ರಾಹುಲ್ ದ್ರಾವಿಡ್ 
ಕ್ರಿಕೆಟ್

ದ್ರಾವಿಡ್ ಟೀಮ್‌ ಇಂಡಿಯಾದ ಕೋಚ್‌ ಸ್ಥಾನ ನಿರಾಕರಿಲು ಅಸಲಿ ಕಾರಣ ಬಯಲು

ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಜೊತೆಗಿನ ಬಾಂಧವ್ಯ ಹದಗೆಟ್ಟಿದ್ದ ಕಾರಣ 2017ರಲ್ಲಿ ಅಚಾನಕ್ಕಾಗಿ ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ಮಾಜಿ ನಾಯಕ ಅನುಲ್‌ ಕುಂಬ್ಳೆ ಕೆಳಗಿಳಿದಿದ್ದರು.

ನವದೆಹಲಿ: ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಜೊತೆಗಿನ ಬಾಂಧವ್ಯ ಹದಗೆಟ್ಟಿದ್ದ ಕಾರಣ 2017ರಲ್ಲಿ ಅಚಾನಕ್ಕಾಗಿ ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ಮಾಜಿ ನಾಯಕ ಅನುಲ್‌ ಕುಂಬ್ಳೆ ಕೆಳಗಿಳಿದಿದ್ದರು.

ಅಂದು ಬಿಸಿಸಿಐ ಆಡಳಿತ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌, ಕೂಡಲೇ ಭಾರತ ಕಿರಿಯರ ಮತ್ತು ಭಾರತ 'ಎ' ತಂಡದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಅವರನ್ನು ಟೀಮ್‌ ಇಂಡಿಯಾ ಕೋಚ್‌ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದರು ಎಂಬುದನ್ನು ಇದೀಗ ಬಹಿರಂಗ ಪಡಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌, ಭವಿಷ್ಯದ ತಾರೆಗಳನ್ನು ರೂಪಿಸುವ ಉದ್ದೇಶದಿಂದ ಭಾರತ 'ಎ' ಮತ್ತು ಭಾರತ ಕಿರಿಯರ(19 ವರ್ಷದೊಳಗಿನವರ) ತಂಡದ ಮುಖ್ಯ ಕೋಚ್‌ ಆಗಿದ್ದ ಕಾರಣ ಅವರ ಮೇಲೆ ಜವಾಬ್ದಾರಿಗಳು ಹೆಚ್ಚಿದ್ದವು. ಈ ಮಧ್ಯೆ ತಮ್ಮ ಕುಟುಂಬದ ಕಡೆಗೆ ಗಮನ ನೀಡುವ ಉದ್ದೇಶದಿಂದ ಭಾರತ ತಂಡದ ಮುಖ್ಯ ಕೋಚ್‌ ಆಗಲು ನಿರಾಕರಿಸಿದ್ದರು ಎಂದು ವಿನಾದ್‌ ರಾಯ್‌ ಇದೀಗ ಹೇಳಿಕೊಂಡಿದ್ದಾರೆ. 

"ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ರಾಹುಲ್‌ ನಮ್ಮ ಆಯ್ಕೆ ಆಗಿತ್ತು. ಅಂತೆಯೇ ಅವರನ್ನ ಸಂಪರ್ಕಿಸಿದ್ದೆವು ಕೂಡ. ಆದರೆ, 'ನೋಡಿ ನನಗೆ ಇಬ್ಬರು ಬೆಳೆಯುತ್ತಿರುವ ಮಕ್ಕಳಿದ್ದಾರೆ. ಭಾರತ ತಂಡದಲ್ಲಿ ಆಡುತ್ತಿರುವಾಗ ಪ್ರವಾಸವೇ ಹೆಚ್ಚಿದ್ದ ಕಾರಣ ಅವರ ಕಡೆಗೆ ಗಮನ ನೀಡಿಲ್ಲ. ಈಗ ಮನೆಯಲ್ಲೇ ಉಳಿದು ಅವರತ್ತ ಮತ್ತು ಕುಟುಂಬದ ಕಡೆಗೆ ಗಮನ ನೀಡಬೇಕೆಂದಿದ್ದೇನೆ.' ಎಂದಿದ್ದರು. ಅವರ ಆಯ್ಕೆ ಸಮಂಜಸವಾಗಿತ್ತು ಕೂಡ. ಹೀಗಾಗಿ ನಾವು ಒತ್ತಾಯ ಮಾಡಲಿಲ್ಲ. ಇಲ್ಲವಾದರೆ ಕೋಚ್‌ ಹುದ್ದೆಗೆ ಅವರೇ ಮುಂಚೂಣಿಯಲ್ಲಿ ಇದ್ದದ್ದು," ಎಂದು ವಿನೋದ್‌ ರಾಯ್‌ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT