ಪಾಕಿಸ್ತಾನ ಕ್ರಿಕೆಟ್ ಮಂಡಳಿ 
ಕ್ರಿಕೆಟ್

Asia Cup 2025, IND vs PAK: ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ; ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಬಗ್ಗೆ ICCಗೆ PCB ದೂರು!

ಪಂದ್ಯದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಅದು ನಾಟೌಟ್ ಆಗಿತ್ತು ಎಂದು ನಂಬಿದ್ದೇವೆ. ಫಖರ್ ಅವರನ್ನು ಔಟ್ ಎಂದು ನೀಡದಿದ್ದರೆ ಪಾಕಿಸ್ತಾನ ಇನ್ನೂ 20 ರನ್ ಗಳಿಸಬಹುದಿತ್ತು ಎಂದರು.

ಏಷ್ಯಾ ಕಪ್ 2025 ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯದಲ್ಲಿ ವಿವಾದಾತ್ಮಕ ಔಟ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗೆ ಅಧಿಕೃತ ದೂರು ನೀಡಿದೆ.

ದುನ್ಯಾ ನ್ಯೂಸ್ ಪ್ರಕಾರ, ಏಷ್ಯಾ ಕಪ್ ಪಂದ್ಯದ ವೇಳೆ ಟಿವಿ ಅಂಪೈರ್ ರುಚಿರ ಪಲ್ಲಿಯಗುರುಗೆ ಅವರು ಪಾಕ್ ಬ್ಯಾಟರ್ ಫಖರ್ ಜಮಾನ್ ಅವರನ್ನು ಔಟ್ ಎಂದು ತಪ್ಪಾಗಿ ತೀರ್ಪು ನೀಡಿದ್ದಾರೆ ಎಂದು ಪಿಸಿಬಿ ದೂರಿದೆ. ಪಂದ್ಯದ ಮೂರನೇ ಓವರ್‌ನಲ್ಲಿ ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿದಾಗ, ಅದು ಸರಿಯಾಗಿ ಕ್ಯಾಚ್ ಆಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಮೂರನೇ ಅಂಪೈರ್‌ಗೆ ಉಲ್ಲೇಖಿಸಲಾಯಿತು.

ಆ ಸಮಯದಲ್ಲಿ, ಫಖರ್ 8 ಎಸೆತಗಳಲ್ಲಿ 15 ರನ್ ಗಳಿಸಿದ್ದರು ಮತ್ತು ಪಾಕಿಸ್ತಾನ ದೊಡ್ಡ ಮೊತ್ತವನ್ನು ಗಳಿಸಲು ಸಜ್ಜಾಗಿರುವಂತೆ ತೋರುತ್ತಿತ್ತು. ಆದರೆ, ಆ ಔಟ್ ಪಂದ್ಯದ ಗತಿಯನ್ನು ಬದಲಿಸಿತು. ಟಿವಿ ಅಂಪೈರ್ ರುಚಿರ ಅವರು ಆ ಕ್ಯಾಚ್‌ನ ಎರಡು ಆ್ಯಂಗಲ್‌ಗಳನ್ನು ನೋಡಿದರು. ಒಂದು ಆ್ಯಂಗಲ್‌ನಲ್ಲಿ ಫಖರ್ ಔಟ್ ಅಲ್ಲ ಎಂಬಂತೆ ತೋರುತ್ತಿತ್ತು. ಏಕೆಂದರೆ, ಚೆಂಡು ಸ್ಯಾಮ್ಸನ್ ಗ್ಲೌಸ್ ಮುಂದೆ ಪುಟಿಯುತ್ತಿರುವಂತೆ ತೋರುತ್ತಿತ್ತು. ಆದರೆ, ಎರಡನೇ ಆ್ಯಂಗಲ್‌ನಲ್ಲಿ ಸಂಜು ಕ್ಲೀನ್ ಆಗಿ ಕ್ಯಾಚ್ ಪಡೆದಿರುವಂತೆ ಕಂಡಿತು.

ಕೊನೆಯಲ್ಲಿ, ರುಚಿರ ಅವರು ಫಖರ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಈ ನಿರ್ಧಾರದಿಂದ ಪಾಕಿಸ್ತಾನದ ಆರಂಭಿಕ ಆಟಗಾರ ಆಘಾತಕ್ಕೊಳಗಾದರು ಮತ್ತು ಇದು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು.

ಪಾಕಿಸ್ತಾನಕ್ಕೆ ಸಂಕಷ್ಟ

ಪಂದ್ಯದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಅದು ನಾಟೌಟ್ ಆಗಿತ್ತು ಎಂದು ನಂಬಿದ್ದೇವೆ. ಫಖರ್ ಅವರನ್ನು ಔಟ್ ಎಂದು ನೀಡದಿದ್ದರೆ ಪಾಕಿಸ್ತಾನ ಇನ್ನೂ 20 ರನ್ ಗಳಿಸಬಹುದಿತ್ತು ಎಂದ ಅವರು, ಅಂಪೈರ್ ನಿರ್ಧಾರ ತಪ್ಪು ಎಂದು ಖಚಿತವಾಗಿ ಹೇಳಲಿಲ್ಲ.

'ಅಂಪೈರ್‌ಗಳು ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ. ಆದರೆ, ಅದು ಕೀಪರ್‌ಗಿಂತ ಮುಂದೆ ಬೌನ್ಸ್ ಆದಂತೆ ನನಗೆ ಕಾಣುತ್ತಿತ್ತು. ನಾನು ತಪ್ಪಾಗಿರಬಹುದು. (ಫಖರ್) ಬ್ಯಾಟಿಂಗ್ ಮಾಡುತ್ತಿದ್ದ ರೀತಿ, ಪವರ್‌ಪ್ಲೇ ಮೂಲಕ ಬ್ಯಾಟಿಂಗ್ ಮಾಡಿದ್ದರೆ, ನಾವು ಬಹುಶಃ 190 ರನ್ ಗಳಿಸುತ್ತಿದ್ದೆವು. ಆದರೆ, ಅವು ಅಂಪೈರ್‌ಗಳು ತೆಗೆದುಕೊಳ್ಳಬೇಕಾದ ನಿರ್ಧಾರ. ನನಗೆ, ಅದು ಕೀಪರ್‌ಗಿಂತ ಮೊದಲು ಬೌನ್ಸ್ ಆದಂತೆ ಕಾಣುತ್ತಿತ್ತು. ನಾನು ತಪ್ಪಾಗಿರಬಹುದು, ಆದರೆ ಅಂಪೈರ್ ಕೂಡ ತಪ್ಪಾಗಿರಬಹುದು. ಚೆಂಡು ನೆಲವನ್ನು ಮುಟ್ಟಿದೆ ಎಂದು ನಮಗೆ ಅನಿಸಿತು. ಆದರೆ, ಅಂಪೈರ್ ನಿರ್ಧಾರವೇ ಅಂತಿಮ' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಸಿನಿಮಾ ಟಿಕೆಟ್ 200 ರೂಪಾಯಿ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಸುಂಕಾಸ್ತ್ರ, H-1B ಶುಲ್ಕ ಹೆಚ್ಚಳ ವಿವಾದ: ಜೈಶಂಕರ್‌-ಮಾರ್ಕೊ ರುಬಿಯೊ ಭೇಟಿ ಬೆನ್ನಲ್ಲೇ ಭಾರತದ ಸಂಬಂಧ ನಿರ್ಣಾಯಕ ಎಂದ ಅಮೆರಿಕಾ

ಉಪ್ರಾಷ್ಟ್ರಪತಿ ಕಚೇರಿಯಲ್ಲಿ ಧನ್ಕರ್ ನೇಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ ಗೇಟ್ ಪಾಸ್: ಹೊಸ ಸಿಬ್ಬಂದಿಗಳ ನೇಮಿಸಿದ VP Radhakrishnan!

"False Hindu God": ಅಮೆರಿಕದಲ್ಲಿ ಹನುಮಂತನ ಪ್ರತಿಮೆ ಬಗ್ಗೆ ರಿಪಬ್ಲಿಕನ್ ನಾಯಕನ ವಿವಾದಾತ್ಮಕ ಹೇಳಿಕೆ!

GST ಕಡಿತ, ಹಬ್ಬದ ಸೀಸನ್ ನಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಗಗನಕ್ಕೆ; ಎಂದಿಗಿಂತ ಶೇ.50 ರಷ್ಟು ಹೆಚ್ಚಳ!

SCROLL FOR NEXT