ಎಚ್.ಎಸ್. ಪಾರ್ವತಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಹಿರಿಯ ಲೇಖಕಿ ಎಚ್ ಎಸ್ ಪಾರ್ವತಿ ನಿಧನ

ದಶಕಗಳ ಕಾಲ ಉಲಿದಿದ್ದ ಧ್ವನಿಯೊಂದು ಶಾಶ್ವತವಾಗಿ ಉಡುಗಿಹೋಗಿದೆ. ಲೇಖಕಿ ಹಾಗೂ ಆಕಾಶವಾಣಿಯ ಕಾರ್ಯ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದ ಎಚ್.ಎಸ್. ಪಾರ್ವತಿ (81) ಸೋಮವಾರ ನಿಧನರಾಗಿದ್ದಾರೆ. ಅವರು ಪುತ್ರಿ ಡಾ. ಎಂ.ಎಸ್. ವಿದ್ಯಾ ಹಾಗೂ ಪುತ್ರ ಎಂ.ಎಸ್.ರವಿ ಅವರನ್ನು ಅಗಲಿದ್ದಾರೆ...

ಬೆಂಗಳೂರು; ದಶಕಗಳ ಕಾಲ ಉಲಿದಿದ್ದ ಧ್ವನಿಯೊಂದು ಶಾಶ್ವತವಾಗಿ ಉಡುಗಿಹೋಗಿದೆ. ಲೇಖಕಿ ಹಾಗೂ ಆಕಾಶವಾಣಿಯ ಕಾರ್ಯ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದ ಎಚ್.ಎಸ್. ಪಾರ್ವತಿ (81) ಸೋಮವಾರ ನಿಧನರಾಗಿದ್ದಾರೆ. ಅವರು ಪುತ್ರಿ ಡಾ. ಎಂ.ಎಸ್. ವಿದ್ಯಾ ಹಾಗೂ ಪುತ್ರ ಎಂ.ಎಸ್.ರವಿ ಅವರನ್ನು ಅಗಲಿದ್ದಾರೆ.

ಶಾಸ್ತ್ರಿ ನಗರದ ಮನೆಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಅಮೆರಿಕಾದಲ್ಲಿರುವ ಸಹೋದರ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ವಿದ್ಯಾ ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲೇ ಹೆಚ್ಚಿನ ವ್ಯಾಸಂಗ ಮಾಡಿದ್ದರೂ ಪಾರ್ವತಿ ಅವರು ಲೇಖಕಿ ಹಾಗೂ ಅನುವಾದಕಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರು.

ಆಕಾಶವಾಣಿ ನಿರೂಪಕಿ: ಪಾರ್ವತಿ ಅವರು, ಬೆಂಗಳೂರು ಹಾಗೂ ಮೈಸೂರು ಆಕಾಶವಾಣಿಗಳಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿದ್ದರು.

1958ರಲ್ಲಿ ಆಕಾಶವಾಣಿ ಬೆಂಗಳೂರು ವಿಭಾಗದಲ್ಲಿ ಉದ್ಯೋಗ ಪಡೆದ ಅವರು ಭಾಷಾಂತರ ಪರಿಣತರಾಗಿದ್ದರು. ಮಕ್ಕಳಿಗಾಗಿ ರೂಪಿಸಲಾದ `ಕೇಳಿ ಗಿಳಿಗಳೇ', ಕನ್ನಡದ ಕವಿಗಳ ಕುರಿತ ಚಿಂತನ, ಹೀಗೆ ಹಲವು ಕಾರ್ಯಕ್ರಮಗಳು ಪಾರ್ವತಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದ್ದವು. 1990ರಲ್ಲಿ ಅವರು ಸ್ವಯಂ ನಿವೃತ್ತಿ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT