ಚೆನ್ನೈ ಸೂಪರ್ ಕಿಂಗ್ಸ್ ತಂಡ 
ಕ್ರಿಕೆಟ್

IPL 2025: ಎಂಎಸ್ ಧೋನಿ ವಿಚಾರದಲ್ಲಿ CSK ತಪ್ಪು ಮಾಡಿದೆ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗ ಅಭಿಪ್ರಾಯ

ಎಂಎಸ್ ಧೋನಿ ಸ್ಟಂಪ್ಸ್ ಹಿಂದೆ ಎಂದಿನಂತೆ ವೇಗವಾಗಿ ಕಾಣಿಸುತ್ತಿದ್ದರೂ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 220.55 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್‌ಡಿ ಈ ಆವೃತ್ತಿಯಲ್ಲಿ 138.18 ರ ಸ್ಟ್ರೈಕ್ ರೇಟ್‌‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ 'ಫಿನಿಷರ್' ಎಂದೇ ಖ್ಯಾತಿ ಗಳಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಇದೀಗ ಐಪಿಎಲ್ 2025ನೇ ಆವೃತ್ತಿಯ ಸತತ ಮೂರನೇ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ರನ್ ಚೇಸ್‌ಗೆ ಕೊಡುಗೆ ನೀಡುವಲ್ಲಿ ವಿಫಲವಾಗಿದ್ದಾರೆ. ಐದು ಬಾರಿಯ ಚಾಂಪಿಯನ್‌ ಆಗಿರುವ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಗೆಲುವಿನೊಂದಿಗೆ ಈ ಆವೃತ್ತಿಯನ್ನು ಶುಭಾರಂಭ ಮಾಡಿತ್ತು. ಆದರೆ, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ರಾಜಸ್ಥಾನ ರಾಯಲ್ಸ್ (RR) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಮೂರು ಪಂದ್ಯಗಳಲ್ಲಿ ಚೇಸಿಂಗ್ ಮಾಡುವಾಗ ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಎಂಎಸ್ ಧೋನಿ ಸ್ಟಂಪ್ಸ್ ಹಿಂದೆ ಎಂದಿನಂತೆ ವೇಗವಾಗಿ ಕಾಣಿಸುತ್ತಿದ್ದರೂ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 220.55 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್‌ಡಿ ಈ ಆವೃತ್ತಿಯಲ್ಲಿ 138.18 ರ ಸ್ಟ್ರೈಕ್ ರೇಟ್‌‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಔಟ್ ಆಗುತ್ತಿದ್ದಾರೆ.

IANS ಜೊತೆ ಮಾತನಾಡಿರುವ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್, ಧೋನಿ ಸ್ವಲ್ಪ ಸಮಯದ ಹಿಂದೆಯೇ ಐಪಿಎಲ್‌ಗೆ ವಿದಾಯ ಹೇಳಬೇಕಿತ್ತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಲತೀಫ್, ವಿಕೆಟ್ ಕೀಪರ್ ಪಾತ್ರವನ್ನು ಈಗ ಕಿರಿಯ ಆಟಗಾರನಿಗೆ ವಹಿಸಬೇಕು ಎಂದು ಹೇಳಿದ್ದಾರೆ.

'ಅವರು ಬಹಳ ಹಿಂದೆಯೇ ತಂಡವನ್ನು ಬಿಡಬೇಕಿತ್ತು. ವಿಕೆಟ್ ಕೀಪರ್ ವಯಸ್ಸು ಸಾಮಾನ್ಯವಾಗಿ 35 ವರ್ಷಗಳು. ನಾನು ಇದಕ್ಕೆ ಒಂದು ಉದಾಹರಣೆ. ನಾನು ಟಿವಿಯಲ್ಲಿದ್ದರೆ ನಾನೊಬ್ಬ ಪ್ರದರ್ಶಕ ಮತ್ತು ನಾನು ಅದನ್ನು ಉತ್ತಮವಾಗಿ ಮಾಡದಿದ್ದರೆ ನನ್ನ ಖ್ಯಾತಿ ಕುಸಿಯುತ್ತದೆ. ನೀವು 15 ವರ್ಷಗಳಿಂದ ಇದನ್ನು ಮಾಡಿದ್ದರೂ ಸಹ, ಯುವ ಪೀಳಿಗೆ ಪ್ರಭಾವಿತವಾಗುವುದಿಲ್ಲ' ಎಂದು ತಿಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇತರ ಆಟಗಾರರಿಗಿಂತ ಎಂಎಸ್ ಧೋನಿ ಅವರಿಗೆ ಆದ್ಯತೆ ನೀಡಿ, ಅವರನ್ನು ಆಯ್ಕೆ ಮಾಡುವುದನ್ನು ಮುಂದುವರಿಸುವುದು 'ಕ್ರಿಕೆಟ್ ಆಟಕ್ಕೆ ಅನ್ಯಾಯ' ಮಾಡಿದಂತಾಗುತ್ತದೆ ಎಂದು ರಶೀದ್ ಲತೀಫ್ ಹೇಳಿದ್ದಾರೆ.

'ಧೋನಿ ಅವರ ಆಟವು 2019ರ ಏಕದಿನ ವಿಶ್ವಕಪ್ ನಲ್ಲೂ ಅವರ ತಂಡಕ್ಕೆ ಪ್ರಯೋಜನವಾಗಲಿಲ್ಲ. ಆಗಲೇ ಅವರು ಅರ್ಥಮಾಡಿಕೊಳ್ಳಬೇಕಿತ್ತು. ನೀವು ತಂಡದ ಬದಲು ಒಬ್ಬ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಅದು ಆಟಕ್ಕೆ ಅನ್ಯಾಯ ಮಾಡಿದಂತಾಗುತ್ತದೆ, ಅದಕ್ಕಾಗಿಯೇ ಅವರು ಟ್ರೋಲ್ ಆಗುತ್ತಿದ್ದಾರೆ' ಎಂದರು.

'ನಾನು 2-3 ಪಂದ್ಯಗಳನ್ನು ನೋಡಿದ್ದೇನೆ. ಧೋನಿ ಬಂದಾಗ ಪ್ರೇಕ್ಷಕರು ತುಂಬಾ ಜೋರಾಗಿರುತ್ತಾರೆ. ಆದರೆ, CSKಗೆ ಈಗ ಅಂಕಗಳು ಬೇಕಾಗುತ್ತವೆ. ಅವರು ಪಾಯಿಂಟ್ಸ್ ಟೇಬಲ್‌ನ ಕೆಳಭಾಗದಲ್ಲಿದ್ದಾರೆ. ನಿಮ್ಮ ಗಮನ ಕೇವಲ ಒಂದು ಅಥವಾ ಎರಡು ಆಟಗಾರರ ಮೇಲಿದ್ದರೆ, ನೀವು ಸಮಯದ ಅಗತ್ಯವನ್ನು ಅರಿತುಕೊಳ್ಳಬೇಕು' ಎಂದು ಒತ್ತಿಹೇಳಿದರು.

ದೆಹಲಿ ವಿರುದ್ಧದ ಸೋಲಿನ ನಂತರ ಧೋನಿ ನಿವೃತ್ತಿಯಾಗುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಚೆನ್ನೈ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ವಿಷಯದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದರು ಮತ್ತು ಧೋನಿ ಯಾವಾಗ ನಿವೃತ್ತಿ ಹೊಂದುತ್ತಾರೆಂದು ತಮಗೆ ತಿಳಿದಿಲ್ಲ ಎಂದು ಹೇಳಿದರು.

'ಇಲ್ಲ, ಅದನ್ನು ಕೊನೆಗಾಣಿಸುವುದು ನನ್ನ ಪಾತ್ರವಲ್ಲ. ನನಗೆ ತಿಳಿದಿಲ್ಲ. ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಇನ್ನೂ ಆನಂದಿಸುತ್ತಿದ್ದೇನೆ. ಅವರು ಇನ್ನೂ ಬಲಶಾಲಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಕೇಳುವುದಿಲ್ಲ. ಅದನ್ನು ಕೇಳುತ್ತಿರುವವರು ನೀವೇ' ಎಂದು ಪಂದ್ಯದ ನಂತರ ಫ್ಲೆಮಿಂಗ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಸಜೀವ ದಹನ, ತನಿಖೆಗೆ ಆದೇಶ

ಗೋವಾ ನೈಟ್ ಕ್ಲಬ್​ ಅಗ್ನಿ ದುರಂತ: ಪ್ರಧಾನಿ ಮೋದಿ, ರಾಷ್ಟ್ರಪತಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

SCROLL FOR NEXT