ಅಭಿಮಾನಿಯ ಕುಟುಂಬಕ್ಕೆ ಧೋನಿಯಿಂದ ಭೋಜನ ಸತ್ಕಾರ!
ಮುಂಬೈ: ಭಾರತೀಯ ಕ್ರಿಕೆಟ್ ನ ಕಟ್ಟಾ ಅಭಿಮಾನಿಯಾದ ಸುಧೀರ್ ಗೌತಮ್ ಎಂದಿಗಿಂತ ಅಂದು ಹೆಚ್ಚು ಆನಂದದಿಂದಿದ್ದರು. ಕಾರಣ ಇದುವರೆಗೆ ಕೇವಲ ಆಟದ ಅಂಗಣದಲ್ಲಿ ಕಾಣ ಸಿಗುತ್ತಿದ್ದ ಕ್ರಿಕೆಟ್ಗನೊಬ್ಬ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದ!
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಸುಧೀರ್ ಗೌತಮ್ ಅವರಿಗೆ ತಮ್ಮ ಮನೆಗೆ ಔತಣಕ್ಕೆ ಕರೆದಿದ್ದರು. ಡೋನಿಯೊಡನೆ ಭೋಜನಕ್ಕೆ ಅವಕಾಶ ಪಡೆದ ಅಭಿಮಾನಿ ಸುಧೀರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಮತ್ತು ಅವರ ಕುಟುಂಬದೊಂದಿಗೆ ಇರುವ ಚಿತ್ರಗಳನ್ನು ಅಪ್ ಮಾಡಿದ್ದಾರೆ.
"ಕ್ಯಾಪ್ಟನ್ ಕೂಲ್ ಧೋನಿ ಜತೆ ವಿಶೇಷ ದಿನ, ಫಾರ್ಮ್ ಹೌಸ್ನಲ್ಲಿ ಸೂಪರ್ ಫ್ಯಾಮಿಲಿಯ ಸೂಪರ್ ಲಂಚ್! ಈ ಸಮಯದಲ್ಲಿ ಆದ ಸಂತಸ ಹೇಳಲು ಪದಗಳಿಲ್ಲ. ಎಂಎಸ್ ಧೋನಿ ಮತ್ತು ಸಾಕ್ಷಿ ಅವರಿಗೆ ಧನ್ಯವಾದಗಳು" ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಾರಥ್ಯ ವಹಿಸಿದ್ದ ಧೋನಿ ಸರಣಿ ಗೆಲುವಿನ ಬಳಿಕ ಕುಟುಂಬದೊಡನೆ ವಿಶ್ರಾಂತಿಯಲ್ಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos