ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಗೆಲುವಿನ ನಂತರ, ಮುಂಬೈ ಇಂಡಿಯನ್ಸ್ (ಎಂಐ) ಆಲ್ರೌಂಡರ್ ಶಾರ್ದೂಲ್ ಠಾಕೂರ್, ತಮ್ಮ ತಂಡದ ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದಾರೆ. ಆದರೆ, ಮುಂದಿನ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯಕ್ಕೆ ಅವರು ಮತ್ತೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧದ ಪಂದ್ಯದಿಂದಲೂ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದು, ಸೂರ್ಯಕುಮಾರ್ ಯಾದವ್ ಮಗು ಜನನದ ಕಾರಣದಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ, ಜಸ್ಪ್ರೀತ್ ಬುಮ್ರಾ ಅವರು ಐದು ಬಾರಿಯ ಚಾಂಪಿಯನ್ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದರು. ಶಾರ್ದೂಲ್ ಅವರ ನಾಲ್ಕು ವಿಕೆಟ್ ಗೊಂಚಸು ಮತ್ತು ತಿಲಕ್ ವರ್ಮಾ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಈ ಆವೃತ್ತಿಯ ನಾಲ್ಕನೇ ಗೆಲುವಿಗೆ ಕಾರಣವಾಯಿತು.
ಪಂದ್ಯದ ನಂತರ ಮಾತನಾಡಿದ ಶಾರ್ದೂಲ್, 'ಹಾರ್ದಿಕ್ ಗಾಯಗೊಂಡಿದ್ದಾರೆ, ಆದ್ದರಿಂದ ಅವರು ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರು ಮೇ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯಕ್ಕಾಗಿ ರಾಯ್ಪುರಕ್ಕೆ ಬಂದಿದ್ದರು. ಆದರೆ, ಆಡಲು ಸಾಧ್ಯವಾಗಲಿಲ್ಲ. ಅವರು ಈಗ ಮುಂಬೈನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಮುಂದಿನ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಆಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಅವರು ಗುಣಮಟ್ಟದ ಆಟಗಾರ' ಎಂದು ಹೇಳಿದರು.
ಹಾರ್ದಿಕ್ ಅವರನ್ನು ಬೇರೆ ಫ್ರಾಂಚೈಸಿಗೆ ಟ್ರೇಡಿಂಗ್ ಮಾಡಲಾಗುತ್ತಿದೆ ಎಂಬ ವದಂತಿ ಬಗ್ಗೆ ಮಾತನಾಡಿದ ಶಾರ್ದೂಲ್, 'ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ' ಎಂದು ಹೇಳಿದರು.
ಹಾರ್ದಿಕ್ ನಾಯಕ ಮತ್ತು ಆಟಗಾರನಾಗಿ ಸಾಧಾರಣ ಆವೃತ್ತಿಯನ್ನು ಹೊಂದಿದ್ದಾರೆ. ಅವರ ತಂಡವು ತನ್ನ ಸ್ಟಾರ್ ಆಟಗಾರರ ಪವರ್ ಹೊರತಾಗಿಯೂ ಟೇಬಲ್ನ ಕೊನೆಯಲ್ಲಿ ಕುಳಿತಿರುವುದು ಮಾತ್ರವಲ್ಲದೆ, ಹಾರ್ದಿಕ್ ಎಂಟು ಇನಿಂಗ್ಸ್ಗಳಲ್ಲಿ 20.85ರ ಸರಾಸರಿಯಲ್ಲಿ ಕೇವಲ 146 ರನ್ಗಳನ್ನು ಗಳಿಸಿದ್ದಾರೆ. 136 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಮತ್ತು 40 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಅವರು ಸುಮಾರು 12 ರ ಎಕಾನಮಿ ರೇಟ್ನೊಂದಿಗೆ 61.50 ರ ಸರಾಸರಿಯಲ್ಲಿ ಕೇವಲ ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ.
ತಿಲಕ್ ವರ್ಮಾ ಅವರ 33ನೇ ಇನಿಂಗ್ಸ್ನಲ್ಲಿ 75* ರನ್ ಗಳಿಸುವ ಮೂಲಕ ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 'ತಿಲಕ್ ತಮ್ಮ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡರು ಮತ್ತು ಉತ್ತಮ ಶಾಟ್ಗಳನ್ನು ಆಯ್ಕೆ ಮಾಡಿಕೊಂಡರು. ರಿಯಾನ್ ರಿಕಲ್ಟನ್ ಕೂಡ ತಿಲಕ್ ಅವರನ್ನು ತಮ್ಮ ದೊಡ್ಡ ಹಿಟ್ಗಳ ಮೂಲಕ ಬೆಂಬಲಿಸಿದರು. ಪಂದ್ಯದ ಸಮಯದಲ್ಲಿ ಹಲವಾರು ಏರಿಳಿತಗಳು ಇದ್ದವು' ಎಂದು ಹೇಳಿದರು.