ದ್ರಾವಿಡ್ ಮತ್ತಿತರರ ಆಟಗಾರರು 
ಕ್ರಿಕೆಟ್

ರಿಷಭ್ ಪಂತ್ ಶೀಘ್ರ ಚೇತರಿಕೆಗೆ ದ್ರಾವಿಡ್, ಹಾರ್ದಿಕ್ ಸೇರಿದಂತೆ ಟೀಂ ಇಂಡಿಯಾ ಆಟಗಾರರ ಹಾರೈಕೆ- ವಿಡಿಯೋ

ಇತ್ತೀಚಿಗೆ ಭೀಕರ ಕಾರು ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ಯಾಟರ್ ರಿಷಭ್ ಪಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಕೋಚ್ ರಾಹುಲ್ ದ್ರಾವಿಡ್, ಹಾರ್ದಿಕ್ ಪಾಂಡ್ಯ, ಸೂರ್ಯ ಕುಮಾರ್ ಯಾದವ್ ಸೇರಿದಂತೆ ಅನೇಕ ಟೀಂ ಇಂಡಿಯಾ ಆಟಗಾರರು ಹಾರೈಸಿದ್ದಾರೆ. 

ನವದೆಹಲಿ: ಇತ್ತೀಚಿಗೆ ಭೀಕರ ಕಾರು ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ಯಾಟರ್ ರಿಷಭ್ ಪಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಕೋಚ್ ರಾಹುಲ್ ದ್ರಾವಿಡ್, ಹಾರ್ದಿಕ್ ಪಾಂಡ್ಯ, ಸೂರ್ಯ ಕುಮಾರ್ ಯಾದವ್ ಸೇರಿದಂತೆ ಅನೇಕ ಟೀಂ ಇಂಡಿಯಾ ಆಟಗಾರರು ಹಾರೈಸಿದ್ದಾರೆ. 

'ರಿಷಭ್ ಶೀಘ್ರವಾಗಿ ಚೇತರಿಸಿಕೊಳ್ಳುತ್ತೀಯಾ ಎಂಬ ವಿಶ್ವಾಸವಿದೆ. ಕಳೆದ ಒಂದು ವರ್ಷದಲ್ಲಿ ನಾವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಕೆಲವು ಅತ್ಯುತ್ತಮವಾದ ಇನ್ನಿಂಗ್ಸ್ ಗಳಲ್ಲಿ ನೀವು ಆಡಿರುವುದನ್ನು ನೋಡಿದ್ದೇನೆ. ಇದೊಂದು ನಿಮಗೆ ಸವಾಲು. ಈ ವರ್ಷ ಅನೇಕ ಸಂದರ್ಭಗಳಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಿರುವಂತೆಯೇ, ಈ ಸವಾಲನ್ನು ಸಾಧಿಸಿ, ಶೀಘ್ರದಲ್ಲಿಯೇ ಟೀಂ ಇಂಡಿಯಾಕ್ಕೆ ಮರಳುವುದನ್ನು ಎದುರು ನೋಡುತ್ತಿರುವುದಾಗಿ ದ್ರಾವಿಡ್ ಶುಭ ಹಾರೈಕೆಯ ವಿಡಿಯೋವನ್ನು ಬಿಸಿಸಿಐ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ. 

ಹಾರ್ದಿಕ್ ಪಾಂಡ್ಯ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶಾನ್, ಚಾಹಲ್ ಮತ್ತು ಶುಭ್ ಮನ್ ಗಿಲ್ ಶುಭ ಹಾರೈಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್  ಮೈದಾನಕ್ಕೆ ಮರಳಲು ಕೆಲವು ತಿಂಗಳು ಹಿಡಿಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಆಳಂದದಲ್ಲಿ 6000 ಮತ ಡಿಲೀಟ್ ಆರೋಪ: ಎಲ್ಲಾ ಮಾಹಿತಿ ಈಗಾಗಲೇ ಕಲಬುರಗಿ ಎಸ್‌ಪಿ ಜೊತೆ ಹಂಚಿಕೊಳ್ಳಲಾಗಿದೆ: ಕರ್ನಾಟಕ ಸಿಇಒ

46ನೇ ವಯಸ್ಸಿಗೆ ಖ್ಯಾತ ನಟ ರೋಬೋ ಶಂಕರ್ ನಿಧನ, ಕಂಬನಿ ಮಿಡಿದ ಚಿತ್ರರಂಗ

ಬೆಂಗಳೂರು ನಮ್ಮ ಮನೆ, ಬೇರೆ ಏರಿಯಾಗೆ ಸ್ಥಳಾಂತರ ಅಷ್ಟೇ: ಡಿಸಿಎಂ DKS ಎಚ್ಚರಿಕೆಗೆ ಬೆದರಿದ BlackBuck ಸಿಇಒ

ಮುಡಾ ನಿವೇಶನ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ: ED

Operation Sindoor: ಮಧ್ಯರಾತ್ರಿ ಪಾಕಿಸ್ತಾನದಲ್ಲಿ ದಾಳಿ ಮಾಡಿದ್ದೇಕೆ? ರಹಸ್ಯ ಬಿಚ್ಚಿಟ್ಟ CDS ಅನಿಲ್ ಚೌಹಾಣ್

SCROLL FOR NEXT