ಐಸಿಸಿ ಅಧ್ಯಕ್ಷ ಜಯ್ ಶಾ 
ಕ್ರಿಕೆಟ್

T20 ವಿಶ್ವಕಪ್ ಟೂರ್ನಮೆಂಟ್ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ವೀಕ್ಷಣೆ, ಹೊಸ ದಾಖಲೆ; ICC ಅಧ್ಯಕ್ಷ ಜಯ್ ಶಾ

ಪಂದ್ಯಾವಳಿಯ ಎರಡು ಸೆಮಿಫೈನಲ್‌ಗಳು ಮತ್ತು ಫೈನಲ್ ಪಂದ್ಯ ಇನ್ನೂ ನಡೆಯಬೇಕಿದೆ. ಆದರೆ, ಇದು ಈಗಾಗಲೇ 2024ರಲ್ಲಿ ಅಮೆರಿಕದಲ್ಲಿ ನಡೆದ ಕೊನೆಯ ಆವೃತ್ತಿಯ ಪಂದ್ಯಾವಳಿಯಲ್ಲಿ ದಾಖಲಾದ ಅಂಕಿಅಂಶಗಳನ್ನು ದಾಟಿದೆ.

ನವದೆಹಲಿ: ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ ಎಲ್ಲ ಪ್ರಸಾರ ದಾಖಲೆಗಳನ್ನು ಮುರಿದಿದ್ದು, ವೀಕ್ಷಕರ ಸಂಖ್ಯೆ 500 ಮಿಲಿಯನ್ ದಾಟಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಬುಧವಾರ ಹೇಳಿದ್ದಾರೆ.

ಪಂದ್ಯಾವಳಿಯು ಪ್ರಪಂಚದಾದ್ಯಂತದ ಅಭಿಮಾನಿಗಳು ಸುಲಭವಾಗಿ ವೀಕ್ಷಿಸಬಹುದಾದ ಪಂದ್ಯವೆಂದು ಪರಿಗಣಿಸಲ್ಪಟ್ಟಿದೆ. ಪಂದ್ಯಗಳು ರೋಮಾಂಚನಕಾರಿಯಾಗಿದ್ದರಿಂದ ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಿನ ಜನರು ವೀಕ್ಷಿಸಿದ್ದಾರೆ.

'ಐಸಿಸಿ ಟಿ20 ವಿಶ್ವಕಪ್ 2026ರ ಪಂದ್ಯಾವಳಿಯನ್ನು ಜಾಗತಿಕಗೊಳಿಸುವ ಮತ್ತು ಜನರಿಗೆ ಸುಲಭವಾಗಿ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಾರಂಭವಾಯಿತು. ಭಾರತದಲ್ಲಿ ಪಂದ್ಯಾವಳಿಯ ವೀಕ್ಷಕರ ಸಂಖ್ಯೆ 500 ಮಿಲಿಯನ್ ದಾಟಿದೆ ಎಂದು ತಿಳಿದು ನನಗೆ ವಿನೀತನಾಗಿದ್ದೇನೆ. ಇದು T20 ವಿಶ್ವಕಪ್‌ ಇತಿಹಾಸದಲ್ಲಿ ಈವರೆಗಿನ ಅತ್ಯಧಿಕ ವೀಕ್ಷಣೆಯಾಗಿದೆ' ಎಂದು ಶಾ ತಮ್ಮ 'X' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

'ಜಿಯೋಹಾಟ್‌ಸ್ಟಾರ್‌ನ ಏಕಕಾಲಿಕ ವೀಕ್ಷಕರು 60.5 ಮಿಲಿಯನ್ ಗರಿಷ್ಠ ಮಟ್ಟವನ್ನು ತಲುಪಿರುವುದನ್ನು ನೋಡುವುದು ಸಹ ಹೃದಯಸ್ಪರ್ಶಿಯಾಗಿತ್ತು. ಇಂದು ರಾತ್ರಿ ಪ್ರಾರಂಭವಾಗುವ ಟೂರ್ನಮೆಂಟ್‌ನ ನಾಕೌಟ್ ಪಂದ್ಯಗಳೊಂದಿಗೆ, ನಮ್ಮ ಕಾರ್ಯಕ್ರಮಗಳಿಗೆ ಭಾರತೀಯ ಅಭಿಮಾನಿಗಳಿಂದ ಸಿಗುವ ಅಪಾರ ಪ್ರೀತಿಯು ಹೆಚ್ಚಿನ ದಾಖಲೆಗಳನ್ನು ಮುರಿಯಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ' ಎಂದಿದ್ದಾರೆ.

ಪಂದ್ಯಾವಳಿಯ ಎರಡು ಸೆಮಿಫೈನಲ್‌ಗಳು ಮತ್ತು ಫೈನಲ್ ಪಂದ್ಯ ಇನ್ನೂ ನಡೆಯಬೇಕಿದೆ. ಆದರೆ, ಇದು ಈಗಾಗಲೇ 2024ರಲ್ಲಿ ಅಮೆರಿಕದಲ್ಲಿ ನಡೆದ ಕೊನೆಯ ಆವೃತ್ತಿಯ ಪಂದ್ಯಾವಳಿಯಲ್ಲಿ ದಾಖಲಾದ ಅಂಕಿಅಂಶಗಳನ್ನು ದಾಟಿದೆ.

2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಕೂಡ ಬೃಹತ್ ಯಶಸ್ಸು ಕಂಡಿತ್ತು. ಅದು ಈಗಾಗಲೇ ಹೊಸ ದಾಖಲೆಗಳನ್ನು ನಿರ್ಮಿಸಿತ್ತು. ಪಂದ್ಯಾವಳಿಯ ಒಟ್ಟು ವೀಕ್ಷಣಾ ಸಮಯ 250 ಬಿಲಿಯನ್ ನಿಮಿಷಗಳನ್ನು ಸಾಧಿಸಿತು ಮತ್ತು ಒಂದು ಹಂತದಲ್ಲಿ, ಗರಿಷ್ಠ 122 ಮಿಲಿಯನ್ ಜನರು ಏಕಕಾಲದಲ್ಲಿ ದೂರದರ್ಶನದಲ್ಲಿ ವೀಕ್ಷಿಸುತ್ತಿದ್ದರು.

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಟಿ20 ವಿಶ್ವಕಪ್ 2026 ಫೆಬ್ರುವರಿ 7 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 8 ರಂದು ಮುಕ್ತಾಯಗೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು

CM ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ: ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ; Video

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

SCROLL FOR NEXT