ಟೀಂ ಇಂಡಿಯಾ PTI
ಕ್ರಿಕೆಟ್

ಬಾಂಗ್ಲಾ ವಿರುದ್ಧ ಭಾರತ ಸಾರ್ವಕಾಲಿಕ ದಾಖಲೆ: T20I ಗೆಲುವಿನೊಂದಿಗೆ 3-0 ಕ್ಲೀನ್ ಸ್ವೀಪ್!

ಇದು T20I ಕ್ರಿಕೆಟ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಯಾವುದೇ ತಂಡ ಸಾಧಿಸದ ಅತಿ ದೊಡ್ಡ ಗೆಲುವಾಗಿದೆ. ಬಾಂಗ್ಲಾ ವಿರುದ್ಧದ ಹಿಂದಿನ ಅತಿದೊಡ್ಡ ಗೆಲುವು ದಕ್ಷಿಣ ಆಫ್ರಿಕಾಕ್ಕೆ ಸೇರಿದ್ದು, ಅವರು 2022ರ ಟಿ20 ವಿಶ್ವಕಪ್‌ನಲ್ಲಿ 104 ರನ್‌ಗಳ ಅಂತರದಿಂದ ಗೆಲುವ ಸಾಧಿಸಿದ್ದರು.

ಹೈದರಾಬಾದ್‌ನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶ ವಿರುದ್ಧದ ಬೃಹತ್ ಜಯದೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಸಂವೇದನಾಶೀಲ ಬ್ಯಾಟಿಂಗ್ ಪ್ರದರ್ಶನ ಮತ್ತು ನಂತರ ಬೌಲಿಂಗ್ ನಲ್ಲೂ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಆತಿಥೇಯರು ಬಾಂಗ್ಲಾ ತಂಡವನ್ನು 133 ರನ್‌ಗಳ ಅಂತರದೊಂದಿಗೆ ಜಯ ಗಳಿಸಿದೆ.

ಇದು T20I ಕ್ರಿಕೆಟ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಯಾವುದೇ ತಂಡ ಸಾಧಿಸದ ಅತಿ ದೊಡ್ಡ ಗೆಲುವಾಗಿದೆ. ಬಾಂಗ್ಲಾ ವಿರುದ್ಧದ ಹಿಂದಿನ ಅತಿದೊಡ್ಡ ಗೆಲುವು ದಕ್ಷಿಣ ಆಫ್ರಿಕಾಕ್ಕೆ ಸೇರಿದ್ದು, ಅವರು 2022ರ ಟಿ20 ವಿಶ್ವಕಪ್‌ನಲ್ಲಿ 104 ರನ್‌ಗಳ ಅಂತರದಿಂದ ಗೆಲುವ ಸಾಧಿಸಿದ್ದರು.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದರು. ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿ ಶತಕ ಸಿಡಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 75 ರನ್ ಗಳಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 173 ರನ್‌ಗಳ ಜೊತೆಯಾಟವಾಡಿದರು.

ಈ ಇಬ್ಬರು ಬ್ಯಾಟರ್‌ಗಳು ಪವರ್‌ಪ್ಲೇ ಮತ್ತು ಹೆಚ್ಚಿನ ಮಧ್ಯಮ ಓವರ್‌ಗಳಲ್ಲಿ ತಂಡವನ್ನು ಮುನ್ನಡೆಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ರಿಯಾನ್ ಪರಾಗ್ ಮಧ್ಯಮ ಹಂತ ಮತ್ತು ಡೆತ್ ಓವರ್‌ಗಳ ಕೊನೆಯ ಭಾಗದಲ್ಲಿ ಬ್ಯಾಟ್ ಬೀಸಿದರು. ಹಾರ್ದಿಕ್ 18 ಎಸೆತಗಳಲ್ಲಿ 47 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು, ಆತಿಥೇಯರು 300 ರನ್‌ಗಳ ಗಡಿಗೆ ಕೇವಲ ಮೂರು ರನ್‌ಗಳ ಅಂತರವನ್ನು ಕಳೆದುಕೊಂಡಿತು.

ಭಾರತ ನೀಡಿದ 298 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಾಂಗ್ಲಾ ಪರ ಲಿಟನ್ ದಾಸ್ 42, ತೌಹಿದ್ ಹೃದಯೊಯ್ ಅಜೇಯ 63 ರನ್ ಗಳಿಸಿದ್ದಾರೆ. ಭಾರತದ ಪರ ಬೌಲಿಂಗ್ ನಲ್ಲಿ ರವಿ ಬಿಷ್ಣೋಯ್ 3, ಮಾಯಾಂಕ್ ಯಾದವ್ 2 ವಿಕೆಟ್ ಪಡೆದಿದ್ದಾರೆ. ಮೂರು ಪಂದ್ಯಗಳ ಟಿ20 ಪಂದ್ಯದಲ್ಲಿ ಭಾರತ 3-0 ಅತಂರದಿಂದ ಕ್ಲೀನ್ ಸ್ವಿಪ್ ಸಾಧನೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT