ಜಸ್ಪ್ರೀತ್ ಬುಮ್ರಾ 
ಕ್ರಿಕೆಟ್

'ಜಸ್ಪ್ರೀತ್ ಬುಮ್ರಾ ಉತ್ತರವಾಗಿರಲು ಸಾಧ್ಯವಿಲ್ಲ': ಗೌತಮ್ ಗಂಭೀರ್, ಶುಭಮನ್ ಗಿಲ್ ನಿರ್ಧಾರ ಟೀಕಿಸಿದ ವರುಣ್ ಆರನ್!

ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಭಾರತವು ಬಹಳಷ್ಟು ಆಲ್‌ರೌಂಡರ್‌ಗಳನ್ನು ಅವಲಂಬಿಸಿದೆ ಎಂದು ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಗಮನಸೆಳೆದರು.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಪ್ಲೇಯಿಂಗ್ XI ನಲ್ಲಿ ಕುಲದೀಪ್ ಯಾದವ್ ಅವರನ್ನು ಸೇರಿಸಿಕೊಳ್ಳದಿರುವ ನಿರ್ಧಾರವು ಇದೀಗ ಹಲವರಿಗೆ ಇಷ್ಟವಾಗಿಲ್ಲ. ಭಾರತವು ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಶಿವಂ ದುಬೆ ಸೇರಿ ನಾಲ್ಕು ವೇಗಿಗಳು ಇದ್ದರೆ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಎಂಬ ಇಬ್ಬರು ಸ್ಪಿನ್ನರ್‌ಗಳೊಂದಿಗೆ ತಂಡವನ್ನು ಆಯ್ಕೆ ಮಾಡಿತು. ಬ್ರಾರ್ ಮತ್ತು ಕೃಷ್ಣ ಆರಂಭಿಕ ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ, ಲಿಯಾಮ್ ಡಾಸನ್ ಮತ್ತು ಜೋ ರೂಟ್ ತಜ್ಞ ಸ್ಪಿನ್ನರ್ ಅನುಪಸ್ಥಿತಿಯ ಲಾಭ ಪಡೆದರು. ಭಾರತದ ಮಾಜಿ ವೇಗಿ ವರುಣ್ ಆರನ್ ತಂಡದ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿದರು ಮತ್ತು ಪ್ರತಿ ಬಾರಿಯು ಬುಮ್ರಾ ಅವರೇ ಭಾರತವನ್ನು ಸಮಸ್ಯೆಯಿಂದ ಪಾರು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

'ಕುಲದೀಪ್ ಎಡಗೈ ಮಣಿಕಟ್ಟಿನ ಸ್ಪಿನ್ನರ್, ಅವರು ಸ್ವಾಭಾವಿಕವಾಗಿ ಸಾಕಷ್ಟು ತಿರುವು ಪಡೆಯುತ್ತಾರೆ ಮತ್ತು ಹಲವು ವ್ಯತ್ಯಾಸಗಳನ್ನು ಹೊಂದಿರುತ್ತಾರೆ. ಅಕ್ಷರ್ ಪಟೇಲ್ ಆರ್ಮ್ ಬಾಲ್‌ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ. ಅವು ಹೆಚ್ಚು ಸ್ಪಿನ್ ಆಗುವುದಿಲ್ಲ ಮತ್ತು ಆರ್ಮ್ ಬಾಲ್ ಬಿಡುಗಡೆಯಾಗುವುದರಿಂದ ಅದು ತಿರುಗುವ ಬದಲು ನೇರವಾಗಿ ಹೋಗುತ್ತದೆ. ವಿಕೆಟ್‌ಗಳನ್ನು ಪಡೆಯಲು ನೀವು ನಿಮ್ಮ ವೇಗ ಮತ್ತು ಸೀಮ್ ಸ್ಥಾನದೊಂದಿಗೆ ಆಟವಾಡಬೇಕು' ಎಂದು ವರುಣ್ ಹೇಳಿದರು.

'ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಅಕ್ಷರ್ ಅವರನ್ನು ಆಫ್-ಸ್ಪಿನ್ನರ್ ಆಗಿ ಆಡಲು ಸಜ್ಜಾಗುತ್ತಿದ್ದಾರೆ. ಅವರು ಚೆಂಡನ್ನು ಬ್ಯಾಟ್ಸ್‌ಮನ್‌ನತ್ತ ಟರ್ನ್ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮಧ್ಯದ ಓವರ್‌ಗಳಲ್ಲಿ ನೀವು ವಿಕೆಟ್‌ಗಳನ್ನು ಹೇಗೆ ಪಡೆಯುತ್ತೀರಿ? ಜಸ್ಪ್ರೀತ್ ಬುಮ್ರಾ ನಿಮ್ಮ ಎಲ್ಲ ಸಮಸ್ಯೆಗಳಿಗೆ ನಿಮ್ಮ ಉತ್ತರವಾಗಿರಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಭಾರತವು ಬಹಳಷ್ಟು ಆಲ್‌ರೌಂಡರ್‌ಗಳನ್ನು ಅವಲಂಬಿಸಿದೆ ಎಂದು ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಗಮನಸೆಳೆದರು ಮತ್ತು ಹಿಂದೆಯೂ ಸಹ, ತಂಡವು ಕೆಲವು ಮ್ಯಾಜಿಕ್ ಒದಗಿಸಲು ಬುಮ್ರಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದರು.

'ನೋಡಿ ವರುಣ್, ಕೆಲವೊಮ್ಮೆ ಅವರೇ (ಬುಮ್ರಾ) ಎಲ್ಲದಕ್ಕೂ ಪರಿಹಾರವಾಗಿರುತ್ತಾರೆ. ಆದರೆ ಬುಮ್ರಾ ತಂಡದಲ್ಲಿರುವುದರ ಒಂದು ಸವಾಲು ಏನೆಂದರೆ, ಆ ಪರಿಹಾರ ನೀಡುವವರು ಅವರೇ ಎಂದು ನಿಮಗೆ ಯಾವಾಗಲೂ ತಿಳಿದಿರುತ್ತದೆ ಮತ್ತು ನೀವು ಅವರನ್ನೇ ಅವಲಂಬಿಸಿರುತ್ತೀರಿ' ಎಂದು ನಾಯರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು