ರಾಜೀವ್ ಶುಕ್ಲಾ 
ಕ್ರಿಕೆಟ್

'ವಿರಾಟ್ ಕೊಹ್ಲಿ ಒಳ್ಳೆ ನಾಯಕನಲ್ಲ, ಐಪಿಎಲ್ ತಂಡಕ್ಕೆ ಸರಿಯಲ್ಲ' ಎಂದಿದ್ದ ಟೀಕಾಕಾರರಿಗೆ ರಾಜೀವ್ ಶುಕ್ಲಾ ತಿರುಗೇಟು

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತೆ ಯಶಸ್ವಿಯಾಗದಿದ್ದರೂ, ಫ್ರಾಂಚೈಸಿಗೆ ಸರಿಸಾಟಿಯಿಲ್ಲದ ಅಭಿಮಾನಿಗಳಿದ್ದಾರೆ. ಬೆಂಗಳೂರು ತಂಡ ಹೊಂದಿರುವ ಜನಪ್ರಿಯತೆಗೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಶುಕ್ಲಾ ತಿಳಿಸಿದ್ದಾರೆ.

ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಫೈನಲ್‌ನಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಅನ್ನು ಸೋಲಿಸುವ ಮೂಲಕ 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿದೆ. ಕಳೆದ 18 ವರ್ಷಗಳಿಂದ ಫ್ರಾಂಚೈಸಿಯಲ್ಲಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ, ಅಂತಿಮವಾಗಿ ಟಿ20 ಲೀಗ್‌ನಲ್ಲಿ ಯಶಸ್ಸು ಕಂಡಿದ್ದಾರೆ. ಈ ಗೆಲುವಿನ ಮೂಲಕ ಕೊಹ್ಲಿ ತಮ್ಮ ನಾಯಕತ್ವ ಮತ್ತು ಟಿ20 ಮಾದರಿಗೆ ಹೊಂದಿಕೊಳ್ಳುವಿಕೆಯನ್ನು ಪ್ರಶ್ನಿಸಿದ ಎಲ್ಲರಿಗೂ ಸ್ಪಷ್ಟ ಸಂದೇಶ ನೀಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಇರುವ ವ್ಯಕ್ತಿ ರಾಜೀವ್ ಶುಕ್ಲಾ, ವಿರಾಟ್ ಕೊಹ್ಲಿ 'ಈ ಸಲ ಕಪ್ ನಮ್ದೆ' ಎಂಬ ಭವಿಷ್ಯವಾಣಿಯನ್ನು ನಿಜಗೊಳಿಸಿದ್ದಾರೆ ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

'ಕಳೆದ 18 ವರ್ಷಗಳಿಂದ ಐಪಿಎಲ್ ಆಡುತ್ತಿರುವವರಲ್ಲಿ ವಿರಾಟ್ ನಿರಂತರ ಮತ್ತು ಅವರು ಬೆಂಗಳೂರನ್ನು ಚಾಂಪಿಯನ್ ಮಾಡಲು, ಆರ್‌ಸಿಬಿಯನ್ನು ಚಾಂಪಿಯನ್ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಜನರು ಅವರನ್ನು ಆಗಾಗ್ಗೆ ಟೀಕಿಸುತ್ತಿದ್ದರು. 'ಅವರು ಒಳ್ಳೆಯ ನಾಯಕನಲ್ಲ', 'ಅವರು ಐಪಿಎಲ್ ತಂಡಕ್ಕೆ ಸೂಕ್ತವಲ್ಲ' ಮತ್ತು ಇದು ಮತ್ತು ಅದು' ಅಂತ ಹೇಳುತ್ತಲೇ ಇದ್ದರು ಎಂದು ಇಂಡಿಯಾ ಟುಡೇ ಜೊತೆಗಿನ ಮಾತುಕತೆಯಲ್ಲಿ ಶುಕ್ಲಾ ಹೇಳಿದರು.

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತೆ ಯಶಸ್ವಿಯಾಗದಿದ್ದರೂ, ಫ್ರಾಂಚೈಸಿಗೆ ಸರಿಸಾಟಿಯಿಲ್ಲದ ಅಭಿಮಾನಿಗಳಿದ್ದಾರೆ. ಬೆಂಗಳೂರು ತಂಡ ಹೊಂದಿರುವ ಜನಪ್ರಿಯತೆಗೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಶುಕ್ಲಾ ತಿಳಿಸಿದ್ದಾರೆ.

'ಅದೇನೆ ಇರಲಿ, ಆರ್‌ಸಿಬಿ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಮತ್ತು ಜನಪ್ರಿಯತೆಯನ್ನು ಹೊಂದಿರುವುದು ವಿರಾಟ್ ಅವರ ಕಾರಣದಿಂದಾಗಿ. ಪ್ರಪಂಚದಾದ್ಯಂತ ಜನರು ಈ ತಂಡವನ್ನು ಅನುಸರಿಸುತ್ತಾರೆ. ಏಕೆಂದರೆ, ಅವರ ಕಾರಣದಿಂದಾಗಿ. ಪಂದ್ಯ ಎಲ್ಲಿಯೇ ನಡೆಯುತ್ತಿದ್ದರೂ, ವಿರಾಟ್ ತಂಡ ಆಡುತ್ತಿದ್ದರೆ, ಅದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತದೆ' ಎಂದರು.

ವಿರಾಟ್ ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರು. ಆಡಿರುವ 15 ಪಂದ್ಯಗಳಲ್ಲಿ 54.75 ರ ಸರಾಸರಿಯಲ್ಲಿ 657 ರನ್‌ಗಳೊಂದಿಗೆ ಐಪಿಎಲ್ 2025ರ ಅಭಿಯಾನವನ್ನು ಮುಗಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT