ಅಭಿಷೇಕ್ ನಾಯರ್  
ಕ್ರಿಕೆಟ್

KKR: ಮುಖ್ಯ ತರಬೇತುದಾರರಾಗಿ ಅಭಿಷೇಕ್ ನಾಯ್ಯರ್ ನೇಮಕ!

ನಾಯರ್ ಅವರು 2018 ರಿಂದ KKR ನೊಂದಿಗೆ ಸಂಬಂಧ ಹೊಂದಿದ್ದು, ಅವರ ಥಿಂಕ್-ಟ್ಯಾಂಕ್‌ನ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ನವದೆಹಲಿ: ಚಂದ್ರಕಾಂತ್ ಪಂಡಿತ್ ಅವರ ನಿರ್ಗಮನದ ನಂತರ ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತನ್ನ ಹೊಸ ಮುಖ್ಯ ಕೋಚ್ ಆಗಿ ಗುರುವಾರ ನೇಮಕ ಮಾಡಿದೆ.

ನಾಯರ್ ಅವರು 2018 ರಿಂದ KKR ನೊಂದಿಗೆ ಸಂಬಂಧ ಹೊಂದಿದ್ದು, ಅವರ ಥಿಂಕ್-ಟ್ಯಾಂಕ್‌ನ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ತಂಡದ ಆಯ್ಕೆಗೆ ಬಂದಾಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿರುವ ವ್ಯಕ್ತಿ ಎಂದು ಸಾಮಾನ್ಯವಾಗಿ ನೋಡಲಾಗುತ್ತದೆ.

ನಾಯರ್ ಅವರು ಸುಮಾರು ಒಂಬತ್ತು ತಿಂಗಳುಗಳ ಕಾಲ, ರಾಷ್ಟ್ರೀಯ ತಂಡದಲ್ಲಿ ಗೌತಮ್ ಗಂಭೀರ್ ಅವರ ಕೋಚಿಂಗ್ ನ ಭಾಗವಾಗಿದ್ದರು. ಆದರೆ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಸಿತಾಂಶು ಕೊಟಕ್ ಅವರನ್ನು ಬದಲಿಸಿದ ನಂತರ ಅನಧಿಕೃತವಾಗಿ ವಜಾಗೊಳಿಸಲಾಗಿತ್ತು.

ಅಭಿಷೇಕ್ 2018 ರಿಂದ ಕೆಕೆಆರ್ ನ ಪ್ರಮುಖ ಭಾಗವಾಗಿದ್ದು, ಮೈದಾನದ ಒಳಗೆ ಮತ್ತು ಹೊರಗೆ ನಮ್ಮ ಆಟಗಾರರನ್ನು ರೂಪಿಸುತ್ತಿದ್ದಾರೆ. ಅವರ ಆಟದ ತಿಳುವಳಿಕೆ ಮತ್ತು ಆಟಗಾರರೊಂದಿಗಿನ ಸಂಪರ್ಕವು ನಮ್ಮ ಬೆಳವಣಿಗೆಗೆ ಪ್ರಮುಖವಾಗಿದೆ. ಅವರು ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲು ಮತ್ತು ಕೆಕೆಆರ್ ಮುನ್ನಡೆಸುವುದನ್ನು ನೋಡಲು ನಾವು ಥ್ರೀಲ್ ಆಗಿದ್ದೇವೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.

KKR ನ ಸಹಾಯಕ ತರಬೇತುದಾರರಾಗಿದ್ದ ಅವಧಿಯಲ್ಲಿ ಅವರು ಯುವ ಪ್ರತಿಭೆಗಳ ಬೆಳವಣಿಗೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಭಾರತಕ್ಕಾಗಿ ಮೂರು ODIಗಳನ್ನು ಆಡಿರುವ 43 ವರ್ಷ ವಯಸ್ಸಿನ ನಾಯ್ಯರ್, ರೋಹಿತ್ ಶರ್ಮಾ, KL ರಾಹುಲ್, ದಿನೇಶ್ ಕಾರ್ತಿಕ್ ಅವರಂತಹ ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ; 26 ತಿಂಗಳ ಅರಿಯರ್ಸ್; ವೇತನ ಪರಿಷ್ಕರಣೆಗೆ ಒಪ್ಪಿಗೆ; ರದ್ದಾಗುತ್ತಾ ಮುಷ್ಕರ?

ಬಾಂಗ್ಲಾ ಪ್ರಧಾನಿಯಾದ ಬೆನ್ನಲ್ಲೇ ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾದ Tarique Rahman; ಆಯ್ಕೆ ಮಾಡಿದ ಜನರಿಂದಲೇ ಅವಮಾನ, ಆರೋಪ?

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

'ಆಗಿದ್ದಾಯ್ತು ಬಿಡಿ.. ಏನ್ ಮಾಡೋಕ್ ಆಗುತ್ತೆ': S*X ನಿರಾಕರಿಸಿದ MBA ವಿದ್ಯಾರ್ಥಿನಿ ಕತ್ತು ಸೀಳಿದ ಧೂರ್ತನ ಮಾತು! Video

T20 ವಿಶ್ವಕಪ್ 2026: ಶಿವಂ ದುಬೆ ಸ್ಫೋಟಕ ಅರ್ಧಶತಕ; ನೆದರ್ಲೆಂಡ್ ಗೆ ಗೆಲ್ಲಲು 194 ರನ್ ಗುರಿ ನೀಡಿದ ಭಾರತ

SCROLL FOR NEXT