ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕೆ ಎಸ್ ಆರ್ ಟಿ ಸಿ: ಟಿಕೆಟ್ ರದ್ದತಿಗೆ ಹೊಸ ಶುಲ್ಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್ ರದ್ದತಿಗೆ ಗುರುವಾರ ಹೊಸ ಶುಲ್ಕಗಳನ್ನು ಘೋಷಿಸಿದೆ.

ಪ್ರಯಾಣದ ಪ್ರಾರಂಭಕ್ಕಿಂತಲೂ ೭೨ ಘಂಟೆ ಮುಂಚಿತವಾಗಿ ಟಿಕೆಟ್ ರದ್ದುಪಡಿಸಿದರೆ, ಮೂಲ ಟಿಕೆಟ್ ದರದ ೧೦% ಶುಲ್ಕದೊಂದಿಗೆ ಮುಂಗಡ ಕಾಯ್ದಿರಿಕೆ ಶುಲ್ಕವನ್ನು ತೆರಬೇಕಾಗುತ್ತದೆ. ಪ್ರಯಾಣಕ್ಕು ಮುಂಚೆ ೨೪ ಘಂಟೆಗಳಿಂದ ೭೨ ಘಂಟೆಗಳವರೆಗೆ ರದ್ದು ಪಡಿಸಿದರೆ ಈ ಶುಲ್ಕ ೨೫% ಏರಿ, ಮುಂಗಡ ಕಾಯ್ದಿರಿಕೆ ಶುಲ್ಕವನ್ನು ತೆತ್ತಬೇಕಾಗುತ್ತದೆ. ಪ್ರಯಾಣಕ್ಕೂ ಮೊದಲ ೨ ಘಂಟೆಯಿಂದ ೨೪ ಘಂಟೆಗೆ ಮುಂಚಿತವಾಗಿ ರದ್ದು ಪಡಿಸಿದಾಗ ಟಿಕೆಟ್ ದರದ ೫೦% ಶುಲ್ಕ ಹಾಗೂ ಮುಂಗಡ ಕಾಯ್ದಿರಿಕೆ ಶುಲ್ಕವನ್ನು ಹಿಡಿದುಕೊಳ್ಳಲಾಗುತ್ತದೆ. ಪ್ರಯಾಣಕ್ಕೂ ಎರಡು ಘಂಟೆಗ ಒಳಗೆ ಟಿಕೆಟ್ ರದ್ದುಪಡಿಸಲು ಸಾಧ್ಯವಿಲ್ಲ.

ಈ ಹಿಂದೆ ಪ್ರಯಾಣದ ಹಿಂದಿನ ೩೦ ನಿಮಿಷಗಳವರೆಗೂ ಟಿಕೆಟ್ ರದ್ದುಪಡಿಸುವ ಸೌಲಭ್ಯವಿತ್ತು ಹಾಗೂ ಅದಕ್ಕೆ ೫೦% ಟಿಕೆಟ್ ದರವನ್ನು ಹಿಂದಕ್ಕೆ ನೀಡಲಾಗುತ್ತಿತ್ತು. ಈ ಹೊಸ ಶುಲ್ಕಗಳು ಏಪ್ರಿಲ್ ೧ ರಿಂದ ಜಾರಿಗೆ ಬರಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT