ಕ್ರೀಸ್ ಗೇಲ್ ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಬಿಗ್ ತ್ರೀ ಪ್ರಾಬಲ್ಯ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ: ಗೇಲ್ ಎಚ್ಚರಿಕೆ

ಬಿಗ್ ತ್ರೀಗಳಾದ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನ್ನು ಎಡೆಬಿಡದೆ ಆಡುತ್ತಿರುವುದು ಅಂತಿಮವಾಗಿ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ ಎಂದು ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಬಿಗ್ ತ್ರೀಗಳಾದ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನ್ನು ಎಡೆಬಿಡದೆ ಆಡುತ್ತಿರುವುದು ಅಂತಿಮವಾಗಿ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ ಎಂದು ಎಚ್ಚರಿಕೆ ನೀಡಿರುವ ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್ ನಂತಹ ಸಣ್ಣ ಮಂಡಳಿಯ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಭಿವೃದ್ಧಿ ಹೊಂದಲು ಉತ್ತಮ ಸಂಭಾವನೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿ-20 ಪಂದ್ಯಗಳಿಗೆ ಖ್ಯಾತರಾಗಿರುವ ಗೇಲ್, 103 ಟೆಸ್ಟ್ ಮತ್ತು 301 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟ್ ನಲ್ಲಿ ಕೇವಲ ಬಿಗ್ ತ್ರೀಗಳ ಪ್ರಾಬಲ್ಯ ಹೆಚ್ಚಿನ ಕಾಲ ಪಂದ್ಯಗಳು ನಡೆಯುವಲ್ಲಿ ಉತ್ತಮವಾದದ್ದಲ್ಲ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಂಡಿಯನ್ ಹಿರಿಯರ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ನಲ್ಲಿ ಸ್ವಲ್ವ ಬದಲಾವಣೆಯಾಗಿದೆ. ಇದೊಂದು ದೊಡ್ಡ ವ್ಯವಹಾರವಾಗಿದೆ. ಟಿ-20 ಲೀಗ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ ನಿಂದಲೂ ಅಪಾರ ಪ್ರಮಾಣದ ಹಣವನ್ನು ಬಾಚಲಾಗುತ್ತಿದೆ. ಸಣ್ಣ ತಂಡಗಳಿಗಿಂತ ದೊಡ್ಡ ತಂಡಗಳು ಹೆಚ್ಚು ಸಂಭಾವನೆ ಪಡೆಯುತ್ತವೆ, ಇದರಿಂದಾಗಿ ಅವರಿಗೆ ಅನನುಕೂಲವಾಗುತ್ತದೆ. ಇದರಲ್ಲಿ ರಚನಾತ್ಮಕತೆಯ ಅಗತ್ಯವಿದೆ. ಇದರಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ. ಅನಾನುಕೂಲಕರ ಮತ್ತು ಕೆಳ-ಶ್ರೇಯಾಂಕದ ತಂಡಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆಟಗಳನ್ನು ಆಡುವ ಅಗತ್ಯವಿದೆ. ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ಅಲ್ಲದೇ ಅವರು ಕೂಡಾ ಚೆನ್ನಾಗಿಯೇ ಆಡುವುದರಿಂದ ದೊಡ್ಡ ತಂಡಗಳಂತೆ ಆಟಗಾರರಿಗೆ ಉತ್ತಮ ವೇತನವನ್ನು ನೀಡಬೇಕಾಗಿದೆ ಎಂದರು.

ಐಸಿಸಿ ಶ್ರೇಯಾಂಕದಲ್ಲಿನ ಕೆಳ ಕ್ರಮಾಂಕದ ತಂಡಗಳು ವರ್ಷದಲ್ಲಿ ನಿರಂತರವಾಗಿ ಮೂರು ಮಾದರಿ ಆಟಗಳನ್ನು ಆಡದ ಹಿನ್ನೆಲೆಯಲ್ಲಿ ಬಿಗ್ ತ್ರೀಗಳು ಅವರನ್ನು ರಕ್ಷಿಸಬೇಕು ಎಂಬರ್ಥದಲ್ಲಿ ಗೇಲ್ ಹೇಳಿದ್ದಾರೆ. ಅಲ್ಲದೇ ಏಕದಿನ ಮಾದರಿ ಪಂದ್ಯಗಳ ಭವಿಷ್ಯವನ್ನು ಕೂಡಾ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಬಹುಮಟ್ಟಿಗೆ ಈ ಮೂರು ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ನಾವು ಹೀಗೆಯೇ ಮುಂದುವರಿದರೆ ಜನರು ನಮಗೆ ಈಗ ಹೊಸ ತಂಡ ಬೇಕು, ಹೊಸ ಪ್ರತಿಭೆಗಳು ಹೊರಗೆ ಬರಬೇಕು, ಹೆಸರು ಗಳಿಸಬೇಕು ಎಂದು ಹೇಳಲು ಹೊರಟಿದ್ದಾರೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಗ್ನಿಪರೀಕ್ಷೆಯಲ್ಲಿ ಸೋತ NDA: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸೋಲು!

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

'ಶ್ರೀಕೃಷ್ಣನ ಮುಂದೆ ಕೋಳಿ ಮಾಂಸ': ಕೇರಳದ ರೆಸ್ಟೋರೆಂಟ್ ಮಾಲೀಕನ ಬಂಧನ

Video - ಹೃದಯವಿದ್ರಾವಕ ಘಟನೆ: ವಾಲ್ಪಾರೈ ಘಾಟ್ ನಿಂದ ಕಂದಕಕ್ಕೆ ಉರುಳಿದ ವ್ಯಾನ್; 8 ಪ್ರವಾಸಿಗರು ಸಾವು

ಮಧ್ಯ ಪ್ರಾಚ್ಯ ಸಂಘರ್ಷ: Indian Stock market ಉತ್ತಮ ವಹಿವಾಟು, ಸೆನ್ಸೆಕ್ಸ್ 504 ಅಂಕ ಏರಿಕೆ, 5 ಲಕ್ಷ ಕೋಟಿ ಲಾಭ

SCROLL FOR NEXT