ರವಿ ಶಾಸ್ತ್ರಿ 
ಕ್ರಿಕೆಟ್

T20 World Cup 2026: ಸಂಜು ಸ್ಯಾಮ್ಸನ್ ಈಗ ಪ್ರಬುದ್ಧರಾಗಿದ್ದಾರೆ; ತಂಡದಿಂದ ಅಭಿಷೇಕ್ ಶರ್ಮಾ ಕೈಬಿಡಬೇಡಿ; ರವಿ ಶಾಸ್ತ್ರಿ

ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಬ್ಯಾಟ್ಸ್‌ಮನ್ 42 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ನೆರವಾದರು.

ಮುಂಬೈ: ಸ್ಥಿರತೆ ಮತ್ತು ಬುದ್ಧಿವಂತ ಶಾಟ್ ಆಯ್ಕೆಯ ಅಗತ್ಯವನ್ನು ಅರಿತುಕೊಂಡ ನಂತರ ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅನುಭವಿ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 'ಪ್ರಬುದ್ಧ'ರಾಗಿದ್ದಾರೆಂದು ತೋರುತ್ತದೆ ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಬ್ಯಾಟ್ಸ್‌ಮನ್ 42 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ನೆರವಾದರು.

ಈ ಪಂದ್ಯಕ್ಕೂ ಮೊದಲು, ವೆಸ್ಟ್ ಇಂಡೀಸ್ ವಿರುದ್ಧದ ವರ್ಚುಯಲ್ ಕ್ವಾರ್ಟರ್ ಫೈನಲ್‌ನಲ್ಲಿ ಅವರ 50 ಎಸೆತಗಳಲ್ಲಿ 97 ರನ್‌ಗಳು ಐದು ವಿಕೆಟ್‌ ಅಂತರದ ಭಾರತದ ಗೆಲುವಿಗೆ ಅಡಿಪಾಯ ಹಾಕಿದವು.

'ಅಂತಿಮವಾಗಿ ಅವರು ತಾವು ಹೆಚ್ಚು ಸ್ಥಿರವಾಗಿರಬೇಕು ಎಂಬ ಅಂಶವನ್ನು ಅರಿತುಕೊಂಡಿದ್ದಾರೆ ಮತ್ತು ಒಪ್ಪಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ಶಾಟ್ ಆಯ್ಕೆಯಲ್ಲಿ ಬುದ್ಧಿವಂತರಾಗಿರಬೇಕು ಮತ್ತು ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು. ಸಂಜು ಸದ್ಯ ಪ್ರತಿಯೊಂದು ಶಾಟ್ ಆಯ್ಕೆಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಆದರೆ, ಏಕಾಗ್ರತೆಯಲ್ಲಿ ವಿಫಲರಾಗಿದ್ದಾರೆ' ಎಂದು ಶಾಸ್ತ್ರಿ 'ದಿ ಐಸಿಸಿ ರಿವ್ಯೂ' ನಲ್ಲಿ ಹೇಳಿದರು.

'ಅವರು ಮಾನಸಿಕವಾಗಿ ಸದೃಢರಾಗಿದ್ದಾರೆಂದು ನಾನು ಭಾವಿಸುತ್ತೇನೆ ಮತ್ತು ಅವರು ತಂಡಕ್ಕೆ ಬಂದಾಗಿನಿಂದ ಅವರ ಕೌಶಲ್ಯ ಅಥವಾ ಪ್ರತಿಭೆಯನ್ನು ಯಾರೂ ಅನುಮಾನಿಸಿಲ್ಲ. ಸ್ಥಿರತೆ ಇಲ್ಲದಿರುವುದಕ್ಕೆ ಜನರು ನಿರಾಶೆಗೊಂಡಿದ್ದರು. ಆದರೆ, ಈಗ ಅವರದಲ್ಲಿ ಪ್ರಬುದ್ಧತೆ ಕಾಣಿಸುತ್ತಿದೆ' ಎಂದು ಅವರು ಹೇಳಿದರು.

ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಪಂದ್ಯಾವಳಿಯ ಆರಂಭದಲ್ಲಿ ಇಶಾನ್ ಕಿಶನ್ ಅವರನ್ನು ಆರಂಭಿಕ ಆಟಗಾರನಾಗಿ ಪರಿಗಣಿಸಿದಾಗ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಲಾಯಿತು ಮತ್ತು ರಿಂಕು ಸಿಂಗ್ ಕೂಡ ಮುಂದಕ್ಕೆ ಹೋದರು. ಆದರೆ, ಅಂತಿಮವಾಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದರು ಮತ್ತು ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆದರೂ, ಸಂಜು ಸ್ಯಾಮ್ಸನ್ ಅವರ ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ ಎಂದು ಶಾಸ್ತ್ರಿ ನಂಬುತ್ತಾರೆ.

'ಅವರಿಗೆ ಇನ್ನೂ 31 ವರ್ಷ ವಯಸ್ಸು ಮತ್ತು ನಿಜವಾದ ಪಂದ್ಯ ವಿಜೇತ. ಗುರುವಾರದ ಪಂದ್ಯದಲ್ಲಿ ಅಂತಹ ಹೊಡೆತಗಳನ್ನು ನೀವು ಆಡುತ್ತಿರುವುದನ್ನು ನೋಡಿದಾಗ, ಅಲ್ಲಿ ಕ್ಲಾಸ್ ಇದೆ, ಟಚ್ ಇದೆ, ಅಲ್ಲಿ ಶಕ್ತಿ ಇದೆ, ಅಲ್ಲಿ ಆಕ್ರಮಣಕಾರಿ ಹೋರಾಟವಿದೆ. ಇದು ನಂಬಲಸಾಧ್ಯ' ಎಂದರು.

'ಅಭಿಷೇಕ್ ಜೊತೆ ಅಂಟಿಕೊಳ್ಳಿ'

ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ್‌ನಲ್ಲಿರುವುದು ಸಂತಸದ ವಿಚಾರವಾದರೆ ಅವರ ಆರಂಭಿಕ ಜೊತೆಗಾರ ಅಭಿಷೇಕ್ ಶರ್ಮಾ ಅವರ ಫಾರ್ಮ್ ಇದೀಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುನ್ನ ತೀವ್ರ ಕಳವಳಕಾರಿಯಾಗಿದೆ.

ಅಭಿಷೇಕ್ ಟಿ20 ವಿಶ್ವಕಪ್‌ನ ಏಳು ಇನಿಂಗ್ಸ್‌ಗಳಿಂದ ಕೇವಲ 89 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿದ್ದರೂ, ಭಾರತ ಟಿ20ಐ ಶ್ರೇಯಾಂಕದಲ್ಲಿ ನಂ.1 ಬ್ಯಾಟ್ಸ್‌ಮನ್‌ನೊಂದಿಗೆ ಮುಂದುವರಿಯಬೇಕೆಂದು ಶಾಸ್ತ್ರಿ ನಂಬುತ್ತಾರೆ.

'ತಂಡವು ಈಗ ಅವರೊಂದಿಗೆ ಅಂಟಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅದರಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಆಟಗಾರನಿಗೆ ತನ್ನ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ನಂಬಲು ಹೇಳಿ. ಅವನು ಆತ್ಮವಿಶ್ವಾಸದಿಂದ ಮತ್ತು ಸಕಾರಾತ್ಮಕವಾಗಿ ಆಡಬೇಕು. ರಕ್ಷಣಾತ್ಮಕವಾಗಿರಬಾರದು ಅಥವಾ ಅಪಾಯಗಳನ್ನು ತೆಗೆದುಕೊಳ್ಳಲು ಹೆದರಬಾರದು. ನಾವು ನಿಮ್ಮನ್ನು ಬೆಂಬಲಿಸುತ್ತೇವೆ, ನೀವು ನಿಮ್ಮ ಸಾಮರ್ಥ್ಯಗಳನ್ನು ನಂಬಿ ಮತ್ತು ಹೋಗಿ ಆಟವಾಡಿ. ಕೊನೆಯ ಪಂದ್ಯವು ನಿಮಗೆ ಅತ್ಯುತ್ತಮ ಆಟವಾಗಬಹುದು' ಎಂದು ಹೇಳಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಬಜೆಟ್ 2026: 'ವೈಟ್ ಟಾಪಿಂಗ್‌, ಮಳೆ ಪ್ರವಾಹ ನಿರ್ವಹಣೆ..' ಬೆಂಗಳೂರಿಗೆ ಮಹತ್ವದ ಘೋಷಣೆಗಳು

ನುಂಗಮಬಕ್ಕಂ ಹೋಟಲ್‌ನಲ್ಲಿ ನಟ ವಿಜಯ್-ತ್ರಿಷಾ ಒಟ್ಟಿಗೆ ಇದ್ದಿದ್ದನ್ನು ನೋಡಿದ್ದೇನೆ, Video Viral!

Karnataka Budget 2026: ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರ: ಬಜೆಟ್ ವಿರುದ್ಧ ಬಿಜೆಪಿ ಪ್ರತಿಭಟನೆ

Karnataka Budget 2026 Live updates: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮುಕ್ತಾಯ, 3 ಗಂಟೆ 36 ನಿಮಿಷಗಳ ಕಾಲ ಸುಧೀರ್ಷ ಭಾಷಣ ಮಾಡಿದ ಸಿದ್ದರಾಮಯ್ಯ

T20 ವಿಶ್ವಕಪ್ 2026: ಗೆಲುವಿನ ಸನಿಹದಲ್ಲಿದ್ದ England ಗೆ ಆಘಾತ, ಪಂದ್ಯದ ಗತಿಯನ್ನೇ ಬದಲಿಸಿದ 'ಆ ಎರಡು ಓವರ್'

SCROLL FOR NEXT