ಯೋಗರಾಜ್ ಸಿಂಗ್ ಮತ್ತು ಯುವರಾಜ್ ಸಿಂಗ್ 
ಕ್ರಿಕೆಟ್

Cricket: ಆಟಗಾರ-ವೃತ್ತಿ ಜೀವನದ ನಡುವೆ ಮಹಿಳೆಯರು ಬರಬಾರದು: Yograj Singh ವಿವಾದಾತ್ಮಕ ಹೇಳಿಕೆ!

ಫಿಟ್‌ನೆಸ್‌ಗೂ ನಿವೃತ್ತಿಗೂ ಯಾವುದೇ ಸಂಬಂಧವಿಲ್ಲ. ಮಹಿಳೆಯರು ಆಟಗಾರ ಮತ್ತು ಅವರ ವೃತ್ತಿಜೀವನದ ನಡುವೆ ಬರಬಾರದು ಎಂದು ಯೋಗರಾಜ್ ಸಿಂಗ್ ಪ್ರತಿಪಾದಿಸಿದರು.

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ಈ ಬಾರಿ ಮಹಿಳೆಯರ ಕುರಿತು ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಕೆಲವು ಆಟಗಾರರು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಮಹಿಳೆಯರು ಮತ್ತು ಮಕ್ಕಳೇ ಕಾರಣ ಎಂದು ಹೇಳುವ ಮೂಲಕ ಯೋಗರಾಜ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಇನ್‌ಸೈಡ್‌ಸ್ಪೋರ್ಟ್‌ ಜೊತೆ ಮಾತನಾಡಿರುವ ಯೋಗರಾಜ್ ಸಿಂಗ್, 'ಫಿಟ್‌ನೆಸ್‌ಗೂ ನಿವೃತ್ತಿಗೂ ಯಾವುದೇ ಸಂಬಂಧವಿಲ್ಲ. ಮಹಿಳೆಯರು ಆಟಗಾರ ಮತ್ತು ಅವರ ವೃತ್ತಿಜೀವನದ ನಡುವೆ ಬರಬಾರದು ಎಂದು ಪ್ರತಿಪಾದಿಸಿದರು.

“ಭಾರತದಲ್ಲಿ ಜನರು '40 ವರ್ಷ ತುಂಬಿದ ನಂತರ ನಮಗೆ ವಯಸ್ಸಾಗುತ್ತಿದೆ' ಎಂದು ಹೇಳುವುದನ್ನು ನಾನು ನೋಡಿದ್ದೇನೆ. ಮಹಿಳೆಯರು 30 ವರ್ಷ ತುಂಬಿದಾಗ ನಮ್ಮ ಮಕ್ಕಳು ದೊಡ್ಡವರಾಗಿದ್ದಾರೆ ಎಂದು ಹೇಳುತ್ತಾರೆ. ನಾವು ಏನು ಮಾಡಬಹುದು?

ನಾನು ಈ ಕಟ್ಟುಪಾಡುಗಳನ್ನು ನನ್ನ ಜಿಮ್‌ನಲ್ಲಿ ಪ್ರಾರಂಭಿಸಿದೆ, ಅಲ್ಲಿ ನಾನು ನಿರ್ದೇಶಕನಾಗಿದ್ದೇನೆ ಮತ್ತು ಹಿರಿಯ ನಾಗರಿಕರನ್ನು ಆಕಾರಕ್ಕೆ ತರಲು ನಾನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದೆ ಎಂದು ಯೋಗರಾಜ್ ತಿಳಿಸಿದರು.

"ಏನಾಗುತ್ತದೆ ಎಂದು ನಿಮಗೆ ತಿಳಿದಿದೆ: ನಿಮ್ಮ ಮನೆಯ ಮಹಿಳೆಯರು, ನಿಮ್ಮ ಹೆಂಡತಿಯರು, ಅವರು ನಿಮಗೆ ತರಬೇತಿ ನೀಡಲು ಪ್ರಾರಂಭಿಸುತ್ತಾರೆ, ನಿವೃತ್ತಿ ಹೊಂದುವ ಸಮಯ, ಕುಟುಂಬವನ್ನು, ಮಕ್ಕಳನ್ನು ನೋಡಿಕೊಳ್ಳುವ ಸಮಯ ಎಂದು ಹೇಳುತ್ತಾರೆ.

ಆದ್ದರಿಂದ ಮಹಿಳೆಯರು ಕ್ರೀಡಾಪಟುವಿನ ದಂತಕಥೆಯ ನಿರೀಕ್ಷೆಯ ನಡುವೆ ಬರಬಾರದು ಎಂದು ನಾನು ನಂಬುತ್ತೇನೆ, ಉದಾತ್ತ ಪುರುಷರು ಮತ್ತು ಆಟಗಾರರಿಗೆ ಯಾವುದೇ ಧರ್ಮವಿಲ್ಲ ಅವರು ದೇವರಿಗೆ ಸೇರಿದವರು. ಅವರು ಬದುಕಿರುವವರೆಗೂ, ಅವರು ಬಹಳಷ್ಟು ಕೆಲಸಗಳನ್ನು ಮಾಡಬಹುದು" ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಧೋನಿ ನಿವೃತ್ತಿ ಕುರಿತು ಕಿಡಿಕಾರಿದ್ದ ಯೋಗರಾಜ್ ಅವರನ್ನೂ ಯಾರು ನಿವೃತ್ತಿ ಪಡೆಯುವಂತೆ ಒತ್ತಾಯಿಸಬಾರದು ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

West Asia Conflict: ಪ್ರಧಾನಿ ಮೋದಿ-ಟ್ರಂಪ್ ದೂರವಾಣಿ ಮಾತುಕತೆ; ಎಲಾನ್ ಮಸ್ಕ್ ಎಂಟ್ರಿ, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

Murshidabad ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 144 ಸೆಕ್ಷನ್ ಜಾರಿ, ಹಲವರಿಗೆ ಗಾಯ

Video: ಚಪ್ಪಲಿ, ಶೂ ಧರಿಸಿ ದೇಗುಲದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌: ಸ್ಥಳೀಯರ ತೀವ್ರ ವಿರೋಧ, ಹಲ್ಲೆ

ಹಾರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ: ತೆರಿಗೆ ವ್ಯವಸ್ಥೆ ಜಾರಿಗೆ ಇರಾನ್ ಮುಂದು, ವಿರೋಧವಾಗಿ G7 ಒಕ್ಕೂಟ ರೂಪಿಸಲು ರೂಬಿಯೋ ಕರೆ

SCROLL FOR NEXT