ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ಆರೋಗ್ಯ

ನಮ್ಮ ಆಹಾರ, ಗಾಳಿ, ನೀರು, ಮನಸ್ಸಿನ ಮಾಲಿನ್ಯದಿಂದ ಕ್ಯಾನ್ಸರ್ ಗೆ ಕಾರಣವಾಗುವ ವರ್ತುಲ ಸೃಷ್ಟಿ!

Nagaraja AB

ಪ್ರಮುಖ ಜಾಗತಿಕ ಆರೋಗ್ಯ ಏಜೆನ್ಸಿಗಳ ವರದಿಗಳ ಪ್ರಕಾರ, ಮುಂಬರುವ ದಶಕದಲ್ಲಿ ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಶೇ.50 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮುಂಬರುವ ವರ್ಷಗಳಲ್ಲಿ ಸುಮಾರು ಮೂವರಲ್ಲಿ ಒಬ್ಬರು ಒಂದು ಅಥವಾ ಬೇರೊಂದು ಸಾಂಕ್ರಾಮಿಕವಲ್ಲದ ಕಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆ. ವಿಶಿಷ್ಟವಾಗಿ ಬಾಹ್ಯವಾಗಿ ಆರೋಗ್ಯದಿಂದ ಇರುವ ಮಧ್ಯವಯಸ್ಕ ವ್ಯಕ್ತಿ ಕ್ಯಾನ್ಸರ್‌ ನ ಲಕ್ಷಣಗಳೊಂದಿಗೆ ಆಂಕೊಲಾಜಿಸ್ಟ್‌ ಬಳಿಗೆ ಬಂದಾಗ ಮತ್ತು ಬಯಾಪ್ಸಿ ವರದಿ ಅದನ್ನು ದೃಢೀಕರಿಸಿದಾಗ, ದಿಗ್ಭ್ರಮೆಗೊಳ್ಳುವುದು ಸಹಜ.

ಅತ್ಯಂತ ಆರೋಗ್ಯಕರ ಜೀವನಶೈಲಿ ನಡೆಸಿದ, ನಿಯಮಿತವಾಗಿ ವ್ಯಾಯಾಮ ಮಾಡಿದ, ಸಮತೋಲಿತ ಆಹಾರ ನಿರ್ವಹಿಸಿದ ಮತ್ತು ಯಾವುದೇ ವ್ಯಸನವನ್ನು ಹೊಂದಿರದ ಯಾರಿಗಾದರೂ ಮನ ಒಪ್ಪುವಂತಹ ಉತ್ತರ ನೀಡಲು ವೈದ್ಯರು ಹೆಣಗಾಡುತ್ತಾರೆ. ಆದಾಗ್ಯೂ, ಕ್ಯಾನ್ಸರ್ ರೋಗವು ನಮ್ಮ ವ್ಯವಸ್ಥೆಯನ್ನು ಆಕ್ರಮಿಸುವಲ್ಲಿ ಯಶಸ್ವಿಯಾಗಿದೆ. ಏಕೆ ಮತ್ತು ಹೇಗೆ? ಇಂತಹ ವೇಗದಲ್ಲಿ ಕ್ಯಾನ್ಸರ್‌ಗಳು ಏಕೆ ಹೆಚ್ಚುತ್ತಿವೆ? ಕ್ಯಾನ್ಸರ್, ಅದು ಆರೋಗ್ಯಕರ ಕೋಶ ವ್ಯವಸ್ಥೆಯನ್ನು ಆಕ್ರಮಿಸಲು ಬಯಸುತ್ತದೆ ಮತ್ತು ಅದು ತಕ್ಷಣವೇ ಮತ್ತು ಮಿತಿಯಿಲ್ಲದೆ ಹರಡುತ್ತದೆ.

ಮೈಕೋಟಾಕ್ಸಿನ್‌ಗಳು, ಸೂಕ್ಷ್ಮಜೀವಿಯ ಮಾಲಿನ್ಯ, ಪಶುವೈದ್ಯಕೀಯ ಔಷಧದ ಅವಶೇಷಗಳು, ಭಾರಿ ಲೋಹಗಳು, ಅನಧಿಕೃತ ಆಹಾರ ಸೇರ್ಪಡೆ ಮತ್ತು ಕೀಟನಾಶಕಗಳ ಅವಶೇಷಗಳ ಪತ್ತೆಗೆ ಸಂಬಂಧಿಸಿದಂತೆ ಯುಎಸ್ ಎ ಮತ್ತು ಇಯು ಕೃಷಿ-ಆಹಾರ ತಿರಸ್ಕರಿಸುವಲ್ಲಿ ನಾವು ಉನ್ನತ ಶ್ರೇಣಿಯಲ್ಲಿರುವುದರಲ್ಲಿ ಆಶ್ಚರ್ಯವಿಲ್ಲ. ಇದು ನಮ್ಮ ರಫ್ತಿನ ಗುಣಮಟ್ಟವಾಗಿದ್ದರೆ, ದೇಶದೊಳಗಿನ ಆಂತರಿಕ ಬಳಕೆಯ ಮಾನದಂಡಗಳನ್ನು ನಾವು ಊಹಿಸಬಹುದು. ಕುಖ್ಯಾತ ಮ್ಯಾಗಿ ಪ್ರಯೋಗವು ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚು ಅಗತ್ಯವಿರುವ ಚರ್ಚೆಯನ್ನು ಹುಟ್ಟುಹಾಕಿತು ಆದರೆ ಇದು ಅಷ್ಟೊಂದು ಪ್ರಭಾವ ಬೀರಲಿಲ್ಲ.

ಭಾರತದ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಕಾಯ್ದೆ ಒಂದು ಸಮಗ್ರ ಕಾಯ್ದೆಯಾಗಿದೆ. ಅಕ್ರಮ ಆಹಾರ ಪದ್ಧತಿ ತಡೆಗಟ್ಟಲು ನಮಗೆ ದೇಶದ ಉದ್ದಗಲಕ್ಕೂ ಈ ಕಾಯ್ದೆಯ ಕಠಿಣ ನಿಯಂತ್ರಣ ಮತ್ತು ಅನುಷ್ಠಾನದ ಅಗತ್ಯವಿದೆ. ಅದೇ ಸಮಯದಲ್ಲಿ, ನಾವು ವಿಷಕಾರಿ ‘ಒಂದು ಖರೀದಿಸಿ, ಮೂರು ಉಚಿತ ಪಡೆಯಿರಿ’ ಎಂಬುದನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ನಾವು ಭೌತಿಕ ತೃಪ್ತಿಯ ಅಂತ್ಯವಿಲ್ಲದೆ ಆರೋಗ್ಯವನ್ನು ಕೆಡಿಸಿಕೊಳ್ಳಬೇಕಾಗುತ್ತದೆ. ನಮ್ಮ ಪ್ರಮುಖ ಆಸ್ತಿಯನ್ನು ರಕ್ಷಿಸುವ ಏಕೈಕ ಮಾರ್ಗ ನಮ್ಮ ಆರೋಗ್ಯ!ವಾಗಿದೆ.

ಡಾ. ವಿಶಾಲ್ ರಾವ್ ಯುಎಸ್

ಗ್ರೂಪ್ ಡೈರೆಕ್ಟರ್ ಫಾರ್ ಹೆಡ್ ಮತ್ತು ನೆಕ್ ಸರ್ಜಿಕಲ್ ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ, HCG ಕ್ಯಾನ್ಸರ್ ಸೆಂಟರ್

SCROLL FOR NEXT