ಸುನೀಲ್ ಗವಾಸ್ಕರ್ 
ಕ್ರಿಕೆಟ್

'ಸರಿಯಾದ ರೀತಿಯಲ್ಲಿ ವರ್ತಿಸಿ': ಟೆಸ್ಟ್ ನಾಯಕ ಶುಭಮನ್ ಗಿಲ್‌ಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ

'ಭಾರತದ ನಾಯಕನಾಗಿ ಆಯ್ಕೆಯಾಗುವ ಆಟಗಾರನ ಮೇಲೆ ಯಾವಾಗಲೂ ಒತ್ತಡವಿರುತ್ತದೆ. ಏಕೆಂದರೆ, ತಂಡದ ಸದಸ್ಯರಾಗಿರುವುದಕ್ಕೂ ನಾಯಕನಾಗಿರುವುದಕ್ಕೂ ದೊಡ್ಡ ವ್ಯತ್ಯಾಸವಿದೆ' ಎಂದು ಸ್ಪೋರ್ಟ್ಸ್ ತಕ್ ಉಲ್ಲೇಖಿಸಿ ಗವಾಸ್ಕರ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದು, ರಿಷಭ್ ಪಂತ್ ಅವರು ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ, ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕಿ ಗಿಲ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಗಿಲ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದ್ದಕ್ಕೆ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಮಾಜಿ ಬ್ಯಾಟ್ಸ್‌ಮನ್ ಸುನೀಲ್ ಗವಾಸ್ಕರ್ ಇದೀಗ ಎಚ್ಚರಿಕೆ ನೀಡಿದ್ದಾರೆ.

'ಗಿಲ್ ಆಟಗಾರರ ಗೌರವವನ್ನು ಗಳಿಸಬೇಕು ಮತ್ತು ನಾಯಕನ ನೇಮಕದಿಂದ ಬರುವ ಒತ್ತಡವನ್ನು ನಿಭಾಯಿಸಬೇಕು. ನಾಯಕತ್ವವು ಹಲವಾರು ಆಟಗಾರರ ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಮತ್ತು ಗಿಲ್ ತಮ್ಮ ಅಧಿಕಾರವನ್ನು ಮೀರಿ ಸರಿಯಾದ ರೀತಿಯಲ್ಲಿ ವರ್ತಿಸಬೇಕಾಗುತ್ತದೆ' ಎಂದು ಗವಾಸ್ಕರ್ ಹೇಳಿದ್ದಾರೆ.

'ಭಾರತದ ನಾಯಕನಾಗಿ ಆಯ್ಕೆಯಾಗುವ ಆಟಗಾರನ ಮೇಲೆ ಯಾವಾಗಲೂ ಒತ್ತಡವಿರುತ್ತದೆ. ಏಕೆಂದರೆ, ತಂಡದ ಸದಸ್ಯರಾಗಿರುವುದಕ್ಕೂ ನಾಯಕನಾಗಿರುವುದಕ್ಕೂ ದೊಡ್ಡ ವ್ಯತ್ಯಾಸವಿದೆ' ಎಂದು ಸ್ಪೋರ್ಟ್ಸ್ ತಕ್ ಉಲ್ಲೇಖಿಸಿ ಗವಾಸ್ಕರ್ ಹೇಳಿದ್ದಾರೆ.

'ಏಕೆಂದರೆ ನೀವು ತಂಡದ ಸದಸ್ಯರಾಗಿರುವಾಗ, ನೀವು ಸಾಮಾನ್ಯವಾಗಿ ನಿಮಗೆ ಹತ್ತಿರವಿರುವ ಆಟಗಾರರೊಂದಿಗೆ ಮಾತುಕತೆ ನಡೆಸುತ್ತೀರಿ. ಆದರೆ, ನೀವು ನಾಯಕನಾದಾಗ, ತಂಡದ ಇತರ ಆಟಗಾರರು ಕೂಡ ನಿಮ್ಮನ್ನು ಗೌರವಿಸುವ ರೀತಿಯಲ್ಲಿ ನೀವು ವರ್ತಿಸಬೇಕು ಮತ್ತು ನಾಯಕನ ನಡವಳಿಕೆಯು ಅವರ ಪ್ರದರ್ಶನಕ್ಕಿಂತ ಮುಖ್ಯವಾಗಿದೆ' ಎಂದು ಅವರು ಹೇಳಿದರು.

ಇಂಗ್ಲೆಂಡ್ ವಿರುದ್ಧದ ಬಹುನಿರೀಕ್ಷಿತ ಸರಣಿಗೆ ಮುಂಚಿತವಾಗಿ ಶುಭಮನ್ ಗಿಲ್ ಭಾರತದ ಟೆಸ್ಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಾಗ, ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಯುವ ನಾಯಕನ ಪ್ರಯಾಣದ ಹಿಂದಿನ ಜನರು, ಅವರ ತಂದೆ ಮತ್ತು ಭಾರತದ ಶ್ರೇಷ್ಠ ಆಟಗಾರ ಯುವರಾಜ್ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.

ANI ಜೊತೆ ಮಾತನಾಡಿದ ಯೋಗರಾಜ್ ಸಿಂಗ್, ಗಿಲ್ ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ಬಲವಾದ ಮಾರ್ಗದರ್ಶನ ಮತ್ತು ಕುಟುಂಬದ ಬೆಂಬಲ ಮುಖ್ಯವಾಗಿದೆ. ಶುಬ್‌ಮನ್ ಗಿಲ್ ಅವರ ಪ್ರದರ್ಶನದ ಕೀರ್ತಿ ಅವರ ತಂದೆ ಮತ್ತು ಯುವರಾಜ್ ಸಿಂಗ್‌ಗೆ ಸಲ್ಲುತ್ತದೆ. ಶುಬ್‌ಮನ್ ಗಿಲ್ ಇಂದು ನಾಯಕನಾಗಿದ್ದರೆ ಮತ್ತು ದೀರ್ಘಕಾಲ ಉಳಿದಿದ್ದರೆ, ಯುವರಾಜ್ ಸಿಂಗ್ ಅವರ ಮಾರ್ಗದರ್ಶನವು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

'ಆಪರೇಷನ್ ಕಾಡಾನೆ' ಸಕ್ಸಸ್: ನಾಲೆಗೆ ಬಿದ್ದು ಒದ್ದಾಡುತ್ತಿದ್ದ ಗಜರಾಜನ ರಕ್ಷಣೆ, ಅರಣ್ಯ ಇಲಾಖೆ ಸಾಹಸಕ್ಕೆ ಶ್ಲಾಘನೆ!

Ranji Trophy: ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಮತ್ತು 185 ರನ್ ಭರ್ಜರಿ ಜಯ

Ranji Trophy: ಒಂದೂ ರನ್ ನೀಡದೇ 5 ವಿಕೆಟ್.. Amit Shukla ಐತಿಹಾಸಿಕ ದಾಖಲೆ, IPL 2026 ಹರಾಜಿಗೆ ಭರ್ಜರಿ ಸಿದ್ಧತೆ!

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

SCROLL FOR NEXT