ಹಾರ್ದಿಕ್ ಪಾಂಡ್ಯ  
ಕ್ರಿಕೆಟ್

'ನಾಯಕ ಸ್ಥಾನದಿಂದ ಹಾರ್ದಿಕ್ ಪಾಂಡ್ಯ ವಜಾಗೊಳಿಸಿ, ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಿ': MIಗೆ ಸಂಜಯ್ ಮಂಜ್ರೇಕರ್ ಸಲಹೆ

ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡಕ್ಕೆ ಕರೆತರುವಾಗ ಮುಂಬೈ ತಂಡವು ಆಶಿಶ್ ನೆಹ್ರಾ ಅವರನ್ನು ಸಹ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು ಎಂದರು.

ಮುಂಬೈ ಇಂಡಿಯನ್ಸ್ (MI) ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿ, ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ನೇಮಿಸಬೇಕೆಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಒತ್ತಾಯಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಸೋಲಿನಿಂದ ಮುಂಬೈ ತಂಡ ಐಪಿಎಲ್ 2026ರ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಐದು ಬಾರಿಯ ಚಾಂಪಿಯನ್ ತಂಡವು ಈ ಆವೃತ್ತಿಯಲ್ಲಿ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ ಮತ್ತು ಹಾರ್ದಿಕ್ ಅವರ ನಾಯಕತ್ವವನ್ನು ಅಭಿಮಾನಿಗಳು ಮತ್ತು ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ.

ಸ್ಪೋರ್ಟ್‌ಸ್ಟಾರ್ ಜೊತೆಗಿನ ಸಂಭಾಷಣೆಯಲ್ಲಿ ಮಂಜ್ರೇಕರ್, ಫ್ರಾಂಚೈಸಿ ತಮ್ಮ ನಾಯಕತ್ವವನ್ನು ಪುನರ್ವಿಮರ್ಶಿಸಬೇಕು ಮತ್ತು ಸ್ಟಾರ್ ವೇಗಿ ಬುಮ್ರಾ ಅವರಿಗೆ ತಂಡವನ್ನು ಮುನ್ನಡೆಸುವ ಅವಕಾಶ ನೀಡಬೇಕು ಎಂದು ಹೇಳಿದರು.

'ಬುಮ್ರಾ ಭಾರತ ತಂಡದ ನಾಯಕನಾಗಿರುವುದನ್ನು ನಾನು ನೋಡಲು ಇಷ್ಟಪಡುತ್ತೇನೆ. ಏಕೆಂದರೆ, ಅವರಿಗಿಂತ ಬೇರೊಬ್ಬರು ಆಟವನ್ನು ಚೆನ್ನಾಗಿ ನೋಡುತ್ತಾರೆಂದು ನಾನು ಭಾವಿಸುವುದಿಲ್ಲ. ಅವರು ತಮ್ಮ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ, ನಿರೀಕ್ಷೆ, ಬ್ಯಾಟರ್ ಅನ್ನು ಓದುವುದು, ಪರಿಸ್ಥಿತಿ ಮತ್ತು ಪಿಚ್‌ಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ಬುಮ್ರಾ ಭಾರತಕ್ಕೆ ಉತ್ತಮ ನಾಯಕರಾಗುತ್ತಾರೆ. ಆದರೆ, ಇತ್ತೀಚೆಗೆ ನಾಯಕತ್ವದ ಬಗ್ಗೆ ಬುಮ್ರಾ ಹೆಚ್ಚಿನ ಆಸಕ್ತಿ ತೋರಿಸದಿರುವುದು, ವಿಶೇಷವಾಗಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದಾಗ ನಿರಾಶೆಯಾಯಿತು. ಆದರೆ. ಕನಿಷ್ಠ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯಾದರೂ ಅವರು ಆ ಅವಕಾಶವನ್ನು ಪಡೆಯುತ್ತಾರೆ ಎಂದು ಆಶಿಸುತ್ತೇನೆ' ಎಂದು ಅವರು ಹೇಳಿದರು.

ಹಾರ್ದಿಕ್‌ ಪಾಂಡ್ಯಾರನ್ನು ತಂಡಕ್ಕೆ ಕರೆತರುವಾಗ ಮುಂಬೈ ತಂಡವು ಆಶಿಶ್ ನೆಹ್ರಾ ಅವರನ್ನು ಸಹ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು ಎಂದರು. ಹಾರ್ದಿಕ್ ಮತ್ತು ನೆಹ್ರಾ ಗುಜರಾತ್ ಟೈಟಾನ್ಸ್‌ ತಂಡವನ್ನು ಐಪಿಎಲ್ ಪ್ರಶಸ್ತಿ ಗೆಲ್ಲಲು ಯಶಸ್ವಿ ಪಾಲುದಾರಿಕೆಯನ್ನು ರೂಪಿಸಿದರು.

'ನಾನು ಸುಳಿವು ನೀಡುತ್ತಿರುವುದನ್ನು ನೀವು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೀರಿ, ಏಕೆಂದರೆ ಅವರು ಹಾರ್ದಿಕ್ ಪಾಂಡ್ಯನನ್ನು ಮೀರಿ ನೋಡಬೇಕಾಗಬಹುದು ಎಂದು ನಾನು ಭಾವಿಸುತ್ತೇನೆ. ಹೌದು, ಏಕೆಂದರೆ ಆ ನಡೆ ಖಂಡಿತವಾಗಿಯೂ ಕೆಲಸ ಮಾಡಿಲ್ಲ. ಇದು ಸಂಪೂರ್ಣವಾಗಿ ಹಾರ್ದಿಕ್ ಅವರ ತಪ್ಪಲ್ಲ. ಇದು 'ಪ್ಯಾಕೇಜ್ ಡೀಲ್' ಆಗಿರಬೇಕಿತ್ತು. ಗುಜರಾತ್ ಟೈಟಾನ್ಸ್‌ನಲ್ಲಿ ಹಾರ್ದಿಕ್ ಈ ಹಿಂದೆ ಕೋಚ್ ಆಶಿಶ್ ನೆಹ್ರಾ ಅವರ ಬೆಂಬಲದೊಂದಿಗೆ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಹಾಗಾಗಿ, ಹಾರ್ದಿಕ್ ಅವರಿಂದ ಮುಂಬೈ ಅದೇ ಯಶಸ್ಸನ್ನು ಬಯಸಿದರೆ, ಅವರು ಆಶಿಶ್ ನೆಹ್ರಾ ಅವರನ್ನು ಸಹ ಕರೆತರಬೇಕಿತ್ತು' ಎಂದು ಹೇಳಿದರು.

'ಬುಮ್ರಾಗೆ ಒಂದು ಅವಕಾಶ ನೀಡುವುದನ್ನು ನಾನು ನಿಜವಾಗಿಯೂ ನೋಡಲು ಬಯಸುತ್ತೇನೆ. ಏಕೆಂದರೆ, ಅದು ಟೆಸ್ಟ್ ನಾಯಕನಾಗಿರುವುದಕ್ಕಿಂತ ಹೆಚ್ಚಿನ ಹೊರೆಯಲ್ಲ, ಅಲ್ಲಿ ಅವರು ಫಿಟ್ ಆಗಿರಬೇಕು ಮತ್ತು ಪ್ರತಿ ಟೆಸ್ಟ್ ಪಂದ್ಯಕ್ಕೂ ಸಿದ್ಧರಾಗಿರಬೇಕು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತ.ನಾಡು ಸಿಎಂ ವಿಜಯ್ ಗೆ ಮೊದಲ ಆಘಾತ; ಒಂದು ಮತದ ಅಂತರದಿಂದ ಗೆದ್ದಿದ್ದ TVK ಶಾಸಕನಿಗೆ ವಿಶ್ವಾಸಮತ ಪ್ರಕ್ರಿಯೆಗೆ ನಿರ್ಬಂಧ!

ತಮಿಳುನಾಡು: ಸ್ಪೀಕರ್ ಆಗಿ ಜೆ.ಸಿ.ಡಿ ಪ್ರಭಾಕರ್ ಅವಿರೋಧವಾಗಿ ಆಯ್ಕೆ, ನಾಳೆ ವಿಜಯ್ ಗೆ ಅಗ್ನಿಪರೀಕ್ಷೆ, AIADMK ಷಣ್ಮುಗಂ ಬಣ ಬೆಂಬಲ!

ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಜಲಕಂಟಕ : ಕೋಡಿಮಠದ ಶ್ರೀ ಸ್ಫೋಟಕ ಭವಿಷ್ಯ!

ಕೇರಳ ಸಿಎಂ ಬಿಕ್ಕಟ್ಟು: ವರಿಷ್ಠರೊಂದಿಗೆ ಮಾತುಕತೆಗಾಗಿ ದೆಹಲಿಗೆ ತೆರಳಿದ ಕೆ. ಸುಧಾಕರನ್, ಇಂದು ಅಂತಿಮ ನಿರ್ಧಾರ ಸಾಧ್ಯತೆ

'ಬಿಜೆಪಿ ನಾಯಕರು ಬುಟ್ಟಿಯೊಳಗಿನ ಏಡಿಗಳಂತೆ: BJP ಮತ್ತು ವಿಶ್ವಾಸ ದ್ರೋಹ ರಕ್ತ ಸಂಬಂಧಿಗಳು; ಮೋದಿಯದ್ದು ಢೋಂಗಿ ಬುದ್ದಿ'

SCROLL FOR NEXT