ಅನುಪಮಾ ಶೆಣೈ 
ರಾಜ್ಯ

ಗೊಂದಲದಲ್ಲಿ ಅನುಪಮಾ ರಾಜೀನಾಮೆ ಪತ್ರ: ಭುಗಿಲೆದ್ದ ವಿವಾದ

ಬಳ್ಲಾರಿ ಜಿಲ್ಲೆಯ ಕೂಡ್ಗಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ಮತ್ತೆ ವಿವಾದ ಸೃಷ್ಟಿಸಿದ್ದು, ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ...

ಬೆಂಗಳೂರು: ಬಳ್ಲಾರಿ ಜಿಲ್ಲೆಯ ಕೂಡ್ಗಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ಮತ್ತೆ ವಿವಾದ ಸೃಷ್ಟಿಸಿದ್ದು, ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ.

ಈ ವೈಯಕ್ತಿಕ ಕಾರಣ ರಾಜೀನಾಮೆ ನೀಡುವುದಕ್ಕೂ ಮುನ್ನ ಕರ್ತವ್ಯಕ್ಕೆ ಸಂಬಂಧಿಸಿದ ಕಾರಣ ನೀಡಿ ರಾಜೀನಾಮೆ ಪತ್ರ ಸಲ್ಲಿಸಲು ಅನುಪಮಾ ಮುಂದುಗಿದ್ದರು ಎಂಬ ಸತ್ಯಾಂಶ ಇದೀಗ ಬೆಳಕಿಗೆ ಬಂದಿದೆ.

ವ್ಯವಸ್ಥೆ ವಿರುದ್ಧ ತಿರುಗಿ ಬಿದ್ದು ಡಿವೈಎಸ್ಪಿ ಹುದ್ದೆಗೆ ಅನುಪಮಾ ಅವರು ನೀಡಿದ್ದ ರಾಜೀನಾಮೆ ಪತ್ರವನ್ನು ಈ ಹಿಂದೆ ಸರ್ಕಾರ ಅಂಗೀಕರಿಸಿತ್ತು. ವೈಯಕ್ತಿಕ ಕಾರಣಗಳ ನಿಮಿತ್ತ ಈ ಇಲಾಖೆಯಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಕಾರಣ ನಾನು ನನ್ನ ಹುದ್ದೆಗೆ ರಾಜೀನಾಮೆಯನ್ನು ನೀಡುತ್ತಿದ್ದೇನೆಂದು ಅನುಪಮಾ ಅವರು ಜೂ.4 ರಂದು ರಾಜೀನಾಮೆ ಸಲ್ಲಿಸಿದ್ದರು.

ಈ ಪತ್ರಕ್ಕೂ ಮುನ್ನ ಅನುಪಮಾ ಅವರು ಕರ್ತವ್ಯಕ್ಕೆ ಸಂಬಂಧಿಸಿಯೂ ಕೂಡ ರಾಜೀನಾಮೆ ಸಲ್ಲಿಸಿದ್ದರೆಂಬುದು ಇದೀಗ ತಿಳಿದುಬಂದಿದ್ದು, ಪತ್ರದಲ್ಲಿನ ಸಾರಾಂಶ ಈ ರೀತಿಯಿದೆ.

ನಾನು ಸತತವಾಗಿ ಅಕ್ರಮ ಮದ್ಯವನ್ನು ನಿರ್ಮೂಲನೆ ಮಾಡುವ ಬಗ್ಗೆ ನನ್ನ ಉಪ ವಿಭಾಗದಲ್ಲಿ ಕಟ್ಟಿನಿಟ್ಟಿನ ಕ್ರಮ ಜರುಗಿಸಿರುತ್ತೇನೆ. ಆದರೆ, ಕೂಡ್ಲಿಗಿಯಲ್ಲಿನ ಲಿಕ್ಕರ್ ಲಾಬಿ ಎಷ್ಟೊಂದು ಪ್ರಬಲವಾಗಿದೆ ಎಂದರೆ, ಕೂಡ್ಲಿಗಿ ಪೊಲೀಸ್ ಠಾಣೆ ಸಿಬ್ಬಂದಿ, ಪಿಎಸ್ಐ ಹಾಗೂ ಸಿಪಿಐಯವರು ಈ ಲಾಭಿಗೆ ತಲೆಬಾಗಿರುತ್ತಾರೆ.

ಈ ಲಿಕ್ಕರ್ ಲಾಬಿಯು ತೆರೆಮರೆಯಲ್ಲಿ ನಿಂತು ಈ ದಿನ ಕೂಡ್ಲಿಗಿಯ ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿರುತ್ತಾರೆ. ಇದಕ್ಕೆ ಪಿಎಸ್ ಐ ಹಾಗೂ ಸಿಪಿಐರವರ ಕುಮ್ಮಕ್ಕೂ ಇದೆ. ಸದರಿ ಪ್ರತಿಭಟನೆಯನ್ನು ತಡೆಯುವಲ್ಲಿ ನಾನು ಸಂಪೂರ್ಣ ನಿಷ್ಕ್ರಿಯಳಾಗಿರುತ್ತೇನೆ. ಈ ಬಗ್ಗೆ ಇಲಾಖೆಯ ಶಿಸ್ತು ಕ್ರಮಕ್ಕೂ ನಾನು ಬದ್ಧಳಾಗಿದ್ದೇನೆ.

ನಡೆದಿರುವ ಘಟನೆಗಳಿಂದ ನೊಂದು ನಾನು ರಾಜೀನಾಮೆಯನ್ನು ನೀಡಿರುತ್ತೇನೆಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಈ ಪತ್ರ ಬಹಿರಂಗಗೊಂಡಿದ್ದು, ರಾಜೀನಾಮೆ ಪತ್ರದ ಕುರಿತು ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT