗ ಬೌಲ್ ಮಾಡುವುದು ಸುಲಭವಲ್ಲ " ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ಗಳಿಕೆಯ ಶ್ರೀಲಂಕಾ ಪ್ರಸಿದ್ದ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಹೇಳಿದರು.
"ನಾವು ಹೆಚ್ಚು ಟಿ20  ಪಂದ್ಯವಾಡಿಲ್ಲ. ಈಗಿನವರಂತೆ ಹೆಚ್ಚು ಸಿಕ್ಸರ್ ಹೊಡೆದಿಲ್ಲ. ಈಗ ಆಟ ವಿಕಸನಗೊಂಡಿದೆ" ಅವರು ಹೇಳಿದ್ದಾರೆ.
133 ಪಂದ್ಯಗಳಿಂದ 800 ಟೆಸ್ಟ್ ವಿಕೆಟ್ ಪಡೆದ ಮುರಳಿಧರನ್ 1996 ರ ವಿಶ್ವಕಪ್ ಗೆದ್ದ ಕ್ಷಣ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಕ್ಷಣವಾಗಿದೆ ಎಂದು ಹೇಳಿದರು."1996 ರ ವಿಶ್ವ ಕಪ್ ಜಯವನ್ನು ನಾನು ಸಂಭ್ರಮಿಸುತ್ತೇನೆ ಏಕೆಂದರೆ ಅದು ಶ್ರೀಲಂಕಾದ ಕ್ರಿಕೆಟ್ ಗೆ ಬಹಳ ಮುಖ್ಯವಾದುದು."
ರೂಪಾ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀಲಂಕಾ ಬೌಲರ್ ಮುರಳಿಧರನ್ ಬಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಕ್ರಿಕೆಟಿಗ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಕೌಟುಂಬಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಸನ್ ರೈಸರ್ಸ್ ತಂಡದ  ನಾಯಕ ಕೇನ್ ವಿಲಿಯಮ್ಸನ್ ತಮ್ಮ ಹದಿಹರೆಯದ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಆರಾಧಿಸುತ್ತಿದ್ದದ್ದಾಗಿ ನೆನೆಸಿದರು.
ಭಾರತವು 2010 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ವಿಲ್ಲಿಯನ್ಸನ್ ಮೊಟ್ಟ ಮೊದಲ ಬಾರಿಗೆ ಸಚಿನ್ ಅವರನ್ನು ಭೇಟಿಯಾಗಿದ್ದರು."ಎದುರಾಳಿಯ ಶಿಬಿರದಲ್ಲಿ ಅವರನ್ನು ಕಾಣಲು ಬಹಳ ಅಡೆತಡೆಗಳಿದ್ದವು. ಕ್ರೀಡಾಂಗಣದಲ್ಲಿ ನಾನು ಅವರ ಆಟ ವೀಕ್ಷಿಸುತ್ತಿದ್ದೆ. ಅವರು ಹೇಗೆ ಅಷ್ಟು ಚೆನ್ನಾಗಿ ಆಡುವರೆನ್ನುವುದು ಅನನಗೆ ತಿಳಿಯಬೇಕಿತ್ತು. ಇದು ನಿಜವಾಗಿಯೂ ಉತ್ತಮ ಅನುಭವ" ಎಂದು ವಿಲಿಯಮ್ಸನ್ ಹೇಳಿದರು.
ನಾನಾಗ  19 ಅಥವಾ 20 ವರ್ಷ ವಯಸ್ಸಿನವನಾಗಿದ್ದೆ ಕ್ರಿಕೆಟ್ ದಂತಕಥೆ ಸಚಿನ್, ದ್ರಾವಿಡ್,  ವಿವಿಎಸ್ ಲಕ್ಷ್ಮಣ್ ತಂಡದಲ್ಲಿದ್ದರು ಇಂತಹ ಅದ್ಭುತ ಜನರು ಮತ್ತು ಆಟದ ಬಗ್ಗೆ ಮಾತನಾಡಲು ಬಹಳ ಇಷ್ಟವಾಗುತ್ತದೆ" ಅವರು ಹೇಳಿದ್ದಾರೆ.
ಶಿಖರ್ ಧವನ್ ಮಾತನಾಡಿ "ನಾನು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ಕ್ರಿಕೆಟ್ ಬದುಕಿನ ಬಳಿಕ ತಾನು ನನ್ನ ತಂದೆಯ ವ್ಯ್ವಹಾರದಲ್ಲಿ ತೊಡಗಿಕೊಳ್ಳಲಿದ್ದೇನೆ.ಪಂಜಾಬಿಗಳು ತಮ್ಮ ವ್ಯವಹಾರವನ್ನು ಪ್ರೀತಿಸುತ್ತಾರೆ. ಇದು ನಮ್ಮ ರಕ್ತದಲ್ಲಿದೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT