ಜಿಲ್ಲಾ ಸುದ್ದಿ

900 ಖಾತೆಗಳಲ್ಲಿ ಬಿಬಿಎಂಪಿ ಹಣ!

ಬೆಂಗಳೂರು: ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅನಧಿಕೃತವಾಗಿ 900ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿರಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದು, ಈ ಕುರಿತು ಮಹಾಲೆಕ್ಕ ಪರಿಶೋಧಕರಿಂದ (ಸಿಎಜಿ) ತಪಾಸಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಜನರಿಂದ ಸಂಗ್ರಹಿಸಿದ ತೆರಿಗೆ ಹಣಕ್ಕೆ ಲೆಕ್ಕವಿಲ್ಲವಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಸಂಗ್ರಹಿಸಿದ ತೆರಿಗೆ ಹಣವನ್ನು ಅಕ್ರಮವಾಗಿ ತಮಗೆ ಬೇಕಾದ ಬ್ಯಾಂಕ್ ಗಳ 900ಕ್ಕೂ ಹೆಚ್ಚು ಖಾಥೆಗಳಲ್ಲಿ ಜಮಾ ಮಾಡಿದ್ದಾರೆ. ಇದರಿಂದ ದೊಡ್ಡ ಪ್ರಮಾಣದ ಹಣಕಾಸು ಅವ್ಯವಹಾರ ನಡೆದಿದ್ದು, ಇಡೀ ವ್ಯವಹಾರವನ್ನು ಮಹಾಲೆಕ್ಕ ಪರಿಶೋಧಕರಿಂದ ತನಿಖೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಪತ್ರ: ಹಣಕಾಸು ಅಕ್ರಮ ಕುರಿತು ನಾನಾ ಸರ್ಕಾರೇತರ ಸಂಸ್ಥೆಗಳು ಹಾಗೂ ನಾಗರೀಕರಿಂದ ದೂರು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆದಿರುವ ರಾಜೀವ್ ಚಂದ್ರಶೇಖರ್, 2010ರಿಂದ ಇಲ್ಲಿಯವರೆಗೆ 900ಕ್ಕೂ ಹೆಚ್ಚು ಬ್ಯಾಂಕ್‍ಗಳಲ್ಲಿ ಹಣ ಜಮಾ ಆದ ಕುರಿತು ಅವರ ಗಮನ ಸೆಳೆದಿದ್ದಾರೆ.

ಇದು ಉದ್ದೇಶಪೂರ್ವಕ ನಡೆದ ಅಪರಾಧವಾಗಿದ್ದು, ಇದರಿಂ ದಾಗಿ ನಗರದ ಅಬಿsವೃದಿಟಛಿ ಕುಂಠಿತಗೊಳ್ಳುವಂತಾಗಿ ದೆ. ಕರ್ನಾಟಕ ಮುನ್ಸಿಪಲ್ ಅಕೌಂಟಿಂಗ್ ಅಥವಾ ನ್ಯಾಶನಲ್ ಮುನ್ಸಿಪಲ್ ಅಕೌಂಟಿಂಗ್ ಮತ್ತು ಮುಂಗಡಪತ್ರದ ನಿಯಮಗಳ ನ್ನು ಅಳವಡಿಸಿಕೊಳ್ಳದಿರುವುದೇ ಅವ್ಯವಹಾರ ನಡೆಯಲು ಕಾರಣ ಎಂದು ಅವರು ಗಮನ ಸೆಳೆದಿದ್ದಾರೆ.

ಬಿಬಿಎಂಪಿ ಹಣಕಾಸು ವಹಿವಾಟು ಕುರಿತು ಪ್ರತ್ಯೇಕ ಲೆಕ್ಕ ಪರಿಶೋಧನೆ ಏಕಿಲ್ಲ ಎಂದು ಪ್ರಶ್ನಿಸಿರುವ ಅವರು, ಈ ಕ್ರಮಕ್ಕೆ ಮುಂದಾಗದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.

SCROLL FOR NEXT