ರಾಬಿನ್ ಉತ್ತಪ್ಪ 
ಕ್ರಿಕೆಟ್

IPL 2025: 'ಕ್ಯಾಚ್ ಕೈಬಿಟ್ಟ ನಂತರ...'; ಶುಭಮನ್ ಗಿಲ್ ನಾಯಕತ್ವದ ಬಗ್ಗೆ ರಾಬಿನ್ ಉತ್ತಪ್ಪ ಅಸಮಾಧಾನ

'ಜಿಟಿಯ ತಂತ್ರವು ಪೂರ್ವಭಾವಿಯಾಗಿರುವುದಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ಪ್ರಸಿದ್ಧ್ ಅವರನ್ನು ಪವರ್‌ಪ್ಲೇನಲ್ಲಿ ಬಳಸಿದ್ದು ತಪ್ಪು ಹೆಜ್ಜೆಯಾಗಿತ್ತು' ಎಂದರು.

ಐಪಿಎಲ್ 2025ರ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡವು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 20 ರನ್‌ಗಳ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ನಂತರ, ಭಾರತದ ಮಾಜಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ, ಶುಭಮನ್ ಗಿಲ್ ನೇತೃತ್ವದ ತಂಡವು ಕ್ಯಾಚಿಂಗ್ ಲ್ಯಾಪ್ಸ್‌ನಿಂದ ಮತ್ತು ತಂತ್ರದಲ್ಲಿನ ದೋಷಗಳಿಂದ ಬಳಲುತ್ತಿದ್ದು, ಚಾಂಪಿಯನ್‌ಶಿಪ್ ಗೆಲ್ಲುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಸಂಜೆ ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ, ಜಿಟಿ ಮೂರು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟಿತು. ಅವುಗಳಲ್ಲಿ ಎರಡು ರೋಹಿತ್ ಶರ್ಮಾ ಅವರದ್ದಾಗಿತ್ತು, ಅವರು 50 ಎಸೆತಗಳಲ್ಲಿ 81 ರನ್ ಗಳಿಸಿದರು. ಮತ್ತೊಂದು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಆಗಿತ್ತು. ಮಧ್ಯಮ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪ್ರಸಿದ್ಧ್ ಕೃಷ್ಣ ಅವರನ್ನು ಹೊಸ ಬಾಲ್‌ನಲ್ಲಿ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಲು ಹೇಳಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ರೋಹಿತ್ ಶರ್ಮಾ ಮತ್ತು ಜಾರಿ ಬೈರ್‌ಸ್ಟೋವ್ ಉತ್ತಮ ಪ್ರದರ್ಶನ ನೀಡಿದರು.

'ಜಿಟಿಯ ತಂತ್ರವು ಪೂರ್ವಭಾವಿಯಾಗಿರುವುದಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ಪ್ರಸಿದ್ಧ್ ಅವರನ್ನು ಪವರ್‌ಪ್ಲೇನಲ್ಲಿ ಬಳಸಿದ್ದು ತಪ್ಪು ಹೆಜ್ಜೆಯಾಗಿತ್ತು' ಎಂದರು.

'ಅವರ ಮೊದಲ ಓವರ್ ದುಬಾರಿಯಾಗಿತ್ತು ಮತ್ತು ಅವರು ಕೋರ್ಸ್-ಕರೆಕ್ಟ್ ಮಾಡುವಲ್ಲಿ ವಿಫಲರಾದರು. 26 ರನ್ ಮತ್ತು 22 ರನ್ ಓವರ್‌ಗಳು ದುಬಾರಿಯಾಗಿ ಪರಿಣಮಿಸಿದವು. ಅದರ ಜೊತೆಗೆ, ತಂಡದ ಫೀಲ್ಡಿಂಗ್ ಮತ್ತಷ್ಟು ನಿರಾಶಾದಾಯಕವಾಗಿತ್ತು. ನೀವು ಅಷ್ಟೊಂದು ಕ್ಯಾಚ್‌ಗಳನ್ನು ಬಿಟ್ಟು ಚಾಂಪಿಯನ್‌ಶಿಪ್ ಗೆಲ್ಲುವ ನಿರೀಕ್ಷೆ ಹೊಂದುವುದು ಸಾಧ್ಯವಿಲ್ಲ' ಎಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಉತ್ತಪ್ಪ ಹೇಳಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಗೆದ್ದಿದ್ದ ರಾಬಿನ್ ಉತ್ತಪ್ಪ, 'ಎರಡು ಬಾರಿ ಕ್ಯಾಚ್ ಕೈಬಿಟ್ಟ ನಂತರ ರೋಹಿತ್ ಶರ್ಮಾ ಅತ್ಯಂತ ಎಚ್ಚರಿಕೆಯಿಂದ ಆಡಿದರು. ಕೂಡಲೇ ಅವರು ಗೇರ್ ಬದಲಾಯಿಸಿದರು ಮತ್ತು ಜವಾಬ್ದಾರಿಯುತವಾಗಿ ಆಡಿದರು. ಪ್ರಮುಖ ಜೊತೆಯಾಟವಾಡಿದರು. ಅವರ ಶಾಂತತೆ ಎದ್ದು ಕಾಣುತ್ತಿತ್ತು. ರೋಹಿತ್, ಧೋನಿ ಅಥವಾ ಕೊಹ್ಲಿಯಂತಹ ಆಟಗಾರರು ಕ್ರೀಸ್‌ನಲ್ಲಿದ್ದಾಗ, ಒತ್ತಡವು ಎಲ್ಲರ ಮೇಲೂ ಇರುತ್ತದೆ. ಸಾಯಿ ಸುದರ್ಶನ್ ಕೂಡ ಆ ಮಟ್ಟವನ್ನು ತಲುಪಲು ಪ್ರಾರಂಭಿಸುತ್ತಿದ್ದಾರೆ' ಎಂದು ಹೇಳಿದರು.

'ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಮುಂಬೈ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು, ಉಭಯ ತಂಡಗಳ ನಡುವೆ ತೀವ್ರ ಹೋರಾಟ ನಡೆಯುವ ನಿರೀಕ್ಷೆಯಿದೆ. ಪಂಜಾಬ್ ತಂಡವು ನೋವು ಅನುಭವಿಸುತ್ತಿದೆ ಮತ್ತು ಭರ್ಜರಿಯಾಗಿ ಆಡಲಿದೆ. ಮುಂಬೈ ತಂಡವು ಹೆಚ್ಚಿನ ಮೊಮೆಂಟಮ್‌ನಲ್ಲಿ ಸಾಗುತ್ತಿದ್ದು, ತೀವ್ರತೆಯನ್ನು ತರುತ್ತದೆ. ಇದು ಎಲ್ಲಕಾಲಕ್ಕೂ ಬ್ಲಾಕ್‌ಬಸ್ಟರ್ ಪಂದ್ಯವಾಗಲಿದೆ' ಎಂದು ಉತ್ತಪ್ಪ ಹೇಳಿದ್ದಾರೆ.

ಕ್ವಾಲಿಫೈಯರ್ 2ರ ವಿಜೇತ ತಂಡ ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

20 ವರ್ಷಗಳಿಂದ ಆತನನ್ನು ಕೊಲ್ಲಲು ಬಯಸಿದ್ದೆ: ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಿದ ಶೂಟರ್ ಹೇಳಿಕೆ!

ಮೊಟ್ಟೆ ಪ್ರಿಯರಿಗೆ ಗುಡ್‌ ನ್ಯೂಸ್‌; ಬೆಲೆಯಲ್ಲಿ ಭಾರೀ ಇಳಿಕೆ, ಗ್ರಾಹಕರು ಸಂತಸ

ಜಮ್ಮು: ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ, ಮದುವೆ ಮನೆಯಲ್ಲೇ ಗುಂಡಿನ ದಾಳಿ; ಡಿಸಿಎಂಗೆ ಗಾಯ

CM ಕುರ್ಚಿ ಕಸರತ್ತು: ಬಜೆಟ್ ಅಧಿವೇಶನ ಪೂರ್ಣಗೊಂಡ ಬಳಿಕ ನಾಯಕತ್ವ ಗೊಂದಲಕ್ಕೆ ‘ಹೈ’ ಪರಿಹಾರ..?

ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ: ಕೇರಳದಲ್ಲಿ ಪೊಲೀಸರ ಭದ್ರತೆಯೊಂದಿಗೆ ವಿವಾಹ!

SCROLL FOR NEXT