ಹೃದಯಾಘಾತ 
ಆರೋಗ್ಯ

ಖ್ಯಾತ ನಟ ದಿಲೀಪ್ ರಾಜ್ ಸಾವು: ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ? ತಜ್ಞರು ಹೇಳೋದೇನು?

ಆನ್‌ಲೈನ್‌ನಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದ್ದು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಕೆಲ ಸಲಹೆಗಳನ್ನೂ ನೀಡಲಾಗುತ್ತಿದೆ.

ಬೆಂಗಳೂರು: ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಹಠಾತ್ ಮರಣದ ಬಳಿಕ ಮತ್ತೆ ಹೃದಯಾಘಾತದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇದೇ ಸಂದರ್ಭದಲ್ಲೇ ವಾಟ್ಸಪ್ ಮತ್ತು ರೀಲ್ಸ್ ಗಳಲ್ಲಿ ಈ ಬಗ್ಗೆ ಸಾಕಷ್ಟು ವೈರಲ್ ಮಾಹಿತಿಗಳು ಹರಿದಾಡುತ್ತಿವೆ.

ಆನ್‌ಲೈನ್‌ನಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದ್ದು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಕೆಲ ಸಲಹೆಗಳನ್ನೂ ನೀಡಲಾಗುತ್ತಿದೆ.

ಈ ಪಟ್ಟಿಗೆ “ಬನಕೋಮಾ ಓನಾಕೋ” ಎಂಬ ಜಪಾನೀಸ್ ಹೃದಯ ತಜ್ಞರ ಸಲಹೆ ಕೂಡ ಸೇರಿದ್ದು, ಹೀಗೆ ಆನ್ಲೈನ್ ನಲ್ಲಿ ಹರಿದಾಡುತ್ತಿರುವ ಈ ಸಂದೇಶಗಳು ತಪ್ಪು ದಾರಿ ಹಿಡಿಸುವಂತಿದ್ದು, ವೈದ್ಯಕೀಯವಾಗಿ ದೃಢೀಕರಿಸಲ್ಪಟ್ಟಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಬನಕೋಮಾ ಓನಾಕೋ” ಎಂಬ ಜಪಾನೀಸ್ ಹೃದಯ ತಜ್ಞರು ನೀಡಿದ್ದಾರೆ ಎಂದು ಹೇಳಲಾದ ಹೇಳಿಕೆಗಳು ಇದೀಗ ಆನ್ಲೈನ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅವರೇ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ.

ಏನದು ಬನಕೋಮಾ ಓನಾಕೋ ಅವರ ಸಲಹೆಗಳು?

ಪ್ರಸ್ತುತ ವೈರಲ್ ಆಗಿರುವ ಸಂದೇಶಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಮನುಷ್ಯರು ಮಾಡುವ ಒಂದು ಕಾರ್ಯವನ್ನು ಉಲ್ಲೇಖಿಸಲಾಗಿದೆ. ಇದರಿಂದಲೇ ಹೆಚ್ಚಿನ ಪ್ರಮಾಣದ ಹೃದಯಾಘಾತಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಡಲಾಗಿದೆ.

ಏನದು ಬೆಳಗಿನ ತಪ್ಪು?

ಸಾಮಾನ್ಯವಾಗಿ ಬಹುತೇಕ ಮಂದಿ ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಎದ್ದು ನಿಂತುಕೊಳ್ಳುತ್ತಾರೆ. ಇದೇ ಕಾರಣದಿಂದ ಶೇ.80ರಷ್ಟು ಹೃದಯಾಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗಿದೆ. ನಿದ್ರಾ ಪ್ರಕ್ರಿಯೆಯಲ್ಲಿ ಮನುಷ್ಯನ ದೇಹ ಬಹುತೇಕ ವಿಶ್ರಾಂತಿಯಲ್ಲಿರುತ್ತದೆ. ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಮೊದಲು ನಮ್ಮ ಮೆದುಳು ಸಕ್ರಿಯವಾಗುತ್ತದೆ.

ಆದರೆ ದೇಹದ ಇತರೆ ಭಾಗಗಳು ಸಕ್ರಿಯವಾಗಲು ಕೊಂಚ ಸಮಯ ಹಿಡಿಯುತ್ತದೆ. ಪ್ರಮುಖವಾಗಿ ಹೃದಯ ಇನ್ನೂ ರಾತ್ರಿ ಮೂಡ್ ನಲ್ಲೇ ಇರುತ್ತದೆ. ಹೀಗಾಗಿ ನಿದ್ರೆಯಿಂದ ಎದ್ದ ಕೂಡಲೇ ನಿಲ್ಲುವುದರಿಂದ ಕಾರ್ಟಿಸೋಲ್ ಗಳ ಹೆಚ್ಚಳ, ರಕ್ತನಾಳಗಳ ಸಂಕೋಚನ ಮತ್ತು ರಕ್ತದೊತ್ತಡದಲ್ಲಿ ತೀವ್ರ ಹಠಾತ್ ಏರಿಕೆಯ ಅಪಾಯಗಳು ಉದ್ಭವಿಸಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ವೈಜ್ಞಾನಿಕ ಪುರಾವೆ ಇಲ್ಲ

ಇಂತಹ ವಾದಗಳಿಗೆ ಪ್ರಸ್ತುತ ಸ್ಪಷ್ಟ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗೆಯೇ “ಬೆಳಗ್ಗೆ ಎದ್ದ ತಕ್ಷಣ ನಿಂತುಕೊಳ್ಳುವುದು 80% ಹೃದಯಾಘಾತಗಳಿಗೆ ಕಾರಣ” ಎಂಬುದನ್ನು ಸಮರ್ಥಿಸುವ ಮಾನ್ಯ ವೈದ್ಯಕೀಯ ಸಂಶೋಧನೆಯೂ ಲಭ್ಯವಿಲ್ಲ. ಆದರೆ, ಈ ಸಂದೇಶದಲ್ಲಿನ ಕೆಲವು ಅಂಶಗಳಲ್ಲಿ ಸ್ವಲ್ಪ ದೈಹಿಕ ಸತ್ಯಾಂಶವಿದೆ.

ಬೆಳಿಗ್ಗೆ ರಕ್ತದ ಒತ್ತಡ ಮತ್ತು ಕಾರ್ಟಿಸೋಲ್ ಮಟ್ಟ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಹಠಾತ್ ದೇಹದ ಸ್ಥಿತಿಯನ್ನು ಬದಲಾಯಿಸುವುದು ರಕ್ತದ ಒತ್ತಡ ಮತ್ತು ಹೃದಯ ಬಡಿತದ ಮೇಲೆ ತಾತ್ಕಾಲಿಕ ಪರಿಣಾಮ ಬೀರುತ್ತದೆ. ವಯೋವೃದ್ಧರು ಅಥವಾ ಕಡಿಮೆ ರಕ್ತದ ಒತ್ತಡ ಇರುವವರು ಬೇಗನೆ ಎದ್ದರೆ ತಲೆ ಸುತ್ತುವ ಅನುಭವ ಹೊಂದಬಹುದು.

“80% ಹೃದಯಾಘಾತಗಳು ಒಂದು ಬೆಳಗಿನ ತಪ್ಪಿನಿಂದ ಆರಂಭವಾಗುತ್ತವೆ” ಎಂಬ ಹೇಳಿಕೆಯನ್ನು ಹೃದಯ ವೈದ್ಯಕೀಯ ಸಂಶೋಧನೆ ಸಮರ್ಥಿಸುವುದಿಲ್ಲ. ಆದರೂ, ಶಾಂತವಾಗಿ ಎದ್ದುಕೊಳ್ಳುವುದು ಸಾಮಾನ್ಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸವಾಗಬಹುದು. ನಿಧಾನವಾದ ಬೆಳಗಿನ ರೊಟೀನ್ ಕೆಲವರಿಗೆ ತಲೆ ಸುತ್ತುವುದು ಅಥವಾ ಒತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಇದನ್ನು ಹೃದಯಾಘಾತ ತಡೆಯುವ ವೈಜ್ಞಾನಿಕವಾಗಿ ಸಾಬೀತಾದ ವಿಧಾನವೆಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ..

ಕೆಲವು ಸಂದರ್ಭಗಳಲ್ಲಿ ವೈದ್ಯರು ವಿಶೇಷವಾಗಿ ವಯೋವೃದ್ಧರು ಅಥವಾ ತಲೆ ಸುತ್ತುವ ಸಮಸ್ಯೆಯಿರುವವರಿಗೆ ನಿಂತುಕೊಳ್ಳುವ ಮೊದಲು ನಿಧಾನವಾಗಿ ಕುಳಿತುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಅದು “ಹಠಾತ್ ಎದ್ದು ನಿಲ್ಲುವುದು ಬಹುತೇಕ ಹೃದಯಾಘಾತಗಳಿಗೆ ಕಾರಣ” ಎನ್ನುವ ಹೇಳಿಕೆಯಿಂದ ಸಂಪೂರ್ಣ ಭಿನ್ನವಾಗಿದೆ.

ಹಾಗಾದ್ರೆ ಹೃದಯಾಘಾತಕ್ಕೆ ಕಾರಣಗಳೇನು?

  • ಅಧಿಕ ರಕ್ತದ ಒತ್ತಡ

  • ಮಧುಮೇಹ

  • ಹೆಚ್ಚಿನ ಕೊಲೆಸ್ಟ್ರಾಲ್

  • ಧೂಮಪಾನ

  • ಅತಿಯಾದ ತೂಕ

  • ವ್ಯಾಯಾಮದ ಕೊರತೆ

  • ಒತ್ತಡ

  • ಕಳಪೆ ನಿದ್ರೆ, ಕಡಿಮೆ ಅಥವಾ ಗುಣಮಟ್ಟ ನಿದ್ರೆ ಇಲ್ಲದೇ ಇರುವುದು

  • ಕುಟುಂಬದ ಆರೋಗ್ಯ ಇತಿಹಾಸ

ಸೂಚನೆ

ಕೆಲವರು, ವಿಶೇಷವಾಗಿ ವಯೋವೃದ್ಧರು ಅಥವಾ ತಲೆ ಸುತ್ತುವ ಸಮಸ್ಯೆಯಿರುವವರು, ಎದ್ದ ನಂತರ ನಿಧಾನವಾಗಿ ಕುಳಿತು ನಂತರ ನಿಲ್ಲುವುದರಿಂದ ಪ್ರಯೋಜನ ಪಡೆಯಬಹುದು. ಆದರೆ ಹಠಾತ್ ಎದ್ದು ನಿಲ್ಲುವುದು ಬಹುತೇಕ ಹೃದಯಾಘಾತಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ.

ಹೃದಯ ಆರೋಗ್ಯದ ಕುರಿತು ವಿಶ್ವಾಸಾರ್ಹ ಮಾಹಿತಿಗಾಗಿ ಜನರು ಮಾನ್ಯ ವೈದ್ಯಕೀಯ ಸಂಸ್ಥೆಗಳ ಮಾರ್ಗದರ್ಶನವನ್ನು ಅನುಸರಿಸಿ, ಸಾಮಾಜಿಕ ಜಾಲತಾಣಗಳ ವೈರಲ್ ಸಂದೇಶಗಳಿಗಿಂತ ಅರ್ಹ ಹೃದಯ ತಜ್ಞರ ಸಲಹೆ ಪಡೆಯುವುದು ಉತ್ತಮ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ಸಸ್ಪೆನ್ಸ್ ಗೆ ಕೊನೆಗೂ ಬಿತ್ತು ತೆರೆ: ನೂತನ ಮುಖ್ಯಮಂತ್ರಿಯಾಗಿ VD Satheesan ಆಯ್ಕೆ

Energy Crisis ಗೆ ಉತ್ತರ ಕೊಡಬೇಕಿದೆ ಭಾರತ! (ಹಣಕ್ಲಾಸು)

IPL 2026: KKR ವಿರುದ್ಧ RCB ಭರ್ಜರಿ ಜಯ, ದೈತ್ಯ ಕ್ರಿಸ್ ಗೇಯ್ಲ್ ರ ಬೃಹತ್ ದಾಖಲೆ ಮುರಿದ Virat Kohli

‘ಹಿಂದೂ ಧರ್ಮ ಒಂದು ಜೀವನ ಶೈಲಿ, ದೇವಾಲಯಕ್ಕೆ ಹೋಗೋದು ಕಡ್ಡಾಯವಲ್ಲ’: Supreme Court

ಮೇ 16 ಶನಿವಾರದ ಅಮಾವಾಸ್ಯೆಯ ಮಹತ್ವ: ಶನಿದೇವರ ಕೃಪೆಗಾಗಿ ಏನು ಮಾಡಬೇಕು? ಏನು ಮಾಡಬಾರದು? ಈ ವಸ್ತುಗಳ ದಾನ ಕೊಟ್ಟರೆ ನಿಮ್ಮ ಸಂಕಷ್ಟ ಮಾಯ!

SCROLL FOR NEXT