ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 
ಕ್ರಿಕೆಟ್

ಬದಲಿ ಆಟಗಾರರ ಆಯ್ಕೆ ಮಾಡಿದ KKR, RCB; ಲುಂಗಿ ಎಂಗಿಡಿ ಔಟ್; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರಕ ವೇಗಿ ಸೇರ್ಪಡೆ!

ಪ್ಲೇಆಫ್‌ ರೇಸ್‌ನಿಂದ ಈಗಾಗಲೇ ಹೊರಗುಳಿದಿರುವ ಹಾಲಿ ಚಾಂಪಿಯನ್ ಕೆಕೆಆರ್, ಈ ಆವೃತ್ತಿಯ ಉಳಿದ ಪಂದ್ಯಗಳಿಗೆ ರೋವ್‌ಮನ್ ಪೊವೆಲ್ ಬದಲಿಗೆ ಶುಕ್ಲಾ ಅವರನ್ನು ತಂಡಕ್ಕೆ ಕರೆತಂದಿದೆ.

ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಈಣ) ತಂಡಗಳು ತಮ್ಮ ಗಾಯಗೊಂಡ ಆಟಗಾರರ ಬದಲಿಗೆ ಶಿವಂ ಶುಕ್ಲಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಆಯ್ಕೆ ಮಾಡಿವೆ ಎಂದು ಐಪಿಎಲ್ ಹೇಳಿಕೆ ಸೋಮವಾರ ತಿಳಿಸಿದೆ.

ಪ್ಲೇಆಫ್‌ ರೇಸ್‌ನಿಂದ ಈಗಾಗಲೇ ಹೊರಗುಳಿದಿರುವ ಹಾಲಿ ಚಾಂಪಿಯನ್ ಕೆಕೆಆರ್, ಈ ಆವೃತ್ತಿಯ ಉಳಿದ ಪಂದ್ಯಗಳಿಗೆ ರೋವ್‌ಮನ್ ಪೊವೆಲ್ ಬದಲಿಗೆ ಶುಕ್ಲಾ ಅವರನ್ನು ತಂಡಕ್ಕೆ ಕರೆತಂದಿದೆ.

ವೆಸ್ಟ್ ಇಂಡೀಸ್ ಆಲ್‌ರೌಂಡರ್‌ ಪೊವೆಲ್ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಟೂರ್ನಿಯಿಂದ ಹೊರಗುಳಿದಿದ್ದಾರೆ.

ಲೆಗ್ ಸ್ಪಿನ್ನರ್ ಶುಕ್ಲಾ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡುತ್ತಾರೆ ಮತ್ತು ಮೂಲ ಬೆಲೆ 30 ಲಕ್ಷ ರೂ.ಗೆ ಕೆಕೆಆರ್ ಸೇರಲಿದ್ದಾರೆ.

ಆರ್‌ಸಿಬಿ, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಲುಂಗಿ ಎನ್‌ಗಿಡಿ ಬದಲಿಗೆ ಮುಜರಬಾನಿಯನ್ನು ಆಯ್ಕೆ ಮಾಡಿದೆ. ಎಂಗಿಡಿ ಅವರು ಫ್ರಾಂಚೈಸಿಯನ್ನು ತೊರೆದು ದಕ್ಷಿಣ ಆಫ್ರಿಕಾ ತಂಡವನ್ನು ಸೇರಲಿದ್ದಾರೆ.

ಈ ಬದಲಿ ಆಟಗಾರರಿಗೆ ತಂಡಗಳಲ್ಲಿ ಆಡಲು ಮೇ 26 ರಿಂದ ಅಧಿಕೃತವಾಗಿ ಅವಕಾಶ ಸಿಗಲಿದೆ.

ಜಿಂಬಾಬ್ವೆಯ ವೇಗಿ ಮುಜರಬಾನಿ ಇದುವರೆಗೆ 70 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, ಅವರು ಜಿಂಬಾಬ್ವೆಯನ್ನು 12 ಟೆಸ್ಟ್ ಮತ್ತು 55 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಅವರು 75 ಲಕ್ಷ ರೂ.ಗೆ ಆರ್‌ಸಿಬಿ ಸೇರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ಬೇಡ: ಪೊಲೀಸರಿಗೆ ಸುಪ್ರೀಂ ಕೋರ್ಟ್ ಪಾಠ

FCRA ತಿದ್ದುಪಡಿ ಕ್ರಿಶ್ಚಿಯನ್ನರ ಮೇಲೆ ನೇರ ದಾಳಿ; ಇದು ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ; ಭಾರತಕ್ಕೆ ಅಮೆರಿಕ ಕಾಂಗ್ರೆಸ್ ಎಚ್ಚರಿಕೆ!

Video: ಮಾರ್ಗಮಧ್ಯೆ ಮಹಿಳೆಗೆ ಹೃದಯಾಘಾತ; ಆಸ್ಪತ್ರೆಗೆ ಬಸ್ ತಿರುಗಿಸಿ ಜೀವ ಉಳಿಸಲು KSRTC ಚಾಲಕ ಹರಸಾಹಸ, ವ್ಯಾಪಕ ಮೆಚ್ಚುಗೆ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!

ಪ್ರಧಾನಿ ಮೋದಿ Video ಡಿಲೀಟ್: Facebook ಮೇಲೆ ಗದಾ ಪ್ರಹಾರ, Mark Zuckerberg ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು! ಹೇಳಿದ್ದೇನು?