ಕರ್ನಾಟಕ

ವಿಧಾನಸಭೆ ಉಪ ಚುನಾವಣೆ: ಜಾಧವ್ ಸೋದರ ಮತ್ತು ಚಿಕ್ಕನಗೌಡರ್ ಗೆ ಬಿಜೆಪಿ ಟಿಕೆಟ್ ಸಾಧ್ಯತೆ

Sumana Upadhyaya
ಬೆಂಗಳೂರು/ಹುಬ್ಬಳ್ಳಿ: ಮೇ 19ರಂದು ನಡೆಯಲಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ ಉಮೇಶ್ ಜಾಧವ್ ಅವರ ಸೋದರ ರಾಮಚಂದ್ರ ಜಾಧವ್ ಅವರನ್ನು ಮತ್ತು ಕುಂದಗೋಳದಲ್ಲಿ ಎಸ್ ಐ ಚಿಕ್ಕನಗೌಡರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ನಿನ್ನೆ ಬಿಜೆಪಿಯ ಕೋರ್ ಸಮಿತಿ ಇವರಿಬ್ಬರ ಹೆಸರುಗಳನ್ನು ಹೈಕಮಾಂಡ್ ಗೆ ಎರಡೂ ಕ್ಷೇತ್ರಗಳಿಗೆ ಇಬ್ಬಿಬ್ಬರ ಹೆಸರುಗಳನ್ನು ಶಿಫಾರಸು ಮಾಡಿದೆ. ಚಿಂಚೋಳಿ ಕ್ಷೇತ್ರಕ್ಕೆ ರಾಮಚಂದ್ರ ಜಾಧವ್ ಮತ್ತು ಸುನಿಲ್ ವಲ್ಯಪುರೆ ಹಾಗೂ ಕುಂದಗೋಳಕ್ಕೆ ಎಸ್ಐ ಚಿಕ್ಕನಗೌಡರ್ ಮತ್ತು ಎಂಆರ್ ಪಾಟೀಲ್ ಆಗಿದ್ದಾರೆ.
ಬಿಜೆಪಿ ರಾಮಚಂದ್ರ ಜಾಧವ್ ಮತ್ತು ಚಿಕ್ಕನಗೌಡರ್ ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದ್ದು ಸದ್ಯದಲ್ಲಿಯೇ ಹೆಸರುಗಳನ್ನು ಪ್ರಕಟಿಸಲಿದೆ. ನಾಡಿದ್ದು ಸೋಮವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ.
SCROLL FOR NEXT