ಮೈಸೂರು

ಹೆಚ್ಚುತ್ತಿರುವ ಜನವಿರೋಧಿ ಚಲನಚಿತ್ರಗಳು: ಜನಾರ್ದನ್

ಮೈಸೂರು: ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಚಲನಚಿತ್ರಗಳಲ್ಲಿ ಶೇ.90 ರಷ್ಟು ಜನವಿರೋಧಿ ಆಗಿವೆ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಕಳವಳ ವ್ಯಕ್ತಪಡಿಸಿದರು.
ರಂಗಾಯಣದ ಶ್ರೀರಂಗದಲ್ಲಿ ಸೋಮವಾರ ಆಯೋಜಿಸಿದ್ದ ರಂಗ ಗೆಳೆಯರ ಸಿನೆಮಾ ಪಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಲನಚಿತ್ರಕ್ಕೆ ತನ್ನದೆ ಆದ ಬಹುದೊಡ್ಡ ವಿನ್ಯಾಸ ಇದೆ. ಅದೊಂದು ಪರಿಣಾಮಕಾರಿ ಮಾಧ್ಯಮವಾಗಿ ಹೊರಹೊಮ್ಮಿದೆ. ಆದರೆ ದುರಾದೃಷ್ಟವಶಾತ್ ಇತ್ತೀಚೆಗೆ ಬಿಡುಗಡೆ ಆಗುವ ಚಲನಚಿತ್ರಗಳ ಪೈಕಿ ಶೇ.90 ರಷ್ಟು ಜನವಿರೋಧಿ ಆಗಿವೆ. ಎಲ್ಲವೂ ದುಡ್ಡಿನ ಮೇಲೆ ನಿಂತಿವೆ. ಆ ಚಲನಚಿತ್ರಗಳಿಗೆ ಯಾವುದೆ ಸಮಾಜದ ತಾಕಲಾಟದ ಅಗತ್ಯ ಇಲ್ಲ. ಯಾವುದೆ ಮಾಧ್ಯಮವಾದರೂ ಅದಕ್ಕೆ ಸಾಮಾಜಿಕ ಜವಾಬ್ದಾರಿ ಇರಬೇಕು. ಇಲ್ಲದಿದ್ದರೆ ಅದೊಂದು ದಂಧೆ ಆಗುತ್ತದೆ ಎಂದರು. ಚಲನಚಿತ್ರಗಳು ಜನರ ನಡುವೆ ಸ್ಥಿರ ಆಗಬೇಕು. ಆದರೆ ಚಲನಚಿತ್ರಗಳ ಭಾಷೆ ಮತ್ತು ಭಾವ ಅಧಃಪತನಕ್ಕೆ ಇಳಿಯುತ್ತದೆ. ವೀಕ್ಷಕರನ್ನು ಭ್ರಮೆಯಲ್ಲಿ ತೊಡಗಿಸುವ ಹುನ್ನಾರ ನಡೆಯುತ್ತಿದೆ. ರಂಗಭೂಮಿ ಗೆಳೆಯರು ಉತ್ತಮ ಸಂದೇಶ ಇರುವ ಸಿನೆಮಾ ಮಾಡುತ್ತಿರುವುದು ಕ್ರಾಂತಿಕಾರಕ ಹೆಜ್ಜೆ. ಇದು ಚಳವಳಿ ಆಗಿ ರೂಪುಗೊಳ್ಳಬೇಕು ಎಂದು ಕರೆ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಚಲನಚಿತ್ರ ನಟ ಮಂಡ್ಯ ರಮೇಶ್ ಮಾತನಾಡಿ, ಸೃಜನಶೀಲ ಚಡಪಡಿಕೆ ಉಳ್ಳವರು ಮಾತ್ರ ಇಂತಹ ಉತ್ತಮ ಚಲನಚಿತ್ರ ನಿರ್ಮಿಸಲು ಸಾಧ್ಯ. ಗಾಂಧಿನಗರದಲ್ಲಿ ಸೂಕ್ಷ್ಮವಂತರಿಗೆ ತಡವಾದ ಗೆಲವು ಲಭಿಸುತ್ತದೆ ಎಂದರು.
ಕಾರ್ಯಕ್ರಮದ ಬಳಿಕ ವಿ.ನಾಗೇಂದ್ರ ಶಾ ಅವರ ಹಾಡು ಹಕ್ಕಿ ಹಾಡು ಚಲನಚಿತ್ರ ಪ್ರದರ್ಶನವಾಯಿತು. ವೇದಿಕೆಯಲ್ಲಿ ನಿರ್ದೇಶಕರಾದ ವಿ.ನಾಗೇಂದ್ರ ಶಾ, ವಿ.ಚಲ, ರವೀಂದ್ರನಾಥ್ ಸಿರಿವರ, ಎಂ.ರವಿ, ಶ್ರೀನಾಥ್ ವಸಿಷ್ಠ, ನೆಲೆ ಹಿನ್ನೆಲೆಯ ಗೋಪಾಲ್ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT