ಪತ್ನಿ ಭುವನೇಶ್ವರಿ ಜೊತೆ ಶ್ರೀಶಾಂತ್ 
ಕ್ರಿಕೆಟ್

18 ವರ್ಷಗಳ ಹಳೆಯ ವಿಡಿಯೋ ರಿಲೀಸ್ ಮಾಡಿದ ಲಲಿತ್ ಮೋದಿ; ಅಮಾನವೀಯ ನಡೆ ಎಂದ ಶ್ರೀಶಾಂತ್ ಪತ್ನಿ

ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ಸಮಯದಲ್ಲಿ ಹರ್ಭಜನ್ ಸಿಂಗ್ ವೇಗಿಗೆ ಕಪಾಳಮೋಕ್ಷ ಮಾಡಿದ್ದರು. ಆಗ ಹರ್ಭಜನ್ ಮುಂಬೈ ತಂಡದ ನಾಯಕರಾಗಿದ್ದರು ಮತ್ತು ಅವರ ತಂಡವು ಪಂಜಾಬ್ ವಿರುದ್ಧ 66 ರನ್‌ಗಳ ಸೋಲನ್ನು ಎದುರಿಸಿತ್ತು.

ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರ ಪತ್ನಿ ಭುವನೇಶ್ವರಿ ಶ್ರೀಶಾಂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಆಯುಕ್ತ ಲಲಿತ್ ಮೋದಿ ಮತ್ತು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕೆಲ್ ಕ್ಲಾರ್ಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ವಿಡಿಯೋವನ್ನು ಬಹಿರಂಗಪಡಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಲಿತ್ ಮೋದಿ-ಕ್ಲಾರ್ಕ್ ಅವರ ಕೃತ್ಯವನ್ನು 'ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ' ಎಂದು ಬಣ್ಣಿಸಿದ್ದಾರೆ.

ಆಸೀಸ್ ದಂತಕಥೆಯ ಬಿಯಾಂಡ್23 ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ಲಲಿತ್ ಮೋದಿ ಮತ್ತು ಕ್ಲಾರ್ಕ್ ಅವರು ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಪಂಜಾಬ್ ಕಿಂಗ್ಸ್ (ಆಗ ಕಿಂಗ್ಸ್ ಇಲೆವೆನ್ ಪಂಜಾಬ್) ನಡುವಿನ ಐಪಿಎಲ್ 2008 ನೇ ಆವೃತ್ತಿಯ ಪಂದ್ಯದ ವೇಳೆ ನಡೆದ ಘಟನೆಯೊಂದರ ಹಿಂದೆಂದೂ ನೋಡಿರದ ದೃಶ್ಯಗಳನ್ನು ಬಹಿರಂಗಪಡಿಸಿದರು.

ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ಸಮಯದಲ್ಲಿ ಹರ್ಭಜನ್ ಸಿಂಗ್ ವೇಗಿಗೆ ಕಪಾಳಮೋಕ್ಷ ಮಾಡಿದ್ದರು. ಆಗ ಹರ್ಭಜನ್ ಮುಂಬೈ ತಂಡದ ನಾಯಕರಾಗಿದ್ದರು ಮತ್ತು ಅವರ ತಂಡವು ಪಂಜಾಬ್ ವಿರುದ್ಧ 66 ರನ್‌ಗಳ ಸೋಲನ್ನು ಎದುರಿಸಿತ್ತು.

ಘಟನೆಯ ನಂತರ ಶ್ರೀಶಾಂತ್ ಕಣ್ಣೀರು ಹಾಕಿದರು. ಪಂಜಾಬ್ ತಂಡದ ನಾಯಕ ಮತ್ತು ಶ್ರೀಲಂಕಾದ ದಂತಕಥೆ ಮಹೇಲ ಜಯವರ್ಧನೆ ಅವರನ್ನು ಸಮಾಧಾನಪಡಿಸಿದ್ದರು. ಈ ಘಟನೆ ವ್ಯಾಪಕವಾಗಿ ಸುದ್ದಿಯಾಗಿದ್ದರೂ ವಿಡಿಯೋ ಲಭ್ಯವಾಗಿರಲಿಲ್ಲ. ಇದೀಗ 18 ವರ್ಷಗಳ ನಂತರ ಆ ವಿಡಿಯೋ ಬಹಿರಂಗಗೊಂಡಿದೆ.

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಭುವನೇಶ್ವರಿ, 'ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್ ಅವರಿಗೆ ನಾಚಿಕೆಯಾಗಬೇಕು. ಅಗ್ಗದ ಪ್ರಚಾರ ಮತ್ತು ಅಭಿಪ್ರಾಯ ಪಡೆಯಲು 2008ರಲ್ಲಿ ನಡೆದ ಘಟನೆಯನ್ನು ಎಳೆದುತಂದಿರುವ ನೀವು ಮನುಷ್ಯರೇ ಅಲ್ಲ. ಶ್ರೀಶಾಂತ್ ಮತ್ತು ಹರ್ಭಜನ್ ಇಬ್ಬರೂ ಬಹಳ ಹಿಂದೆಯೇ ಬದಲಾಗಿದ್ದಾರೆ. ಅವರಿಗೆ ಈಗ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನೀವು ಅವರನ್ನು ಮತ್ತೆ ಹಳೆಯ ಗಾಯವನ್ನು ಕೆರೆಯಲು ಪ್ರಯತ್ನಿಸುತ್ತೀರಿ. ಇದು ಸಂಪೂರ್ಣವಾಗಿ ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ' ಎಂದಿದ್ದಾರೆ.

ಮತ್ತೊಂದು ಸ್ಟೋರಿಯಲ್ಲಿ, 'ಈ ದೃಶ್ಯಗಳ ಹೊರಹೊಮ್ಮುವಿಕೆ ತನ್ನ ಕುಟುಂಬಕ್ಕೆ 'ನೋವುಂಟುಮಾಡಿದೆ' ಮತ್ತು ಆಟಗಾರರನ್ನು ನೋಯಿಸುವುದಲ್ಲದೆ, ತಮ್ಮದಲ್ಲದ ತಪ್ಪಿಗೆ ಈಗ ಪ್ರಶ್ನೆಗಳನ್ನು ಮತ್ತು ಅವಮಾನವನ್ನು ಎದುರಿಸಬೇಕಾದ ಪರಿಸ್ಥಿತಿ ಅವರ ಮುಗ್ಧ ಮಕ್ಕಳಿಗೆ ಬಂದಿದೆ. ಅವರನ್ನು ಗಾಯಗೊಳಿಸಿದ್ದಕ್ಕಾಗಿ ಇಬ್ಬರ ಮೇಲೂ ಮೊಕದ್ದಮೆ ಹೂಡಬೇಕು' ಎಂದು ಹೇಳಿದ್ದಾರೆ.

ಈ ಘಟನೆಯಿಂದಾಗಿ ಹರ್ಭಜನ್ ಸಿಂಗ್ ಅವರನ್ನು ಎಂಟು ಪಂದ್ಯಗಳಿಂದ ನಿಷೇಧ ಹೇರಲಾಯಿತು. 'ಭಜ್ಜಿ' ಅವರಿಗೆ ನಿಷೇಧ ವಿಧಿಸಿದ ಬಗ್ಗೆ ಮಾತನಾಡಿದ ಮೋದಿ, ಘಟನೆಯು ಆಕ್ರಮಣಕಾರಿಯಾಗಿದೆ ಮತ್ತು ಬೌಂಡರಿಗಳನ್ನು ಹೊಂದಿಸುವ ಅಗತ್ಯವಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ 'PPP' ಮಾದರಿಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು: ಸರ್ಕಾರದ ಪ್ರಸ್ತಾವನೆಗೆ ಶಿಕ್ಷಣ ತಜ್ಞರ ಆಕ್ಷೇಪ!

ಬೆಂಗಳೂರಿನ ಮೂಲಸೌಕರ್ಯ ಬಗ್ಗೆ ಟೀಕೆ: ನಾವು ಹೇಗಿದ್ವಿ, ಹೇಗಾದ್ವಿ? ಅನ್ನೋದನ್ನ ಮರೆತು ಮಾತಡ್ತಾರೆ; ಉದ್ಯಮಿ ಗಳಿಗೆ ಡಿಕೆಶಿ ಟಾಂಗ್!

ಬಿಜೆಪಿ ವಿರುದ್ಧ ‘ವೋಟ್ ಚೋರ್ ಗದ್ದಿ ಚೋಡ್ ’: ಪ್ರತಿ ಕ್ಷೇತ್ರದಲ್ಲಿ 2 ಲಕ್ಷ ಸಹಿ ಸಂಗ್ರಹಿಸಲು ಶಿವಕುಮಾರ್ ಟಾರ್ಗೆಟ್!

Big step or big threat? ರಷ್ಯಾದಿಂದ ತೈಲ ಖರೀದಿ, ಭಾರತಕ್ಕೆ ಮತ್ತೆ ಭಾರಿ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್!

ಅಕ್ಟೋಬರ್ 31ರವರೆಗೆ 'ಜಾತಿ ಗಣತಿ' ಸಮೀಕ್ಷೆ ವಿಸ್ತರಣೆ: ಸಮೀಕ್ಷಾದಾರರಿಗೆ ಇಂದಿನಿಂದ ಮೂರು ದಿನ ರಜೆ!

SCROLL FOR NEXT