ಅಗ್ರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಆನೇಕಲ್‌ ಶಾಕೆ 
ಜಿಲ್ಲಾ ಸುದ್ದಿ

ಅಗ್ರಿ ಇಂಡಿಯಾ ಏಜೆಂಟ್ ನೇಣಿಗೆ ಶರಣು

ಹಣ ವಾಪಸ್ ನೀಡಲಾಗದೇ ಮನೆಯ ಬಳಿ ಜನ ಜಮಾಯಿಸಿದಾಗ ಮರಣ ಪತ್ರ ಬರೆದಿಟ್ಟು ನೇಣಿಗೆ ಶರಣು...

ಆನೇಕಲ್: ಅಗ್ರಿ ಇಂಡಿಯಾ ಕಂಪನಿಯಾಗಿ ಹಣ ಸಂಗ್ರಹ ಮಾಡುತ್ತಿದ್ದ ಏಜೆಂಟನೊಬ್ಬ ಹಣ ವಾಪಸ್ ನೀಡಲಾಗದೇ ಮನೆಯ ಬಳಿ ಜನ ಜಮಾಯಿಸಿದಾಗ ಮರಣ ಪತ್ರ ಬರೆದಿಟ್ಟು ನೇಣಿಗೆ ಶರಣಾದ ಘಟನೆ  ಆನೇಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ತಿಮ್ಮರಾಯಸ್ವಾಮಿ ಬಡಾವಣೆ ನಿವಾಸಿ ನಾಗರಾಜು(35) ಮೃತ ದುರ್ದೈವಿ. ಈತನಿಗೆ ಹೆಂಡತಿ ಮತ್ತು 1 ಮಗುವಿಗೆ ಎನ್ನಲಾಗಿದೆ.

ಹಾಲು ಮಾರಾಟದ ಜೊತೆಗೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ನಾಗರಾಜ 3 ವರ್ಷಗಳಿಂದ ಅಗ್ರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಏಜೆಂಟ್ ಆಗಿ ಹಣ ಸಂಗ್ರಹ ಮಾಡುತ್ತಿದ್ದ. ಆನೇಕಲ್‌ನಲ್ಲಿನ 100 ಏಜೆಂಟರ ಪೈಕಿ ಟಾಪ್ ಟೆನ್‌ರಲ್ಲಿ ಗುರ್ತಿಸಿಕೊಂಡಿದ್ದ ಈತ ಸುಮಾರು ರೂ.2 ಕೋಟಿಯಷ್ಟು ಡೆಪಾಸಿಟ್ ಸಂಗ್ರಹ ಮಾಡಿದ್ದ ಎನ್ನಲಾಗಿದೆ.

ಮಾಸಿಕ ಶೇ.3 ಬಡ್ಡಿ ದರವನ್ನು ಡೆಪಾಸಿಟ್ ಹಣಕ್ಕೆ ನೀಡಲಾಗುವುದು ಎಂದು ಅಗ್ರಿ ಇಂಡಿಯಾ ಹೊರಡಿಸಿದ್ದ ಸ್ಕೀಮ್‌ಗೆ ನೂರಾರು ಗ್ರಾಹಕರು ಹಣವನ್ನು ತೊಡಗಿಸಿದ್ದರು. ಅವಧಿ ಮುಗಿದು ತನ್ನ ಗ್ರಾಹಕರಿಗೆ ಮೆಚ್ಯುರಿಟಿ ಹಣ ವಾಪಸ್ ಕೊಡಬೇಕಿದ್ದ ಅಗ್ರಿ ಇಂಡಿಯಾದಿಂದ ಹಣ ವಾಪಸ್ ಬರದ ಕಾರಣ ಜನ ಮನೆ ಬಳಿ ಜಮಾಯಿಸಿದ್ದರು.

ಹಣ ಮರು ಪಾವತಿ ಮಾಡಲು ಆಗದ ನಾಗರಾಜು ಸಂಜೆ ತನ್ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಮರಣ ಪತ್ರದಲ್ಲಿ ಸಾರ್ವಜನಿಕರ ಹಾಗೂ ಬಡವರ ಸುಮಾರು ನೂರಾರು ಕೋಟಿಯಷ್ಟು ಹಣ ಸಂಗ್ರಹಿಸಿ ಪರಾರಿಯಾಗಿರುವ ಬ್ಲೇಡ್ ಕಂಪನಿ ವಂಚಕರಿಗೆ ಶಿಕ್ಷೆ ಕೊಡಿಸಿ ಎಂದು ಬರೆದಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT