ಟೀಂ ಇಂಡಿಯಾ 
ಕ್ರಿಕೆಟ್

T20 World Cup 2026 Final: 'ಕಿವೀಸ್ ಶಾಪ'ದಿಂದ ಪಾರಾಗಲು ಭಾರತ ಈ ಮೂರು ತಪ್ಪುಗಳನ್ನು ಮಾಡಲೇಬಾರದು...

ಭಾರತ ತವರು ನೆಲದಲ್ಲಿ ಆಡುವಾಗ ಟ್ರೋಫಿ ಗೆಲ್ಲಬೇಕಾದರೆ, ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ಮೂರು ಪ್ರಮುಖ ತಪ್ಪುಗಳು ಅಥವಾ ಸವಾಲುಗಳನ್ನು ಎದುರಿಸಲೇಬೇಕಾಗುತ್ತದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು 2026ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೊದಲ ತಂಡವಾಗುವ ಗುರಿಯನ್ನು ಹೊಂದಿದ್ದರೆ, ಇತ್ತ ನ್ಯೂಜಿಲೆಂಡ್ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಲು ತವಕಿಸುತ್ತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡಕ್ಕೆ, ಇದು ಕೇವಲ ಮೂರನೇ ಟಿ20 ವಿಶ್ವಕಪ್ ಕಿರೀಟದ ಅನ್ವೇಷಣೆಯಲ್ಲ. ಬದಲಿಗೆ ಇದು 'ಕಿವೀಸ್ ಶಾಪ'ದ ವಿರುದ್ಧದ ಹೋರಾಟವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯದ ಹೊರತಾಗಿಯೂ, ನ್ಯೂಜಿಲೆಂಡ್ ಟೀಂ ಇಂಡಿಯಾ ವಿರುದ್ಧ ವಿಶ್ವಕಪ್ ಇತಿಹಾಸದಲ್ಲಿ 0-3 ಅಂತರದ ದಾಖಲೆ ಹೊಂದಿದ್ದಾರೆ.

ಭಾರತ ತವರು ನೆಲದಲ್ಲಿ ಆಡುವಾಗ ಟ್ರೋಫಿ ಗೆಲ್ಲಬೇಕಾದರೆ, ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡವು ಮೂರು ಪ್ರಮುಖ ತಪ್ಪುಗಳು ಅಥವಾ ಸವಾಲುಗಳನ್ನು ಎದುರಿಸಲೇಬೇಕಾಗುತ್ತದೆ.

1. ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಭೀತಿ

ಬಹುಶಃ ಅತ್ಯಂತ ಕುಖ್ಯಾತ ತಂತ್ರದ ಪ್ರಮಾದವು 2021ರ T20 ವಿಶ್ವಕಪ್ ಸಮಯದಲ್ಲಿ ಸಂಭವಿಸಿದೆ. ಆ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತೀಯ ಆಡಳಿತ ಮಂಡಳಿಯು ಭಯಭೀತರಾಗಿ ರೋಹಿತ್ ಶರ್ಮಾ ಅವರನ್ನು 3ನೇ ಸ್ಥಾನಕ್ಕೆ ಇಳಿಸಿ, ಇಶಾನ್ ಕಿಶನ್ ಅವರನ್ನು ಆರಂಭಿಕ ಆಟಗಾರನಾಗಿ ಬಡ್ತಿ ನೀಡಿತು. ಇದರ ಪರಿಣಾಮವಾಗಿ ಭಾರತವು 110/7 ಸ್ಕೋರ್ ಮಾಡಿ ಕಳಪೆ ಪ್ರದರ್ಶನ ನೀಡಿತು.

ಸೂರ್ಯಕುಮಾರ್ ಯಾದವ್ ನೇತೃತ್ವದ ಈ ತಂಡವು 'ಸ್ವಾತಂತ್ರ್ಯ ಮತ್ತು ಸರಳತೆಯ' ಆಧಾರಸ್ತಂಭದ ಮೇಲೆ ನಿರ್ಮಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರ ಫಾರ್ಮ್ ಕಳವಳಕಾರಿಯಾಗಿರುವುದರಿಂದ, ಭಾರತವು ಫೈನಲ್‌ನಲ್ಲಿ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಲು ಮುಂದಾಗಬಹುದು. ಬ್ಯಾಟಿಂಗ್ ಕ್ರಮಾಂಕದಲ್ಲಿನ ಬದಲಾವಣೆಯು ತಂಡದ ಮೇಲೆ ಪರಿಣಾಮ ಬೀರಬಹುದು ಮತ್ತು ಇದನ್ನು ಟೀಂ ಇಂಡಿಯಾ ತಪ್ಪಿಸಬೇಕಾಗಿದೆ.

2. ಸ್ಪಿನ್ ದಾಳಿಗೆ ಬಲಿಯಾಗುವುದು

ನ್ಯೂಜಿಲೆಂಡ್ ತಂಡವು ಸ್ಪಿನ್ ದಾಳಿಯನ್ನು ರಕ್ಷಣಾತ್ಮಕ ಗುರಾಣಿಯಾಗಿ ಬಳಸುವ ವಿಶಿಷ್ಟ ಕೌಶಲ್ಯವನ್ನು ಹೊಂದಿದೆ. ಅದುವೇ ಭಾರತದ ವಿರುದ್ಧ ಆಕ್ರಮಣಕಾರಿ ಅಸ್ತ್ರವಾಗಿ ಬದಲಾಗುವ ಸಾಧ್ಯತೆ ಇದೆ. 2016ರಲ್ಲಿ, ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಭಾರತವನ್ನು ಸ್ಪಿನ್ನಿಂಗ್ ನಾಗ್ಪುರ ಟ್ರ್ಯಾಕ್‌ನಲ್ಲಿ ಕೇವಲ 79 ರನ್‌ಗಳಿಗೆ ಕಟ್ಟಿಹಾಕಿದರು. ಸದ್ಯ 2026ರ ಪಂದ್ಯಾವಳಿಯಲ್ಲಿಯೂ ಸಹ, ಸ್ಯಾಂಟ್ನರ್ ಭಾರತದ ಅಭಿಮಾನಿಗಳನ್ನು ಮೌನವಾಗಿರುವಂತೆ ನೋಡಿಕೊಳ್ಳುವುದೇ ನಮ್ಮ ಗುರಿ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಸೇರಿದಂತೆ ಭಾರತದ ಮಧ್ಯಮ ಕ್ರಮಾಂಕದ ಆಟಗಾರರು ಸ್ಪಿನ್ ಬೌಲರ್‌ಗಳ ವಿರುದ್ಧ ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡಬಾರದು. ಅವರು ರನ್ ಗಳಿಸುವ ಬದಲು ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಳ್ಳಲು ಪ್ರಯತ್ನಿಸಿದರೆ, ಅಗತ್ಯವಿರುವ ರನ್ ರೇಟ್ ಹೆಚ್ಚಾಗುತ್ತದೆ ಮತ್ತು ತಂಡವು ನಂತರ ಒತ್ತಡದಲ್ಲಿ ಕುಸಿಯಬಹುದು.

3. 2023ರ ಅಹಮದಾಬಾದ್ ಘೋಸ್ಟ್

2023ರ ODI ವಿಶ್ವಕಪ್ ಫೈನಲ್‌ನಲ್ಲಿ ಪ್ರಬಲ ಭಾರತೀಯ ತಂಡವು ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಏಕೆಂದರೆ, ಅವರು ಪಿಚ್ ಅನ್ನು ತಪ್ಪಾಗಿ ಅರ್ಥಮಾಡಿಕೊಂಡರು ಮತ್ತು 'ಅಜೇಯ' ಎಂಬ ಒತ್ತಡವು ತಮ್ಮ ಆಟವನ್ನು ಬಲಪಡಿಸಲು ಅವಕಾಶ ಮಾಡಿಕೊಡಲಿಲ್ಲ. 2026ರ ಫೈನಲ್‌ನ ಮುನ್ನಾದಿನದಂದು, ಸೂರ್ಯಕುಮಾರ್ ಅವರು ನ್ಯೂಜಿಲೆಂಡ್‌ನ ಅಭಿಯಾನವನ್ನು 'ಹೆಚ್ಚು ವೀಕ್ಷಿಸಿಲ್ಲ' ಎಂದು ಒಪ್ಪಿಕೊಂಡರು. ಈ ರೀತಿಯ ಕೆಲವು ಹೇಳಿಕೆಯು ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದೆಂದು ಹೆಸರುವಾಸಿಯಾದ ತಂಡದ ನಿಖರವಾದ ಯೋಜನೆಯ ಕೊರತೆಯನ್ನು ಪ್ರತಿಧ್ವನಿಸುತ್ತದೆ.

ಭಾರತ 2023ರ ಏಕದಿನ ವಿಶ್ವಕಪ್ ಫೈನಲ್‌ಗೆ ಸಾಕಷ್ಟು ಸಿದ್ಧತೆ ನಡೆಸಿಲ್ಲ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಬಂದಿತ್ತು. ಆದರೆ, ಈ ಬಾರಿಯೂ ತಂಡ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಲು ಸಾಧ್ಯವಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳು ನಾಡು ಮಹಿಳೆಯರಿಗೆ TVK ಮುಖ್ಯಸ್ಥ ವಿಜಯ್ ಭರಪೂರ ಘೋಷಣೆ: ಅಧಿಕಾರಕ್ಕೆ ಬಂದರೆ ಏನೇನು ಕೊಡ್ತಾರಂತೆ ನೋಡಿ!-Video

ಬೆಂಗಳೂರಿನಲ್ಲಿ ತಾಪಮಾನ ಏರಿಕೆ: ಬಿಸಿಲ ಝಳಕ್ಕೆ ಜನತೆ ತತ್ತರ, ‘AC City’ ಹೆಗ್ಗಳಿಕೆಗೆ ದಕ್ಕೆ..!

ಅಲೆಗಳಿಗೇ ಸವಾಲು; ಪುರುಷರ ವೃತ್ತಿಯಲ್ಲಿ ಮಂಗಳೂರು ಯುವತಿ ದಿಟ್ಟ ಹೆಜ್ಜೆ: ಆಳ ಸಮುದ್ರ ಮೀನುಗಾರಿಕೆಯಲ್ಲಿ ಪ್ರಾಪ್ತಿ ಮೆಂಡನ್ ಸಾಧನೆ

ಅರ್ಧ ದಿನ ಆತಂಕ ಸೃಷ್ಟಿಸಿದ ಬಾಲಕ: ಕಾಣೆಯಾದ ಪೋರನಿಗಾಗಿ ಇಡೀ ಊರಿಗೆ ಊರೇ ಹುಡುಕಾಟ-ಆತಂಕ; ಕೊನೆಗೆ ಮನೆಯಲ್ಲೇ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆ..!

SCROLL FOR NEXT