ಮೆಹ್ದಿ ಹಸನ್ ಬೌಂಡರಿ ಗೆರೆ ತುಳಿದಿರುವ ದೃಶ್ಯ 
ಕ್ರಿಕೆಟ್

ಕರ್ನಾಟಕಕ್ಕೆ ಅದೃಷ್ಟದ ಗೆಲುವು ತಂದ ಆ 2 ರನ್ ಬಂದಿದ್ದು ಹೇಗೆ ಗೊತ್ತಾ!

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ 2 ರನ್ ಗಳಿಂದ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ...

ವಿಶಾಖಪಟ್ಟಣ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ 2 ರನ್ ಗಳಿಂದ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. 
ಕರ್ನಾಟಕದ ಇನ್ನಿಂಗ್ಸ್ ನ 2ನೇ ಓವರ್ ನ 4ನೇ ಎಸೆತದಲ್ಲಿ ಕರುಣ್ ನಾಯರ್ ಬಾರಿಸಿದ ಚೆಂಡನ್ನು ಮೆಹ್ದಿ ಹಸನ್ ಬೌಂಡರಿ ಗೆರೆ ಬಳಿ ತಡೆದರು. ಆಗ ಇದನ್ನು ಸರಿಯಾಗಿ ಗಮನಿಸದ ಅಂಪೈರ್ ಉಲ್ಲಾಸ್ ಗಾಂದೆ ಕೇವಲ 2 ರನ್ ನೀಡಿದ್ದರು. ಆದರೆ ಹಸನ್ ಚೆಂಡು ಹಿಡಿಯುವ ವೇಳೆ ಅವರ ಎಡಗಾಲು ಬೌಂಡರಿ ಗೆರೆಗೆ ತಾಗಿತ್ತು. 
ನಂತರ ಚಿತ್ರಗಳಲ್ಲಿ ಗಮನಿಸಿ ಇನಿಂಗ್ಸ್ ಮುಗಿದ ಬಳಿಕ ಕರ್ನಾಟಕಕ್ಕೆ 2 ರನ್ ನೀಡಲಾಯಿತು. ಇದಕ್ಕೆ ಹೈದರಾಬಾದ್ ತಂಡದ ನಾಯಕ ಅಂಬಟಿ ರಾಯುಡು ಸೇರಿದಂತೆ ಕೆಲ ಆಟಗಾರರು ಕೆಲಕಾಲ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಕರ್ನಾಟಕ ತಂಡ ಈ 2 ರನ್ ಗಳಿಂದಲೇ ಜಯ ದಾಖಲಿಸಿದ್ದು ಅದೃಷ್ಟಕ್ಕೆ ಸಾಕ್ಷಿಯಾಯಿತು. 
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತ್ತು. ಆದರೆ ನಂತರ ಅಂಪೈರ್ ನೀಡಿದ 2 ರನ್ ಸೇರಿ 205 ರನ್ ಕಲೆಹಾಕಿದಂತಾಯಿತು. ಪ್ರತಿಯಾಗಿ ಹೈದರಾಬಾದ್ ನಿಗತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ 2 ರನ್ ಗಳಿಂದ ಸೋಲು ಕಂಡಿತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯ: ಕೇಂದ್ರ ಆದೇಶ

ಬಸವ ತತ್ವದ ಕೆಲ ಸ್ವಾಮೀಜಿಗಳು ತಾಲಿಬಾನಿಗಳಿದ್ದಂತೆ: ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೊಂದು ವಿವಾದಾತ್ಮಕ ಹೇಳಿಕೆ!

HR88B8888 ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಮರು ಹರಾಜಿಗೆ..! ಕಾರಣ ಏನು ಗೊತ್ತಾ?

Video: ಹೊಟೆಲ್ ಲಾಬಿಯಲ್ಲಿ ಗಂಭೀರ್-ರೋಹಿತ್ ಶರ್ಮಾ ಮಾತಿನ ಚಕಮಕಿ; ಕೋಚ್ ಅನ್ನೇ ನಿರ್ಲಕ್ಷಿಸಿದ್ರಾ Kohli!

ಬೆಂಗಳೂರು, ದೆಹಲಿ ಸೇರಿ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ GPS ಸ್ಪೂಫಿಂಗ್: ರಾಜ್ಯಸಭೆಗೆ ಕೇಂದ್ರ ಮಾಹಿತಿ

SCROLL FOR NEXT