ಮೊಹಮ್ಮದ್ ನಬಿ, ದುನಿತ್ ವೆಲ್ಲಲಾ ಸಂತೈಸುತ್ತಿರುವ ಜಯಸೂರ್ಯ ಚಿತ್ರ 
ಕ್ರಿಕೆಟ್

Asia Cup: ಒಂದೇ ಓವರ್ ನಲ್ಲಿ 5 ಸಿಕ್ಸರ್, ಲಂಕಾ ಬೌಲರ್ ತಂದೆ ಹೃದಯಾಘಾತದಿಂದ ಸಾವು! ಸುದ್ದಿ ಕೇಳಿದಾಗ ಮೊಹಮ್ಮದ್ ನಬಿ ಮಾಡಿದ್ದೇನು? Video

ಈ ಪಂದ್ಯದಲ್ಲಿ 40 ವರ್ಷದ ನಬಿ, ಲಂಕಾ ಬೌಲರ್ ಗಳನ್ನು ಬೆಂಡೆತ್ತಿದ್ದರು. ವಿಶೇಷವಾಗಿ ದುನಿತ್ ವೆಲ್ಲಲಾ ಅವರ ಒಂದೇ ಓವರ್ ನಲ್ಲಿ 5 ಸಿಕ್ಸರ್ ಬಾರಿಸಿದ್ದಾರೆ.

ದುಬೈ: ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಮೊಹಮ್ಮದ್ ನಬಿ ಒಂದೇ ಓವರ್ ನಲ್ಲಿ 5 ಸಿಕ್ಸರ್ ಸೇರಿದಂತೆ 22 ಎಸೆತಗಳಲ್ಲಿ 60 ರನ್ ಬಾರಿಸಿದ್ದರೂ ಅಪ್ಘಾನಿಸ್ತಾನ ಸೋತು ಟೂರ್ನಿಯಿಂದ ಹೊರಗೆ ಬಿದ್ದಿದೆ.

ಈ ಪಂದ್ಯದಲ್ಲಿ 40 ವರ್ಷದ ನಬಿ, ಲಂಕಾ ಬೌಲರ್ ಗಳನ್ನು ಬೆಂಡೆತ್ತಿದ್ದರು. ವಿಶೇಷವಾಗಿ ದುನಿತ್ ವೆಲ್ಲಲಾ ಅವರ ಒಂದೇ ಓವರ್ ನಲ್ಲಿ 5 ಸಿಕ್ಸರ್ ಬಾರಿಸಿದ್ದಾರೆ.

ಅಪ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಈ ಪಂದ್ಯದ ಇನ್ಸಿಂಗ್ಸ್ ಬ್ರೇಕ್ ವೇಳೆ ಬೌಲರ್ ದುನಿತ್ ವೆಲ್ಲಲಾ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಕೆಲ ಪತ್ರಕರ್ತರು ನಬಿ ಅವರಿಗೆ ತಿಳಿಸಿದಾಗ ನಿಜಕ್ಕೂ ಶಾಕ್ ಆದರು.

ಪಂದ್ಯದ ವೇಳೆ ವೆಲ್ಲಲ್ಲಾ ಅವರಿಗೂ ಈ ಸುದ್ದಿ ತಿಳಿದಿರಲಿಲ್ಲ. ಪಂದ್ಯ ಮುಗಿಯುವವರೆಗೂ ಆ ಸುದ್ದಿ ಹೇಳದಿರಲು ಲಂಕಾ ತಂಡ ನಿರ್ಧರಿಸಿತ್ತು. ಪಂದ್ಯ ಮುಗಿಯುತ್ತಿದ್ದಂತೆಯೇ ಲಂಕಾ ಕೋಚ್ ಸನತ್ ಜಯಸೂರ್ಯ ವಲ್ಲಲಾ ಅವರಿಗೆ ತಂದೆಯ ನಿಧನ ಸುದ್ದಿ ತಿಳಿಸಿ ಸಾಂತ್ವನ ಹೇಳಿದ್ದಾರೆ. ಈ ಸುದ್ದಿ ಮೊಹಮ್ಮದ್ ನಬಿ ಅವರಿಗೆ ತಿಳಿದಾಗ ಶಾಕ್ ಆಗಿದ್ದಾರೆ. ಇನ್ಸಿಂಗ್ಸ್ ನ ಬ್ರೇಕ್ ಮಧ್ಯದಲ್ಲಿ ಹೃದಯಾಘಾತದಿಂದ ಅವರ ಸಾವನ್ನಪ್ಪಿರುವುದಾಗಿ ಪತ್ರಕರ್ತರೊಬ್ಬರು ನಬಿ ಅವರಿಗೆ ಹೇಳುವುದು ವಿಡಿಯೋದಲ್ಲಿದೆ.

ಈ ಆಘಾತದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಬಿ ಸಂತಾಪ ವ್ಯಕ್ತಪಡಿಸಿದ್ದಾರೆ. ದುನಿತ್ ವೆಲ್ಲಲಾ ಹಾಗೂ ಅವರ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪಗಳು. Stay strong Brother ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಲ್.ಕೆ. ಅಡ್ವಾಣಿ ಹೊಗಳಿದ ಶಶಿ ತರೂರ್; ಅಂತರ ಕಾಯ್ದುಕೊಂಡ ಕಾಂಗ್ರೆಸ್

ಉತ್ತರಾಖಂಡದಲ್ಲಿ 8,000 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ; 'ವಿಶ್ವದ ಆಧ್ಯಾತ್ಮಿಕ ರಾಜಧಾನಿ' ಮಾಡುವ ಗುರಿ

Serious Action Soon': ಸೆಂಟ್ರಲ್ ಜೈಲಲ್ಲಿ ಐಸಿಸ್‌ ಉಗ್ರ, ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ 'ರಾಜಾತಿಥ್ಯ'ಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ!

Assembly polls 2025: ಯಾರಿಗೆ ಬಿಹಾರ, ಮತ್ತೆ ಮಹಿಳಾ ಮತದಾರರು ನಿರ್ಧರಿಸಲಿದ್ದಾರೆಯೇ?

ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ರೂ.1 ಲಕ್ಷ ಕೋಟಿಯನ್ನು ನೇರವಾಗಿ ರಾಜ್ಯದ 'ಜನರ ಜೇಬಿ'ಗೆ ಹಾಕಿದೆ: ಸಿಎಂ ಸಿದ್ದರಾಮಯ್ಯ

SCROLL FOR NEXT