ರೋಹಿತ್ ಶರ್ಮಾ 
ಕ್ರಿಕೆಟ್

ಟೆಸ್ಟ್‌ ಕ್ರಿಕೆಟ್‌ಗೆ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಣೆಗೆ BCCI ಕಾರಣ?; ತಂಡದ ಮಾಜಿ ಮ್ಯಾನೇಜರ್ ಹೇಳಿದ್ದೇನು?

ರೋಹಿತ್ ಇನ್ನೂ ಏಕದಿನ ಪಂದ್ಯಗಳಲ್ಲಿ ಸಕ್ರಿಯ ಆಟಗಾರ ಮತ್ತು ವಾಸ್ತವವಾಗಿ ತಂಡದ ನಾಯಕ. 2027ರ ವಿಶ್ವಕಪ್‌ಗೆ ಅವರು ಹೇಗೆ ರೂಪುಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಅವರ ಹಠಾತ್ ನಿವೃತ್ತಿ ಘೋಷಣೆಯ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪಾತ್ರವಿರಬಹುದು ಎಂಬ ಗೊಣಗಾಟಗಳು ಕೇಳಿಬಂದಿವೆ. ಆದರೆ, ಘಟನೆ ನಡೆದ ಕೆಲವು ತಿಂಗಳ ನಂತರ ಇದೀಗ ಸತ್ಯ ಹೊರಬಂದಿದೆ. ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ವೇಳೆ ತಂಡದ ವ್ಯವಸ್ಥಾಪಕರಾಗಿದ್ದವರು, ರೋಹಿತ್ ಅವರ ನಿವೃತ್ತಿ ಘೋಷಣೆಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆಯಲ್ಲಿ ರೋಹಿತ್ ಶರ್ಮಾ ರನ್ ಗಳಿಸಲು ಹೆಣಗಾಡುತ್ತಿದ್ದರು.

ಜಯದೇವ್ ಶಾ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದು, ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಹಿಂದೆ ವೈಯಕ್ತಿಕ ಕಾರಣವಿದೆ ಎಂದಿದ್ದಾರೆ. 'ಅವರಿಗೆ (ರೋಹಿತ್) ಮಗು ಜನಿಸಿತು, ಆದರೂ ಅವರು ಹಿಂತಿರುಗಿದರು ಮತ್ತು ಅವರಿಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಫಾರ್ಮ್‌ನಲ್ಲಿಲ್ಲದ ಕಾರಣ ಅವರು ಕೊನೆಯ ಟೆಸ್ಟ್ (ಸಿಡ್ನಿ) ನಿಂದ ಹೊರಗುಳಿದರು. ಆದರೆ, ನಂತರ ಅವರು ನಾಯಕನಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರು. ಅವರು ರೆಡ್ ಬಾಲ್‌ಗಿಂತ ಹೆಚ್ಚಾಗಿ ಬಿಳಿ ಚೆಂಡನ್ನು ಆಡುವ ಮತ್ತು ಇನ್ನೊಬ್ಬ ಕ್ರಿಕೆಟಿಗನಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ಅವರಿಗೆ ಅನ್ನಿಸಿತ್ತು ಎಂದು ನಾನು ಭಾವಿಸುತ್ತೇನೆ' ಎಂದರು.

'ಮುಂದಿನ ಚಾಂಪಿಯನ್‌ಶಿಪ್‌ಗಾಗಿ ತಂಡವನ್ನು ಸಿದ್ಧಪಡಿಸಬೇಕು. ಅದಕ್ಕಿನ್ನು ಎರಡು ವರ್ಷ ಬಾಕಿಯಿದ್ದು, ಅದಕ್ಕಾಗಿ ಹೊಸ ಆಟಗಾರರು ಸಿದ್ಧರಾಗಿ ಅಲ್ಲಿಗೆ ಹೋದರೆ ಉತ್ತಮ ಎಂಬಂತಹ ವಿಷಯಗಳನ್ನು ಮಂಡಳಿ ಪರಿಗಣಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಮುಂದಿನ ಎರಡು ವರ್ಷಗಳ ಕಾಲ ಟೆಸ್ಟ್‌ನಲ್ಲಿ ಮುಂದುವರಿಯಲು ಸ್ವತಃ ರೋಹಿತ್ ಅವರಿಗೆ ಇಷ್ಟವಿರಲಿಲ್ಲ' ಎಂದರು.

'ಮತ್ತು ರೋಹಿತ್ ಇನ್ನೂ ಎರಡು ವರ್ಷಗಳ ಕಾಲ ಅದನ್ನು ಸಹಿಸಿಕೊಳ್ಳಬಲ್ಲರು ಎಂದು ತೋರುತ್ತಿರಲಿಲ್ಲ. ಅವರಿಗೂ ಗಾಯವಾಗಿತ್ತು. ಅದರಿಂದಾಗಿ ಅವರು ಎರಡು ಐಪಿಎಲ್ ಪಂದ್ಯಗಳನ್ನು ಆಡಲಿಲ್ಲ. ಅವರು ಹಾಗೆ ಯೋಚಿಸಿದರು ಮತ್ತು ಹೊಸ ಆಟಗಾರರೊಂದಿಗೆ ತಂಡವು ಬೆಳೆಯಲು ಮತ್ತು ಉತ್ತಮವಾಗಿ ಕಟ್ಟಲು ಅವಕಾಶ ಮಾಡಿಕೊಟ್ಟರು ಎಂದು ನಾನು ಭಾವಿಸುತ್ತೇನೆ. ಅಂತಹ ದೊಡ್ಡ ನಿರ್ಧಾರಗಳನ್ನು ರೋಹಿತ್‌ನಂತಹ ಜನರು ಸ್ವತಃ ತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು.

ಆದರೆ, ರೋಹಿತ್ ಇನ್ನೂ ಏಕದಿನ ಪಂದ್ಯಗಳಲ್ಲಿ ಸಕ್ರಿಯ ಆಟಗಾರ ಮತ್ತು ವಾಸ್ತವವಾಗಿ ತಂಡದ ನಾಯಕ. 2027ರ ವಿಶ್ವಕಪ್‌ಗೆ ಅವರು ಹೇಗೆ ರೂಪುಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT