ವಿನೋದ್ ಕಾಂಬ್ಳಿ-ಆಂಡ್ರಿಯಾ 
ಕ್ರಿಕೆಟ್

ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯಾ ವಿಚ್ಛೇದನ ಅರ್ಜಿ ವಾಪಸ್; ಈ ದಿಢೀರ್ ನಿರ್ಧಾರಕ್ಕೆ ಭೇಷ್ ಎಂದ ನೆಟ್ಟಿಗರು!

2006ರಲ್ಲಿ ವಿದೇಶಿ ಮಾಡೆಲ್ ಆಂಡ್ರಿಯಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು. 2014ರಲ್ಲಿ ಇಬ್ಬರೂ ಸಾಂಪ್ರದಾಯಿಕ ಕ್ರಿಶ್ಚಿಯನ್ ಶೈಲಿಯಲ್ಲಿ ವಿವಾಹವಾಗಿದ್ದರು.

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕಳೆದ ಕೆಲವು ದಿನಗಳಿಂದ ತಮ್ಮ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಸುದ್ದಿಯಲ್ಲಿದ್ದಾರೆ. ಈ ಕಷ್ಟದ ಸಮಯದಲ್ಲಿ ಅವರ ಪತ್ನಿ ಅವರನ್ನು ನೋಡಿಕೊಳ್ಳುತ್ತಿರುವ ರೀತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ವಿನೋದ್ ಕಾಂಬ್ಳಿ ಎರಡು ಬಾರಿ ವಿವಾಹವಾಗಿದ್ದು ಎರಡೂ ವಿವಾಹಗಳು ವಿವಾದಗಳಿಂದ ಸುತ್ತುವರೆದಿವೆ.

52 ವರ್ಷದ ವಿನೋದ್ ಕಾಂಬ್ಳಿ 2006ರಲ್ಲಿ ವಿದೇಶಿ ಮಾಡೆಲ್ ಆಂಡ್ರಿಯಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು. 2014ರಲ್ಲಿ ಇಬ್ಬರೂ ಸಾಂಪ್ರದಾಯಿಕ ಕ್ರಿಶ್ಚಿಯನ್ ಶೈಲಿಯಲ್ಲಿ ವಿವಾಹವಾಗಿದ್ದರು. ವಿನೋದ್ ಕಾಂಬ್ಳಿ ಮತ್ತು ಆಂಡ್ರಿಯಾ ಕೂಡ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರು. ಒಂದು ಕಾಲದಲ್ಲಿ ಆಂಡ್ರಿಯಾ ವಿನೋದ್ ಕಾಂಬ್ಳಿ ಮೇಲೆ ಎಷ್ಟು ಅಸಮಾಧಾನಗೊಂಡಿದ್ದಳೆಂದರೆ, ವಿನೋದ್ ಕಾಂಬ್ಳಿಯಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ವಿನೋದ್ ಕಾಂಬ್ಳಿ ಅವರ ಪತ್ನಿ ಆಂಡ್ರಿಯಾ ಭಾಗವಹಿಸಿದ್ದರು. ಅಲ್ಲಿ ಅವರು ಕಾಂಬ್ಳಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಸಂಭಾಷಣೆಯ ಸಮಯದಲ್ಲಿ, ಆಂಡ್ರಿಯಾ 2023ರಲ್ಲಿ ವಿನೋದ್ ಕಾಂಬ್ಳಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾಗಿ ಹೇಳಿದರು. ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರಂತೆ.

ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನಂತರ, ತಾನು ಕಾಂಬ್ಳಿಯ ಮನೆಯನ್ನು ತೊರೆದಿದ್ದೆ. ಕಾಂಬ್ಳಿಯೊಂದಿಗೆ ಮಾತನಾಡುವುದನ್ನು ಸಹ ನಿಲ್ಲಿಸಿದ್ದೇನೆ ಎಂದು ಆಂಡ್ರಿಯಾ ಸಂದರ್ಶನದಲ್ಲಿ ಹೇಳಿದ್ದಾರೆ. ಮನೆಯಿಂದ ಹೊರಬಂದ ನಂತರವೂ ತಾನೂ ಕಾಂಬ್ಳಿಯ ಬಗ್ಗೆ ಮಾತ್ರ ಯೋಚಿಸುತ್ತಿದ್ದಳಂತೆ. ಕಾಂಬ್ಳಿ ಊಟ ತಿಂದಿದ್ದಾರೋ ಇಲ್ಲವೋ ಮತ್ತು ಅವರ ಆರೋಗ್ಯ ಹೇಗಿದೆ ಎಂದು ಅವಳು ಯೋಚಿಸಿದಳು. ತನ್ನ ಬಗ್ಗೆಯೇ ಚಿಂತೆಗೀಡಾಗಿ, ಅವಳು ಕಾಂಬ್ಳಿಯ ಮನೆಗೆ ಹಿಂತಿರುಗುತ್ತಾಳೆ. ಕಾಂಬ್ಳಿ ಪರಿಸ್ಥಿತಿ ನೋಡಿದಾಗ, ಈ ಕ್ಷಣದಲ್ಲಿ ಅವರಿಗೆ ನನ್ನ ಅವಶ್ಯಕತೆ ಇದೆ ಎಂದು ಅರ್ಥವಾಯಿತು. ಕಾಂಬ್ಳಿ ನನಗೆ ನನ್ನ ಮಗುವಿನಂತೆ, ನಾನು ಅವರನ್ನು ಬಿಟ್ಟು ಹೋಗಲು ಅಥವಾ ಬಿಡಲು ಸಾಧ್ಯವಿಲ್ಲ ಎಂದು ಆಂಡ್ರಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT