ಸಂಗ್ರಹ ಚಿತ್ರ 
ಫೀಫಾ ವಿಶ್ವ ಕಪ್ 2018

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಜರ್ಮನಿಯ ಸ್ಟಾರ್ ಆಟಗಾರ ಮೆಸುಟ್ ಒಝಿಲ್ 'ನೋವಿನ ವಿದಾಯ'

ಜರ್ಮನಿ ತಂಡದ ಖ್ಯಾತ ಆಟಗಾರ ಮೆಸುಟ್ ಒಝಿಲ್ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೋವಿನ ವಿದಾಯ ಹೇಳಿದ್ದಾರೆ.

ಬರ್ಲಿನ್: ಜರ್ಮನಿ ತಂಡದ ಖ್ಯಾತ ಆಟಗಾರ ಮೆಸುಟ್ ಒಝಿಲ್ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೋವಿನ ವಿದಾಯ ಹೇಳಿದ್ದಾರೆ.
ಈ ಹಿಂದೆ ರಷ್ಯಾದಲ್ಲಿ ನಡೆದ ಫೀಫಾ ವಿಶ್ವಕಪ್ ಟೂರ್ನಿ ವೇಳೆ ತಮ್ಮ ಅಮೋಘ ಆಟದಿಂದಾಗಿ ಗಮನ ಸೆಳೆದಿದ್ದ ಒಝಿಲ್ ಇದೀಗ ತಮ್ಮದೇ ದೇಶದ ಅಭಿಮಾನಿಗಳ ಆಕ್ರೋಶ ಎದುರಿಸುತ್ತಿದ್ದು, ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. 
ಒಝಿಲ್ ನೋವಿನ ವಿದಾಯಕ್ಕೆ ಕಾರಣವಾಯ್ತು ಆ ಒಂದು ಫೋಟೋ..
ಇನ್ನು ಜರ್ಮನಿ ತಂಡದ ಸ್ಟಾರ್ ಆಟಗಾರ ಒಝಿಲ್ ಈ ಹಿಂದೆ ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೋಗನ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋ ಜರ್ಮನಿಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಒಝಿಲ್ ವಿರುದ್ಧ ಸ್ವತಃ ಜರ್ಮನಿ ಫುಟ್ಬಾಲ್ ಸಂಸ್ಥೆ ಸೇರಿದಂತೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿ ಬರೆದಿದ್ದವು. ಅಲ್ಲದೆ ವಿಶ್ವಕಪ್ ನಲ್ಲಿ ಜರ್ಮನಿ ಸೋಲಿಗೆ ಒಝಿಲ್ ಕಾರಣ ಎಂಬ ರೀತಿಯಲ್ಲಿ ಪತ್ರಿಕೆಗಳು ಮತ್ತು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಒಝಿಲ್ ಇಂದು ತಮ್ಮ ಜರ್ಮನಿ ತಂಡಕ್ಕೆ ರಾಜಿನಾಮೆ ನೀಡಿದ್ದಾರೆ.
ಇನ್ನು ಮೆಸುಟ್ ಒಝಿಲ್ ಮೂಲತಃ ಟರ್ಕಿ ಮೂಲದವರಾಗಿದ್ದು, ಇಂದಿಗು ಅವರ ಪೋಷಕರು ಟರ್ಕಿಯಲ್ಲೇ ನೆಲೆಸಿದ್ದಾರೆ. ಒಝಿಲ್ ಮಾತ್ರ ಜರ್ಮನಿಯಲ್ಲಿ ನೆಲೆಕಂಡುಕೊಂಡಿದ್ದು, ಇದೇ ಕಾರಣಕ್ಕೆ ಒಝಿಲ್ ಜರ್ಮನಿಗೆ ಮೋಸ ಮಾಡಿದರು ಎಂದು ಜರ್ಮನಿ ಫುಟ್ಬಾಲ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಫೋಟೋ ಪೋಸ್ ಗೆ ಸ್ಪಷ್ಟನೆ ನೀಡಿದ ಆಟಗಾರ
ಇನ್ನು ಜರ್ಮನಿಯಲ್ಲಿ ಭಾರಿ ವಿವಾದವನ್ನೇ ಹುಟ್ಟುಹಾಕಿರುವ ಫೋಟೋ ಕುರಿತಂತೆ ಒಝಿಲ್ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ನನ್ನ ಪೋಷಕರು ನೆಲೆಸಿರುವ ದೇಶದ ಸರ್ವೋಚ್ಛ ಕಚೇರಿಯ ಮುಖ್ಯಸ್ಥರಿಗೆ ನಾನು ಗೌರವ ನೀಡಿದ್ದೇನೆ. ಹಾಗೆಂದ ಮಾತ್ರಕ್ಕೆ ನನ್ನನ್ನು ದೇಶದ್ರೋಹಿಯಂತೆ ಬಿಂಬಿಸುವುದು ಸರಿಯಲ್ಲ. ಮಾಧ್ಯಮಗಳು ಮತ್ತು ಪತ್ರಿಕೆಗಳು ಜರ್ಮನಿ ಪ್ರಜೆಗಳನ್ನು ನನ್ನವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಜರ್ಮನ್ ಫುಟ್ಬಾಲ್ ಸಂಸ್ಥೆಯ ವಿರುದ್ಧವೂ ಒಝಿಲ್ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ನಾನು ನಡು ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ: ಪ್ರೇಕ್ಷಕರಿಗೆ ನಟಿ ಶ್ವೇತಾ ಚಾಲೆಂಜ್; ವಿಡಿಯೋ ವೈರಲ್!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ; ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!