ಬೆಂಗಳೂರು ಗ್ರಾಮಾಂತರ

ಪರವಾನಗಿ ಇಲ್ಲದೆ ಖಾಸಗಿ ದರ್ಬಾರ್

ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ.ಆ.6
ಗ್ರಾಮೀಣ ರಸ್ತೆ ಮೂಲಕ ಸಂಚರಿಸಬೇಕಾದ ಖಾಸಗಿ ಬಸ್ ಪರವಾನಗಿ ಇಲ್ಲದೆ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದೆ ಎಂದು ಆರೋಪಿಸಿ ಸಾಸಲು ಗ್ರಾಮದಲ್ಲಿ ಗ್ರಾಮಸ್ಥರು ಖಾಸಗಿ ಬಸ್ಸೊಂದನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಸಾಸಲು ಹೋಬಳಿ ಕೇಂದ್ರದಲ್ಲಿ ನಡೆದಿದೆ.
ಪ್ರತಿಭಟನೆ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಈ ಬಸ್ ಬೆಂಗಳೂರಿನಿಂದ ಹೆಸರಘಟ್ಟ, ಮಧುರೆ(ಕನಸವಾಡಿ), ದೊಡ್ಡಬೆಳವಂಗಲ, ಸಾಸಲು, ಆರೂಡಿ, ಬೈರೇನಹಳ್ಳಿ ಮಾರ್ಗವಾಗಿ ಮಧುಗಿರಿ ಮತ್ತು ವೈಎನ್ ಹೊಸಕೋಟೆಗೆ ತೆರಳಬೇಕು.
ಈ ಮಾರ್ಗಕ್ಕೆ ಪರವಾನಗಿ ಹೊಂದಿರುವ ಬಸ್ಸು, ಅದನ್ನು ಮೀರಿ ಪರವಾನಗಿ ಇಲ್ಲದ ಮಾರ್ಗವಾದ ವೈಎನ್ ಹೊಸಕೋಟೆ, ಮಧುಗಿರಿ, ಬೈರೇನಹಳ್ಳಿ, ಅಲ್ಲೀಪುರ, ತೊಂಡೇಬಾವಿ, ದೊಡ್ಡಬಳ್ಳಾಪುರ, ಹೆಬ್ಬಾಳ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದೆ.  
ಆರೂಢಿಯಿಂದ ಪ್ರಾರಂಭವಾಗಿ ಮಧುರೆ ವರೆಗಿನ ಅನೇಕ ಗ್ರಾಮಗಳ ನೂರಾರು ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಿದೆ.
ಸುಮಾರು 60ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಈ ಬಸ್ ಮುಖ್ಯರಸ್ತೆ ಬರಬೇಕು. ಅದನ್ನು ಬಿಟ್ಟು ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿರುವುದು ಅಕ್ಷೇಪಾರ್ಹ ಎಂದರು.
ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
 ಸಾರಿಗೆ ನಿಮಯ ಪಾಲಿಸದ ದ್ವಿಚಕ್ರವಾಹನಗಳಿಗೇ ದಂಡ ವಿಧಿಸುವ ಆರ್ಟಿಓ ಅಧಿಕಾರಿಗಳು ಈ ಬಗೆಯ ಅಕ್ರಮ ಬಸ್ ಸಂಚಾರದ ಕುರಿತು ಚಕಾರ ಎತ್ತುವುದಿಲ್ಲ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇದೇ ರೀತಿ ಪರವಾನಗಿ ಇಲ್ಲದ ಮಾರ್ಗದಲ್ಲಿ ಅನೇಕ ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ.
ಅಪಘಾತಗಳು ನಡೆದರೂ ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ ಎಂದು ಗ್ರಾಮಸ್ಥ ನರಸಿಂಹಮೂರ್ತಿ ಆರೋಪಿಸಿದರು.
ಸಾಸಲು ಗ್ರಾಮದ ಮೂಲಕ ಬೆಳಗಿನ ವೇಳೆ ಸಂಚರಿಸುವ ಈ ಬಸ್ಸು ನಿರ್ದಿಷ್ಟ ಮಾರ್ಗ ಬದಲಿಸಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು, ನೌಕರರು ಪ್ರಯಾಣಿಕರು ಪರಿತಪಿಸುವಂತಾಗಿದೆ. ಖಾಸಗಿ ಬಸ್ ಪರವಾನಗಿ ಈ ಮಾರ್ಗದಲ್ಲಿರುವುದರಿಂದ ಸರ್ಕಾರಿ ಬಸ್ ಅನ್ನು ಇದೇ ಸಮಯದಲ್ಲಿ ಸಂಚಾರಕ್ಕೆ ಬಿಡುವ ಅವಕಾಶ ಇಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳುತ್ತಾರೆ.
 ಒಟ್ಟಾರೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ಆರ್ಟಿಓ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಬಸ್ ಅನ್ನು ಸಂಚರಿಸಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಕಳುಹಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT