ಚೇತೇಶ್ವರ್ ಪೂಜಾರ 
ಕ್ರಿಕೆಟ್

3ನೇ ಟೆಸ್ಟ್, 3ನೇ ದಿನ: ಕೊಹ್ಲಿ, ಚೇತೇಶ್ವರ ಪೂಜಾರ ಬ್ಯಾಟಿಂಗ್ ಪ್ರಭಾವ, ಭಾರತದ ರನ್ ಚೇತರಿಕೆ

ಪ್ರವಾಸಿ ಭಾರತ ತಂಡ, ಆತಿಥೇಯ ಇಂಗ್ಲೆಂಡ್ ತಂಡದ ಸವಾಲನ್ನು ಮೆಟ್ಟಿ ನಿಲ್ಲುವ ಸೂಚನೆ ನೀಡಿದ್ದು, 3 3 ನೇ ದಿನ ಭರ್ಜರಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಲೀಡ್ಸ್: ಪ್ರವಾಸಿ ಭಾರತ ತಂಡ, ಆತಿಥೇಯ ಇಂಗ್ಲೆಂಡ್ ತಂಡದ ಸವಾಲನ್ನು ಮೆಟ್ಟಿ ನಿಲ್ಲುವ ಸೂಚನೆ ನೀಡಿದ್ದು, 3 3 ನೇ ದಿನ ಭರ್ಜರಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರಾ ಅವರ ಅದ್ಭುತ ಆಟದ ಪರಿಣಾಮದಿಂದ ಭಾರತ ದಿನಾಂತ್ಯಕ್ಕೆ  2 ವಿಕೆಟ್ ನಷ್ಟಕ್ಕೆ 215 ರನ್ ಗಳನ್ನು ಗಳಿಸಿದ್ದು, ಆತಿಥೇಯ ತಂಡದ ವಿರುದ್ಧ 139 ರನ್ ಗಳ ಹಿನ್ನೆಡೆ ಎದುರಿಸುತ್ತಿದೆ.

ಚೇತೇಶ್ವರ್ ಪೂಜಾರ ಸಮಯೋಚಿತ  ಆಟದ ಪರಿಣಾಮ ಶತಕದ ಸನಿಹ (91 ರನ್) ಗಳನ್ನು ಗಳಿಸಿದ್ದರೆ, ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 45 ರನ್ ಗಳಿಸಿದ್ದಾರೆ.

ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 59 ರನ್ ಗಳಿಸಿ ರಾಬಿನ್ ಸನ್ ಎಸೆತದಲ್ಲಿ ಎಲ್ ಬಿಡಬ್ಲ್ಯುಗೆ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ ಕೇವಲ 8 ರನ್ ಗಳಿಸಿ ಔಟಾದ ಪರಿಣಾಮ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತ ಎದುರಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊಹ್ಲಿ ಹಾಗೂ ಪೂಜಾರ ಅವರ ಸಮಯೋಚಿತ ಆಟದಿಂದ ಭಾರತ ಇಂಗ್ಲೆಂಡ್ ವಿರುದ್ಧದ ಹಿನ್ನೆಡೆಯ ಅಂತರವನ್ನು ಕಡಿಮೆ ಮಾಡಿಕೊಂಡಿದೆ.

ಇಂಗ್ಲೆಂಡ್ ಶುಕ್ರವಾರ ಮೊದಲ ಇನ್ನಿಂಗ್ಸ್ ನಲ್ಲಿ 432 ರನ್ ಗಳಿಗೆ ಆಲೌಟ್ ಆಗಿತ್ತು. ಮೂರನೇ ದಿನ ಇಂಗ್ಲೆಂಡ್ 8 ವಿಕೆಟ್ ಗೆ 423 ರನ್ ಗಳಿಂದ ಆಟ ಮುಂದುವರಿಸಿತು. ಕ್ರೇಗ್ ಓವರ್‌ಟನ್ ಮತ್ತು ಓಲಿ ರಾಬಿನ್ಸನ್ ಮುನ್ನಡೆ ವಿಸ್ತರಿಸಲು ಮೈದಾನ ಪ್ರವೇಶಿಸಿದರು. ಆದರೆ ಬೆಳಗಿನ ಅವಧಿಯಲ್ಲಿ ಅವರು ಕೇವಲ 3.2 ಓವರ್‌ಗಳಿಗೆ ಬ್ಯಾಟ್ ಮಾಡಲು ಸಾಧ್ಯವಾಯಿತು. ಇದರ ಫಲಿತಾಂಶವಾಗಿ ಇಂಗ್ಲೆಂಡ್ ಕೇವಲ ಒಂಬತ್ತು ರನ್ ಗಳನ್ನು ಮಾತ್ರ ಮುನ್ನಡೆಗೆ ವೃದ್ಧಿಸಿತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT