ಪಾಕಿಸ್ತಾನ ಕ್ರಿಕೆಟ್ ಮಂಡಳಿ 
ಕ್ರಿಕೆಟ್

Asia Cup 2025, IND vs PAK: ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ; ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಬಗ್ಗೆ ICCಗೆ PCB ದೂರು!

ಪಂದ್ಯದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಅದು ನಾಟೌಟ್ ಆಗಿತ್ತು ಎಂದು ನಂಬಿದ್ದೇವೆ. ಫಖರ್ ಅವರನ್ನು ಔಟ್ ಎಂದು ನೀಡದಿದ್ದರೆ ಪಾಕಿಸ್ತಾನ ಇನ್ನೂ 20 ರನ್ ಗಳಿಸಬಹುದಿತ್ತು ಎಂದರು.

ಏಷ್ಯಾ ಕಪ್ 2025 ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯದಲ್ಲಿ ವಿವಾದಾತ್ಮಕ ಔಟ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗೆ ಅಧಿಕೃತ ದೂರು ನೀಡಿದೆ.

ದುನ್ಯಾ ನ್ಯೂಸ್ ಪ್ರಕಾರ, ಏಷ್ಯಾ ಕಪ್ ಪಂದ್ಯದ ವೇಳೆ ಟಿವಿ ಅಂಪೈರ್ ರುಚಿರ ಪಲ್ಲಿಯಗುರುಗೆ ಅವರು ಪಾಕ್ ಬ್ಯಾಟರ್ ಫಖರ್ ಜಮಾನ್ ಅವರನ್ನು ಔಟ್ ಎಂದು ತಪ್ಪಾಗಿ ತೀರ್ಪು ನೀಡಿದ್ದಾರೆ ಎಂದು ಪಿಸಿಬಿ ದೂರಿದೆ. ಪಂದ್ಯದ ಮೂರನೇ ಓವರ್‌ನಲ್ಲಿ ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿದಾಗ, ಅದು ಸರಿಯಾಗಿ ಕ್ಯಾಚ್ ಆಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಮೂರನೇ ಅಂಪೈರ್‌ಗೆ ಉಲ್ಲೇಖಿಸಲಾಯಿತು.

ಆ ಸಮಯದಲ್ಲಿ, ಫಖರ್ 8 ಎಸೆತಗಳಲ್ಲಿ 15 ರನ್ ಗಳಿಸಿದ್ದರು ಮತ್ತು ಪಾಕಿಸ್ತಾನ ದೊಡ್ಡ ಮೊತ್ತವನ್ನು ಗಳಿಸಲು ಸಜ್ಜಾಗಿರುವಂತೆ ತೋರುತ್ತಿತ್ತು. ಆದರೆ, ಆ ಔಟ್ ಪಂದ್ಯದ ಗತಿಯನ್ನು ಬದಲಿಸಿತು. ಟಿವಿ ಅಂಪೈರ್ ರುಚಿರ ಅವರು ಆ ಕ್ಯಾಚ್‌ನ ಎರಡು ಆ್ಯಂಗಲ್‌ಗಳನ್ನು ನೋಡಿದರು. ಒಂದು ಆ್ಯಂಗಲ್‌ನಲ್ಲಿ ಫಖರ್ ಔಟ್ ಅಲ್ಲ ಎಂಬಂತೆ ತೋರುತ್ತಿತ್ತು. ಏಕೆಂದರೆ, ಚೆಂಡು ಸ್ಯಾಮ್ಸನ್ ಗ್ಲೌಸ್ ಮುಂದೆ ಪುಟಿಯುತ್ತಿರುವಂತೆ ತೋರುತ್ತಿತ್ತು. ಆದರೆ, ಎರಡನೇ ಆ್ಯಂಗಲ್‌ನಲ್ಲಿ ಸಂಜು ಕ್ಲೀನ್ ಆಗಿ ಕ್ಯಾಚ್ ಪಡೆದಿರುವಂತೆ ಕಂಡಿತು.

ಕೊನೆಯಲ್ಲಿ, ರುಚಿರ ಅವರು ಫಖರ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಈ ನಿರ್ಧಾರದಿಂದ ಪಾಕಿಸ್ತಾನದ ಆರಂಭಿಕ ಆಟಗಾರ ಆಘಾತಕ್ಕೊಳಗಾದರು ಮತ್ತು ಇದು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು.

ಪಾಕಿಸ್ತಾನಕ್ಕೆ ಸಂಕಷ್ಟ

ಪಂದ್ಯದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಅದು ನಾಟೌಟ್ ಆಗಿತ್ತು ಎಂದು ನಂಬಿದ್ದೇವೆ. ಫಖರ್ ಅವರನ್ನು ಔಟ್ ಎಂದು ನೀಡದಿದ್ದರೆ ಪಾಕಿಸ್ತಾನ ಇನ್ನೂ 20 ರನ್ ಗಳಿಸಬಹುದಿತ್ತು ಎಂದ ಅವರು, ಅಂಪೈರ್ ನಿರ್ಧಾರ ತಪ್ಪು ಎಂದು ಖಚಿತವಾಗಿ ಹೇಳಲಿಲ್ಲ.

'ಅಂಪೈರ್‌ಗಳು ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ. ಆದರೆ, ಅದು ಕೀಪರ್‌ಗಿಂತ ಮುಂದೆ ಬೌನ್ಸ್ ಆದಂತೆ ನನಗೆ ಕಾಣುತ್ತಿತ್ತು. ನಾನು ತಪ್ಪಾಗಿರಬಹುದು. (ಫಖರ್) ಬ್ಯಾಟಿಂಗ್ ಮಾಡುತ್ತಿದ್ದ ರೀತಿ, ಪವರ್‌ಪ್ಲೇ ಮೂಲಕ ಬ್ಯಾಟಿಂಗ್ ಮಾಡಿದ್ದರೆ, ನಾವು ಬಹುಶಃ 190 ರನ್ ಗಳಿಸುತ್ತಿದ್ದೆವು. ಆದರೆ, ಅವು ಅಂಪೈರ್‌ಗಳು ತೆಗೆದುಕೊಳ್ಳಬೇಕಾದ ನಿರ್ಧಾರ. ನನಗೆ, ಅದು ಕೀಪರ್‌ಗಿಂತ ಮೊದಲು ಬೌನ್ಸ್ ಆದಂತೆ ಕಾಣುತ್ತಿತ್ತು. ನಾನು ತಪ್ಪಾಗಿರಬಹುದು, ಆದರೆ ಅಂಪೈರ್ ಕೂಡ ತಪ್ಪಾಗಿರಬಹುದು. ಚೆಂಡು ನೆಲವನ್ನು ಮುಟ್ಟಿದೆ ಎಂದು ನಮಗೆ ಅನಿಸಿತು. ಆದರೆ, ಅಂಪೈರ್ ನಿರ್ಧಾರವೇ ಅಂತಿಮ' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉತ್ತರಾಖಂಡದಲ್ಲಿ 8,000 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ; 'ವಿಶ್ವದ ಆಧ್ಯಾತ್ಮಿಕ ರಾಜಧಾನಿ' ಮಾಡುವ ಗುರಿ

ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ರೂ.1 ಲಕ್ಷ ಕೋಟಿಯನ್ನು ನೇರವಾಗಿ ರಾಜ್ಯದ 'ಜನರ ಜೇಬಿ'ಗೆ ಹಾಕಿದೆ: ಸಿಎಂ ಸಿದ್ದರಾಮಯ್ಯ

ಶಾಕಿಂಗ್: 14 ವರ್ಷದ ಬಾಲಕನ ಬೆದರಿಸಿ, ಅಪಹರಿಸಿ 'ಕಾಮಕೇಳಿ', 38 ವರ್ಷದ ಮಹಿಳೆಗೆ 54 ವರ್ಷ ಜೈಲು, 6 ಲಕ್ಷ ರೂ ಪರಿಹಾರಕ್ಕೆ ಆದೇಶ!

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಡಾಕ್ಟರ್ ಸೇರಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್

SCROLL FOR NEXT