ಹಾವೇರಿ

ರುದ್ರಭೂಮಿ ಕಾಮಗಾರಿ ಆರಂಭಿಸದ ಹಿನ್ನೆಲೆ: ಭೂ ಸೇನಾ ಅಧಿಕಾರಿ ಕೂಡಿ ಹಾಕಿದ ಜನ

ಕುಂದಗೋಳ: 3 ವರ್ಷಗಳ ಹಿಂದೆ ಇಲ್ಲಿನ ಹಿಂದೂ ಧರ್ಮದ ರುದ್ರಭೂಮಿ, ಮುಕ್ತಿಧಾಮ ಅಭಿವೃದ್ಧಿ ಕಾಮಗಾರಿಗೆ ರು. 45 ಲಕ್ಷ ಮಂಜೂರಾಗಿದ್ದರೂ ಪೂರ್ಣಗೊಳಿಸದ ಭೂಸೇನಾ ನಿಗಮದ ಅಭಿಯಂತ ಲಕ್ಷ್ಮೀ ನಾಯಕ ಅವರನ್ನು ಗುರುವಾರ ಪಪಂ ಮುಖ್ಯಾಧಿಕಾರಿ ಕಚೇರಿಯಲ್ಲಿ ಜನತೆ ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಮಸಾರಿ ಪ್ಲಾಟ್‌ಗೆ ಬಳಿ ಪಂಚಗ್ರಹ ಹಿರೇಮಠಕ್ಕೆ ಸೇರಿದ 4 ಎಕರೆ ಜಮೀನನ್ನು ಹಿಂದೂ ಧರ್ಮದ ಮುಕ್ತಿಧಾಮ ಅಭಿವೃದ್ಧಿಗಾಗಿ ಶ್ರೀಗಳು ದಾನ ನೀಡಿದ್ದಾರೆ. ಅದನ್ನು ಪಪಂ 2010-11ರಲ್ಲಿ ರು. 45 ಲಕ್ಷದಲ್ಲಿ ಭೂ ಸೇನಾ ನಿಗಮ ಮಂಡಳಿಗೆ ಕಾಮಗಾರಿ ಗುತ್ತಿಗೆ ನೀಡಿ ಆರಂಭಿಸಿತ್ತು. ರುದ್ರ ಭೂಮಿ ಸುತ್ತ ಕಾಂಪೌಂಡ್, ಒಳಚರಂಡಿ, ಶೆಡ್, ಸುಗಮ ರಸ್ತೆ ನಿರ್ಮಾಣ, ಸಸಿಗಳನ್ನು ಹಚ್ಚುವಂತೆ ಅಂದಾಜು ಪತ್ರಿಕೆಯಲ್ಲಿ ನಮೂದಿಸಸಿದೆ. ಭೂ ಸೇನಾ ನಿಗಮ ರು. 28 ಲಕ್ಷದಲ್ಲಿ ಕಾಂಪೌಂಡ್ ನಿರ್ಮಿಸಿದೆ. ಅದೂ ಕಳಪೆಮಟ್ಟದ್ದಾಗಿದೆ. ಅಗತ್ಯವಿರುವ ಮೂಲಭೂತ ಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳದ ಕಾರಣ ಪಪಂ ಸದಸ್ಯರು, ಜನರು ಗುರುವಾರ ಅಧಿಕಾರಿಯನ್ನು 2 ತಾಸು ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಪಂ ಮುಖ್ಯ ಅಭಿಯಂತ ಕೆ. ಕಮ್ಮಾರ, ಭೂ ಸೇನಾ ನಿಗಮದ ಅಧಿಕಾರಿ ಲಕ್ಷ್ಮೀ ನಾಯಕಗೆ ಉಳಿದ ರು. 17 ಲಕ್ಷ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಈ ಹಿಂದೆ ನಿರ್ಮಿಸಿದ ಕಳಪೆ ಕಾಂಪೌಂಡ್‌ನ್ನೂ ಸರಿಯಾಗಿ ನಿರ್ಮಿಸುವಂತೆ ಸೂಚಿಸಿದರು.
ಈ ಕುರಿತು ಡಿಸಿಗೂ ಮಾಹಿತಿ ನೀಡುವುದಾಗಿ ಭರವಸೆ ನೀಡಿ ಭೂಸೇನಾ ನಿಗಮದ ಅಧಿಕಾರಿಯಿಂದ ಪತ್ರ ಬರೆಯಿಸಿಕೊಂಡರು. ಆಗ ಜನ ಅಧಿಕಾರಿ ಬಿಡುಗಡೆ ಮಾಡಿದರು. ಯಲ್ಲವ್ವ ಭಜಂತ್ರಿ, ರಾಜೇಶ ಶಿವಳ್ಳಿ, ರಮೇಶ ಬಿಡನಾಳ, ಮೆಹಬೂಬ್‌ಅಲಿ ನದಾಫ್, ಬಸಮ್ಮ ಅಲ್ಲಾಪುರ, ದ್ಯಾಮವ್ವ ಬಿಡನಾಳ, ವಿಠ್ಠಲ ಚವ್ಹಾಣ, ಬಸವರಾಜ ದೊಡ್ಡಮನಿ, ಈಶ್ವರಪ್ಪ ಭಂಡಿವಾಡ, ಗಿರೀಶ ಗಾಣಗೇರ, ರಾಮಣ್ಣ ನೆಲಗುಡ್ಡ, ಶಿವಯ್ಯ ಹುಲಗೂರಮಠ, ಫಕ್ಕೀರಯ್ಯ ಮಣಕಟ್ಟಿಮಠ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?