ಜೇಕಬ್ ಬೆಥೆಲ್ 
ಕ್ರಿಕೆಟ್

ಜೇಕಬ್ ಬೆಥೆಲ್ ಚೊಚ್ಚಲ ODI ಶತಕ; IPL 2026 ಆವೃತ್ತಿಯಲ್ಲಿ RCB ಗೆ ತಲೆನೋವಾಗುವ ಸಾಧ್ಯತೆ!

ಸೌತಾಂಪ್ಟನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಥೆಲ್ ಅವರು ಚೊಚ್ಚಲ ಏಕದಿನ ಶತಕ ಸಿಡಿಸಿದರು.

2025ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಾಣಿಸಿಕೊಂಡ ಇಂಗ್ಲೆಂಡ್ ಬ್ಯಾಟ್ಸಮನ್ ಜೇಕಬ್ ಬೆಥೆಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅವರು 3ನೇ ಕ್ರಮಾಂಕದಲ್ಲಿ ಅಥವಾ ಮಧ್ಯಮ ಕ್ರಮಾಂಕದಲ್ಲಿ ಬಿಗ್ ಹಿಟ್ಟರ್ ಆಗಿದ್ದನ್ನು ಹಲವರು ನೋಡಿದರು. ಆದರೆ 21 ವರ್ಷದ ಆಟಗಾರನಿಗೆ ಆರ್‌ಸಿಬಿ ಪರ ಕೇವಲ ಎರಡು ಪಂದ್ಯಗಳು ಮಾತ್ರ ಸಿಕ್ಕವು. ಬೆಥೆಲ್ ಅದನ್ನೇ ಬಳಸಿಕೊಂಡು ಉತ್ತಮವಾಗಿ ಹೊರಹೊಮ್ಮಿದರು.

ಆದರೆ, ಫಿಲ್ ಸಾಲ್ಟ್, ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್ ಮತ್ತು ಜೋಶ್ ಹೇಜಲ್‌ವುಡ್ ಎಲ್ಲರೂ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ಜೇಕಬ್ ಬೆಥೆಲ್ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ಹೇಳಲು ಕಷ್ಟಸಾಧ್ಯ. ಫಿಲ್ ಸಾಲ್ಟ್ ಗಾಯಗೊಂಡಿದ್ದರಿಂದ ಬೆಥೆಲ್ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದರು. ಆದರೆ, ಮುಂಬರುವ ಆವೃತ್ತಿಯಲ್ಲಿ ಪ್ಲೇಯಿಂಗ್ XIನ ಭಾಗವಾಗಿರುತ್ತಾರೆಯೇ ಎಂಬುದನ್ನು ಹೇಳುವುದು ಸಾಧ್ಯವಿಲ್ಲ.

ಸೌತಾಂಪ್ಟನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಥೆಲ್ ಅವರು ಚೊಚ್ಚಲ ಏಕದಿನ ಶತಕ ಸಿಡಿಸಿದರು. ಈ ಮೂಲಕ ಆರ್‌ಸಿಬಿ ಆಯ್ಕೆದಾರರಿಗೆ ಗಂಭೀರವಾದ ಆಲೋಚನೆಯನ್ನು ಹುಟ್ಟುಹಾಕಿದ್ದಾರೆ. ಆ ವ್ಯಕ್ತಿ ಬ್ಯಾಟಿಂಗ್ ಮಾಡಬಲ್ಲ, ಪವರ್-ಹಿಟ್ ಮಾಡಬಲ್ಲ, ಸಂಪೂರ್ಣವಾಗಿ ಉತ್ತಮ ಎಡಗೈ ಸ್ಪಿನ್ನರ್ ಕೂಡ ಆಗಬಲ್ಲ ಎಂಬುದು ಇದೀಗ ಜಗಜ್ಜಾಹೀರಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಅವರು ಕೇವಲ 82 ಎಸೆತಗಳಲ್ಲಿ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 110 ರನ್ ಗಳಿಸಿದರು. ODIಗಳಲ್ಲಿ ಆ ರೀತಿಯ ಸ್ಟ್ರೈಕ್-ರೇಟ್ ಹೊಂದಿರುವುದು ಹೆಚ್ಚು ಅದ್ಭುತವಾಗಿದೆ ಮತ್ತು T20ಗಳಲ್ಲಿ ಅವರು ವಿನಾಶವನ್ನುಂಟುಮಾಡಬಲ್ಲರು ಎಂಬುದನ್ನು ತೋರಿಸುತ್ತದೆ.

ಇಲ್ಲಿಯವರೆಗೆ, ಅವರು ಇಂಗ್ಲೆಂಡ್ ಪರ 13 T20I ಗಳನ್ನು ಆಡಿದ್ದಾರೆ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 281 ರನ್ ಗಳಿಸಿದ್ದಾರೆ. ಸರಾಸರಿ 40 ಮತ್ತು ಸ್ಟ್ರೈಕ್-ರೇಟ್ 154 ಇದೆ. ಇದೀಗ ಮತ್ತೊಮ್ಮೆ ಚೆಂಡು RCB ಮ್ಯಾನೇಜ್ಮೆಂಟ್ ಅಂಗಳದಲ್ಲಿದ್ದು, ಬೆಥೆಲ್ ಅವರ ಈ ಪ್ರದರ್ಶನವು IPL 2026ಕ್ಕೂ ಮುನ್ನ ಮತ್ತು ಸಮಯದಲ್ಲಿ ಅವರ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯ, ರಾಜ್ಯ ಸಚಿವ ಸಂಪುಟದ ಒಪ್ಪಿಗೆ? ಗೃಹ ಇಲಾಖೆಗೆ ಭದ್ರತೆಯ ಹೊಣೆ!

2ನೇ ಟಿ20: 51 ರನ್ ಗಳ ಅಂತರದಿಂದ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ! ಅನಗತ್ಯ ದಾಖಲೆ ಬರೆದ ಅರ್ಷದೀಪ್

ಸಿಎಂ ಸಿದ್ದರಾಮಯ್ಯರ ವಿಮಾನ ಪ್ರಯಾಣ: 'ರಾಜ್ಯದ ಬೊಕ್ಕಸ'ದಿಂದ ಆದ ಖರ್ಚು ಎಷ್ಟು ಗೊತ್ತಾ?

ಟ್ರಂಪ್ ಗೆ ಮೋದಿ ದೂರವಾಣಿ ಕರೆ: ಮಹತ್ವದ ಚರ್ಚೆ!

KSCA ಗೆ ಹೊಸ ಸದಸ್ಯರ ಸೇರ್ಪಡೆ: ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ- ವೆಂಕಟೇಶ್ ಪ್ರಸಾದ್

SCROLL FOR NEXT