ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕೆ ಎಸ್ ಆರ್ ಟಿ ಸಿ: ಟಿಕೆಟ್ ರದ್ದತಿಗೆ ಹೊಸ ಶುಲ್ಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.

ಪ್ರಯಾಣದ ಪ್ರಾರಂಭಕ್ಕಿಂತಲೂ ೭೨ ಘಂಟೆ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ, ಮೂಲ ಟಿಕೆಟ್ ದರದ ೧೦% ಶುಲ್ಕದೊಂದಿಗೆ ಮುಂಗಡ ಕಾಯ್ದಿರಿಕೆ ಶುಲ್ಕವನ್ನು ತೆರಬೇಕಾಗುತ್ತದೆ. ಪ್ರಯಾಣಕ್ಕು ಮುಂಚೆ ೨೪ ಘಂಟೆಗಳಿಂದ ೭೨ ಘಂಟೆಗಳವರೆಗೆ ರದ್ದು ಪಡಿಸಿದರೆ ಈ ಶುಲ್ಕ ೨೫% ಏರಿ, ಮುಂಗಡ ಕಾಯ್ದಿರಿಕೆ ಶುಲ್ಕವನ್ನು ತೆತ್ತಬೇಕಾಗುತ್ತದೆ. ಪ್ರಯಾಣಕ್ಕೂ ಮೊದಲ ೨ ಘಂಟೆಯಿಂದ ೨೪ ಘಂಟೆಗೆ ಮುಂಚಿತವಾಗಿ ರದ್ದು ಪಡಿಸಿದಾಗ ಟಿಕೆಟ್ ದರದ ೫೦% ಶುಲ್ಕ ಹಾಗೂ ಮುಂಗಡ ಕಾಯ್ದಿರಿಕೆ ಶುಲ್ಕವನ್ನು ಹಿಡಿದುಕೊಳ್ಳಲಾಗುತ್ತದೆ. ಪ್ರಯಾಣಕ್ಕೂ ಎರಡು ಘಂಟೆಗ ಒಳಗೆ ಟಿಕೆಟ್ ರದ್ದುಪಡಿಸಲು ಸಾಧ್ಯವಿಲ್ಲ.

ಈ ಹಿಂದೆ ಪ್ರಯಾಣದ ಹಿಂದಿನ ೩೦ ನಿಮಿಷಗಳವರೆಗೂ ಟಿಕೆಟ್ ರದ್ದುಪಡಿಸುವ ಸೌಲಭ್ಯವಿತ್ತು ಹಾಗೂ ಅದಕ್ಕೆ ೫೦% ಟಿಕೆಟ್ ದರವನ್ನು ಹಿಂದಕ್ಕೆ ನೀಡಲಾಗುತ್ತಿತ್ತು. ಈ ಹೊಸ ಶುಲ್ಕಗಳು ಏಪ್ರಿಲ್ ೧ ರಿಂದ ಜಾರಿಗೆ ಬರಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT