ಆರ್ ಅಶ್ವಿನ್ 
ಕ್ರಿಕೆಟ್

'ಹ್ಯಾರಿಸ್ ರೌಫ್‌ಗೆ ಧನ್ಯವಾದಗಳು': ಭಾರತದ ಏಷ್ಯಾಕಪ್ ಗೆಲ್ಲಲು ಪಾಕಿಸ್ತಾನದ ವೇಗಿಯೇ ಕಾರಣ; ಆರ್ ಅಶ್ವಿನ್ ಶ್ಲಾಘನೆ

ಭಾರತ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ಮೈದಾನದಲ್ಲಿ ಸನ್ನೆಗಳನ್ನು ಮಾಡಿ ಸುದ್ದಿಯಲ್ಲಿದ್ದ ರೌಫ್, ಫೈನಲ್‌ನಲ್ಲಿ ಕೇವಲ 3.4 ಓವರ್‌ಗಳಲ್ಲಿ 50 ರನ್‌ಗಳನ್ನು ನೀಡಿ, ಪಾಕಿಸ್ತಾನದ ಅತ್ಯಂತ ದುಬಾರಿ ಬೌಲರ್ ಆದರು.

2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 147 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ತಿಲಕ್ ವರ್ಮಾ ಜವಾಬ್ದಾರಿಯನ್ನು ವಹಿಸಿಕೊಂಡು ಪಂದ್ಯ ಗೆಲ್ಲಿಸುವಲ್ಲಿ ಯಶಸ್ವಿಯಾದರು. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 53 ಎಸೆತಗಳಲ್ಲಿ 69 ರನ್ ಗಳಿಸಿದ ತಿಲಕ್ ಅವರ ಪ್ರದರ್ಶನವನ್ನು ಹೊಗಳಿದರು. ಆದರೆ, ಭಾರತದ ಗೆಲುವಿಗೆ ಸಹಾಯ ಮಾಡಿದ್ದಕ್ಕಾಗಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಭಾರತ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ಮೈದಾನದಲ್ಲಿ ಸನ್ನೆಗಳನ್ನು ಮಾಡಿ ಸುದ್ದಿಯಲ್ಲಿದ್ದ ರೌಫ್, ಫೈನಲ್‌ನಲ್ಲಿ ಕೇವಲ 3.4 ಓವರ್‌ಗಳಲ್ಲಿ 50 ರನ್‌ಗಳನ್ನು ನೀಡಿ, ಪಾಕಿಸ್ತಾನದ ಅತ್ಯಂತ ದುಬಾರಿ ಬೌಲರ್ ಆದರು. ಹೀಗಾಗಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ರೌಫ್ ವಹಿಸಿದ ನಿರ್ಣಾಯಕ ಪಾತ್ರವನ್ನು ಅಶ್ವಿನ್ ಶ್ಲಾಘಿಸಿದ್ದಾರೆ.

'ತಿಲಕ್ ವರ್ಮಾ ಸಂಪೂರ್ಣ ಪಂದ್ಯವನ್ನೇ ತನ್ನತ್ತ ತಿರುಗಿಸಿಕೊಂಡರು. ತಿಲಕ್ ವರ್ಮಾ ಉತ್ತಮವಾಗಿ ಆಡಿದರು ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಒತ್ತಡದಲ್ಲಿ ಶಾಂತವಾಗಿ ಮತ್ತು ಸಂಯಮದಿಂದ ಇದ್ದರು. ಅತ್ಯುತ್ತಮ ಆಟ ಅದಾಗಿತ್ತು. ಭಾರತವು ತುಂಬಾ ಅನಿಶ್ಚಿತ ಪರಿಸ್ಥಿತಿಯಲ್ಲಿತ್ತು. ಹ್ಯಾರಿಸ್ ರೌಫ್‌ಗೆ ಧನ್ಯವಾದಗಳು, ನಾವು ಪಂದ್ಯವನ್ನು ಸುಲಭವಾಗಿ ಗೆದ್ದಿದ್ದೇವೆ' ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋದಲ್ಲಿ ಹೇಳಿದರು.

'ತಿಲಕ್ ವರ್ಮಾ ಒತ್ತಡವನ್ನು ನಿಭಾಯಿಸಿದರು. ಅವರು ಸ್ಪಿನ್ ಬೌಲರ್‌ಗೆ ನಿಜವಾಗಿಯೂ ಚೆನ್ನಾಗಿ ಆಡಿದರು. ಅವರು ಸ್ವೀಪ್‌ಗಳನ್ನು ಆಡಿದರು, ಅವರು ನೆಲಕ್ಕೆ ಹೊಡೆಯಲು ಸಾಧ್ಯವಾಯಿತು. ವಿಕೆಟ್ ಮೇಲಿನ ಬೌನ್ಸ್ ಸ್ವಲ್ಪ ಸ್ಟಿಕ್ಕಿ ಆಗಿದೆ ಎಂದು ಅವರು ಅರಿತುಕೊಂಡರು ಮತ್ತು ವಿಕೆಟ್‌ನಿಂದ ನೇರವಾಗಿ ಆಡಲು ಪ್ರಾರಂಭಿಸಿದರು. ಈ ಶಾಟ್ ಅನ್ನು ಹೊಡೆಯುವುದು ಸುಲಭ ಎಂದು ಜನರು ಭಾವಿಸುತ್ತಾರೆ. ಆದರೆ, ಕಷ್ಟ' ಎಂದು ಅವರು ಹೇಳಿದರು.

ಪಂದ್ಯದಲ್ಲಿ ಒಟ್ಟು ಆರು ವಿಕೆಟ್ ಪಡೆದ ಭಾರತದ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಅವರನ್ನು ಅಶ್ವಿನ್ ಶ್ಲಾಘಿಸಿದರು.

'ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಅವರಿಗೆ ನಾನು ಕ್ರೆಡಿಟ್ ನೀಡಲು ಬಯಸುತ್ತೇನೆ. ಇದು ಮುಂದಿನ ಹಂತದ ಪುನರಾಗಮನವಾಗಿತ್ತು. ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಅತ್ಯುತ್ತಮ ಆರಂಭ ನೀಡಿದರು. ಆದಾಗ್ಯೂ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವ್ಯತ್ಯಾಸ ಇದು. ಶ್ರೀಲಂಕಾ ನಮ್ಮ ಸ್ಪಿನ್ನರ್‌ಗಳನ್ನು ಸುಂದರವಾಗಿ ನಿರ್ವಹಿಸಿತು ಮತ್ತು ಸರಿಯಾದ ಶಾಟ್ ಆಯ್ಕೆ ಸಹ ಮಾಡಿತು. ಏಷ್ಯಾದ ತಂಡಗಳನ್ನು ನೀವು ನೋಡಿದರೆ, ಪಾಕಿಸ್ತಾನವು ಉತ್ತಮ ಸ್ಪಿನ್ ಆಟಗಾರರನ್ನು ಹೊಂದಿದೆ. ಆದಾಗ್ಯೂ, ಇದು ದೊಡ್ಡ ಪಂದ್ಯದ ಒತ್ತಡವಾಗಿತ್ತು. ಈ ಒತ್ತಡವನ್ನು ಎದುರಿಸಬಲ್ಲ ಅನೇಕ ಆಟಗಾರರು ಭಾರತ ತಂಡದಲ್ಲಿದ್ದಾರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!

Elephant stolen: ಜಾರ್ಖಂಡ್‌ನಿಂದ 'ಕಳುವಾಗಿದ್ದ ಹೆಣ್ಣಾನೆ' ಬಿಹಾರದಲ್ಲಿ ಪತ್ತೆ! ಸಿಕ್ಕಿದ್ದು ಹೇಗೆ ಗೊತ್ತಾ?

ಲಡಾಖ್ ಜನರಿಗೆ ಮೋದಿ 'ದ್ರೋಹ'; ಪೊಲೀಸ್ ಗುಂಡಿನ ದಾಳಿ ಬಗ್ಗೆ ನ್ಯಾಯಾಂಗ ತನಿಖೆಗೆ ರಾಹುಲ್ ಆಗ್ರಹ

ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ; Video

SCROLL FOR NEXT