ಶಶಾಂಕ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ 
ಕ್ರಿಕೆಟ್

IPL 2025: 'ನನ್ನ ಕೆನ್ನೆಗೆ ಬಾರಿಸಬೇಕಿತ್ತು.. ನಮ್ಮಪ್ಪ ಕೂಡ ಮಾತನಾಡಲಿಲ್ಲ'- Shashank Singh

ಹಾಲಿ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನವಾಗಿರುವ ಶಶಾಂಕ್ ಸಿಂಗ್ ಹಾಲಿ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆಕ್ರೋಶಕ್ಕೆ ತುತ್ತಾಗಿದ್ದರು.

ಮುಂಬೈ: ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2025 ಟೂರ್ನಿ ನಾನಾ ವಿಚಾರಗಳಿಂದ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದು, ಈ ಪೈಕಿ ಇದೀಗ ಉದಯೋನ್ಮುಖ ಕ್ರಿಕೆಟಿಗ ಶಶಾಂಕ್ ಸಿಂಗ್ ಕೂಡ ಟೂರ್ನಿಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನವಾಗಿರುವ ಶಶಾಂಕ್ ಸಿಂಗ್ ಹಾಲಿ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆಕ್ರೋಶಕ್ಕೆ ತುತ್ತಾಗಿದ್ದರು.

ಐಪಿಎಲ್ ಟೂರ್ನಿಯ ಕ್ವಾಲಿಫೈಯರ್ 2 ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡ ಚೇಸಿಂಗ್ ಮಾಡುವ ವೇಳೆ ನಿರ್ಣಾಯಕ ಘಟ್ಟದಲ್ಲಿ ಶಶಾಂಕ್ ಸಿಂಗ್ ಅನಗತ್ಯ ರನೌಟ್ ಗೆ ಬಲಿಯಾಗಿದ್ದರು.

204 ರನ್‌ಗಳ ಚೇಸಿಂಗ್ ಸಮಯದಲ್ಲಿ, ಪಿಬಿಕೆಎಸ್ 169/4 ರಲ್ಲಿದ್ದಾಗ ಶಶಾಂಕ್ ಮಾಡಿದ ತಪ್ಪಿನಿಂದ ಪಂಜಾಬ್ ಫೈನಲ್‌ನಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು. 17 ನೇ ಓವರ್‌ನಲ್ಲಿ, ಶಶಾಂಕ್ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶಾಟ್ ಹೊಡೆದು ಸಿಂಗಲ್ ಗಳಿಸಲು ಓಡಿದರು.

ಶಶಾಂಕ್ ನಾನ್-ಸ್ಟ್ರೈಕರ್‌ನ ತುದಿಯ ಕಡೆಗೆ ಅಜಾಗರೂಕತೆಯಿಂದ ಓಡಿದಾಗ ಅದು ಸುಲಭವಾದ ಸಿಂಗಲ್‌ನಂತೆ ಕಾಣುತ್ತಿತ್ತು. ಆದಾಗ್ಯೂ, ಮುಂಬೈ ನಾಯಕ ಹಾರ್ದಿಕ್ ಚೆಂಡನ್ನು ಪಡೆದು ತನ್ನ ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿ ಪಿಬಿಕೆಎಸ್ ಬ್ಯಾಟ್ಸ್‌ಮನ್‌ ಶಶಾಂಕ್ ಸಿಂಗ್ ರನ್ನು ರನ್ ಔಟ್ ಮಾಡಿದರು. ಈ ಔಟ್ ಎಲ್ಲರನ್ನೂ ಆಘಾತಕ್ಕೀಡು ಮಾಡಿತು.

ಅಯ್ಯರ್ ಸೇರಿದಂತೆ, ಶಶಾಂಕ್ ಇಂತಹ ಮಹತ್ವದ ಪಂದ್ಯದಲ್ಲಿ ಇಂತಹ ಮೂರ್ಖ ತಪ್ಪು ಮಾಡುತ್ತಾರೆಂದು ಅವರು ನಿರೀಕ್ಷಿಸಿರಲಿಲ್ಲ. ಈ ವೇಳೆ ಮತ್ತೊಂದು ತುದಿಯಲ್ಲಿದ್ದ ನಾಯಕ ಶ್ರೇಯಸ್ ಅಯ್ಯರ್ ಶಶಾಂಕ್ ಸಿಂಗ್ ವಿರುದ್ಧ ಆಕ್ರೋಶಗೊಂಡಿದ್ದರು.

ಒಂದು ಓವರ್ ಬಾಕಿ ಇರುವಂತೆಯೇ ಟಾರ್ಗೆಟ್ ಚೇಸ್ ಮಾಡಿದ ಪಂಜಾಬ್

ಈ ಪಂದ್ಯದಲ್ಲಿ ಪಂಜಾಬ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅಜೇಯ ಆಟವಾಡಿ ಪಂಜಾಬ್ ತಂಡಕ್ಕೆ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವು ತಂದಿತ್ತರು.

ನನಗೆ ಮುಖ ತೋರಿಸ್ಬೇಡ ನೀನು.. ಎಂದಿದ್ದ ಶಶಾಂಕ್ ಸಿಂಗ್

ಇನ್ನು ಪಂದ್ಯ ಮುಕ್ತಾಯದ ಬಳಿಕ ಶಶಾಂಕ್ ಸಿಂಗ್ ಎದುರಾಗುತ್ತಲೇ ಬೈದು, ನಿನ್ನ ಮುಖ ತೋರಿಸಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಶಶಾಂಕ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

'ನನ್ನ ಕೆನ್ನೆಗೆ ಬಾರಿಸಬೇಕಿತ್ತು.. ನಮ್ಮಪ್ಪ ಕೂಡ ಮಾತನಾಡಲಿಲ್ಲ'

ಇತ್ತೀಚೆಗೆ, ಶಶಾಂಕ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅಂದಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು, 'ಅಂದಿನ ತಪ್ಪಿಗೆ ನಾನೇ ಹೊಣೆ ಎಂದು ಹೇಳಿರುವ ಶಶಾಂಕ್ ಸಿಂಗ್, ಅಂದು ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ ಕೋಪಕ್ಕೆ ನಾನು ಅರ್ಹ ಎಂದು ಹೇಳಿದ್ದಾರೆ.

'ನಾನು ಅದಕ್ಕೆ ಅರ್ಹ, ಶ್ರೇಯಸ್ ಅಯ್ಯರ್ ನನ್ನನ್ನು ಕೆಣಕಬೇಕಿತ್ತು, ನನ್ನ ತಂದೆ ಫೈನಲ್‌ವರೆಗೆ ನನ್ನೊಂದಿಗೆ ಮಾತನಾಡಲಿಲ್ಲ. ನಾನು ಕ್ಯಾಶುವಲ್ ಆಗಿದ್ದೆ, ಅದು ನಿರ್ಣಾಯಕ ಸಮಯವಾಗಿತ್ತು, ಶ್ರೇಯಸ್ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಸ್ಪಷ್ಟವಾಗಿದ್ದರು ಆದರೆ ನಂತರ ಅವರು ನನ್ನನ್ನು ಊಟಕ್ಕೆ ಕರೆದೊಯ್ದರು" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ