ಶುಭಮನ್ ಗಿಲ್ ತಂದೆ ಸಂಭ್ರಮಾಚರಣೆ 
ಕ್ರಿಕೆಟ್

IPL 2026: ಶುಭಮನ್ ಗಿಲ್ ಶತಕದ ವೈಭವ, ಸಿಧು ಮೂಸೆವಾಲಾ ಶೈಲಿಯಲ್ಲಿ ಸಂಭ್ರಮಿಸಿದ ತಂದೆ! Video

ಗಿಲ್ ಮೂರು ಅಂಕಗಳನ್ನು ತಲುಪಿದ ತಕ್ಷಣ, ಅವರ ತಂದೆ ಲಖ್ವಿಂದರ್ ಸಿಂಗ್ ಗಿಲ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ನ್ಯೂ ಚಂಡೀಗಢ: ನಿನ್ನೆ ನ್ಯೂ ಚಂಡೀಗಢದ ಮುಲ್ಲನ್ ಪುರ ಕ್ರೀಡಾಂಣದಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಅದ್ಭುತ ಶತಕ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ 2026 ರ ಫೈನಲ್‌ಗೆ ಕರೆದೊಯ್ಯಿತು . ಅಲ್ಲದೇ ಅವರ ಕುಟುಂಬದ ಭಾವನಾತ್ಮಕ ಸಂಭ್ರಮಕ್ಕೂ ನಾಂದಿ ಹಾಡಿತು.

ಗಿಲ್ ಮೂರು ಅಂಕಗಳನ್ನು ತಲುಪಿದ ತಕ್ಷಣ, ಅವರ ತಂದೆ ಲಖ್ವಿಂದರ್ ಸಿಂಗ್ ಗಿಲ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಶುಭಮನ್ ಗಿಲ್ ಕೇವಲ 47 ಎಸೆತಗಳಲ್ಲಿ ಬೌಂಡರಿಯೊಂದಿಗೆ ಶತಕ ಗಳಿಸಿದರು. ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ದಾಖಲಿಸಿದರು. ಐಪಿಎಲ್ ಪ್ಲೇಆಫ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ ಮೊದಲ ಆಟಗಾರ ಮತ್ತು ಪ್ಲೇಆಫ್‌ನಲ್ಲಿ ಶತಕ ದಾಖಲಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಗುಜರಾತ್ ಟೈಟಾನ್ಸ್ ನಾಯಕ ಪಾತ್ರರಾದರು.

2022 ರಲ್ಲಿ ಹತ್ಯೆಯಾದ ಸಿಧು ಮೂಸೆವಾಲಾ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿಯೇ ಶುಭಮನ್ ಗಿಲ್ ಶತಕ ಗಳಿಸಿದ್ದರಿಂದ ಅವರ ತಂದೆ ಮೂಸೆವಾಲಾ ಶೈಲಿಯಲ್ಲಿಯೇ ಸಂಭ್ರಮಾಚರಣೆ ಮಾಡಿದ್ದಾರೆ.

ಗುಜರಾತ್‌ನ ಯಶಸ್ವಿ ಚೇಸಿಂಗ್‌ನಲ್ಲಿ ಗಿಲ್ ಅವರ ಇನ್ನಿಂಗ್ಸ್ ನಿರ್ಣಾಯಕವೆಂದು ಸಾಬೀತಾಯಿತು. ಗಿಲ್ ಕೇವಲ 53 ಎಸೆತಗಳಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿ 104 ರನ್ ಗಳಿಸಿದರು. ಅವರು ಔಟ್ ಆಗುವ ಹೊತ್ತಿಗೆ, ಟೈಟಾನ್ಸ್ ತಂಡವು ದೃಢವಾಗಿ ನಿಯಂತ್ರಣದಲ್ಲಿತ್ತು ಮತ್ತು ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅಂಚಿನಲ್ಲಿತ್ತು. ಗಿಲ್ ಅವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಈಗ ತಮ್ಮ ಮೊದಲ ಐಪಿಎಲ್ ಫೈನಲ್ ತಲುಪಿದೆ.

ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಫ್ರಾಂಚೈಸಿ ಈ ಹಿಂದೆ ಎರಡು ಬಾರಿ ಫೈನಲ್‌ಗೆ ತಲುಪಿತ್ತು. 2022ರಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿತ್ತು.ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್: ಲೋಕಭವನದಲ್ಲೇ ಸರಳ ಸಮಾರಂಭ; ಸಾರ್ವಜನಿಕರಿಗೆ ಪ್ರವೇಶ ಇಲ್ಲ

ನಾನ್ ಯಾರಿಗಾದ್ರೂ ಅನ್ಯಾಯ ಮಾಡಿದ್ರೆ ಅದು ಅವನಿಗೆ ಮಾತ್ರ: ಸಿದ್ದರಾಮಯ್ಯ ಹಳೇ Video ವೈರಲ್!

Karnataka CM News LIVE Updates | ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ!

'ಆಪರೇಷನ್ ಸಿಂದೂರ್ 2.0'ಗೆ ಭಾರತೀಯ ಸೇನೆ ಸಂಪೂರ್ಣ ಸಿದ್ಧ: ಸೇನಾ ಮುಖ್ಯಸ್ಥ

ISI-ಭೂಗತ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು; 9 ಮಂದಿ ಬಂಧನ!

SCROLL FOR NEXT