ಬೆಂಕಿಗಾಹುತಿಯಾಗಿರುವ ಕೆಪಿಎನ್ ಟ್ರಾವೆಲ್ಸ್ ನ ಬಸ್ ಗಳು 
ರಾಜ್ಯ

ಕಾವೇರಿ ಹೋರಾಟ: ಬೆಂಗಳೂರು ಹೊತ್ತಿ ಉರಿಯುತ್ತಿದ್ದ ವೇಳೆ ಭಾಷಾ ಸಾಮರಸ್ಯ ಮೆರೆದ ಕನ್ನಡಿಗ ಲಾರಿ ಮಾಲೀಕ

ಕಾವೇರಿ ಹೊರಾಟದಲ್ಲಿ ಇಡೀ ಬೆಂಗಳೂರೇ ಹೊತ್ತಿ ಉರಿಯುತ್ತಿದ್ದ ಸಂದರ್ಭ, ತಮಿಳುನಾಡಿನ ವಾಹನಗಳಿಗೆ ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದ್ದ ವೇಳೆ ಕನ್ನಡಿಗ ಲಾರಿ ..

ಬೆಂಗಳೂರು: ಕಾವೇರಿ ಹೊರಾಟದಲ್ಲಿ ಇಡೀ ಬೆಂಗಳೂರೇ ಹೊತ್ತಿ ಉರಿಯುತ್ತಿದ್ದ ಸಂದರ್ಭ, ತಮಿಳುನಾಡಿನ ವಾಹನಗಳಿಗೆ ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದ್ದ ವೇಳೆ ಕನ್ನಡಿಗ ಲಾರಿ ಮಾಲೀಕರೊಬ್ಬರು ಕೆಪಿಎನ್ ಟ್ರಾವೆಲ್ಸ್ ನ ಚಾಲಕರನ್ನು ಸುರಕ್ಷಿತವಾಗಿ ತಮಿಳುನಾಡು ಸೇರಿಸಿದ್ದಾರೆ.

ನಗರದಲ್ಲಿ ಟ್ರಾನ್ಸ್ ಪೋರ್ಟ್  ವ್ಯವಹಾರ ಮಾಡುತ್ತಿರುವ ಬಿ. ಶಿವಣ್ಣ ಎಂಬುವರು ಕೆಪಿಎನ್ ಟ್ರಾವೆಲ್ಸ್ ನ 31 ಚಾಲಕರನ್ನು ತಮ್ಮ ಕಂಟೈನರ್ ವಾಹನದಲ್ಲಿ ಕರೆದು ಕೊಂಡು ಹೋಗಿ ಸುರಕ್ಷಿತವಾಗಿ ಕರ್ನಾಟಕದ ಗಡಿ ದಾಟಿಸಿದ್ದಾರೆ.

ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ಹಲವು ಬಸ್ ಗಳಿಗೆ ಬೆಂಕಿ ಹಚ್ಚಿದ ನಂತರ ಹೆದರಿದ ಚಾಲಕರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದರು. ವಾಪಸ್ ತಮ್ಮೂರಿಗೆ ತೆರಳಲು ಬೆದರಿ ಕುಳಿತಿದ್ದರು. ಚಾಮರಾಜಪೇಟೆಯಲ್ಲಿನ ಶಿವ ಟ್ರಾನ್ಸ್ ಪೋರ್ಟ್ ನ ಮಾಲೀಕ  ಬಿ. ಶಿವಣ್ಣ ಅವರು ಎಲ್ಲಾ 31 ಚಾಲಕರನ್ನು ತಮ್ಮ ಕಂಟೈನರ್ ಲಾರಿಯಲ್ಲಿ ಕೂರಿಸಿ ಅವರನ್ನು ಸುರಕ್ಷಿತವಾಗಿ ಕರ್ನಾಟಕ ಗಡಿಭಾಗಕ್ಕೆ ಬಿಟ್ಟು ಬಂದಿದ್ದಾರೆ ಎಂದು ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ದಾಮೋದರ್ ಹೇಳಿದ್ದಾರೆ.ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಪೊಲೀಸರು ಮಾಡಲು ಸಾಧ್ಯವಾಗದ ಕೆಲಸವನ್ನು ಶಿವಣ್ಣ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ರಾತ್ರಿ 9.30ಕ್ಕೆ ಡಿಸೋಜಾ ನಗರಕ್ಕೆ ತೆರಳಿದ ಶಿವಣ್ಣ ಅಲ್ಲಿಂದ ನಾಲ್ವರು ಚಾಲಕರನ್ನು ಲಾರಿಗೆ ಹತ್ತಿಸಿಕೊಂಡು ಬಂದರು, ಮಧ್ಯರಾತ್ರಿ 1.30 ರ ವೇಳೆಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದ ಉಳಿದ ಚಾಲಕರನ್ನು ಹತ್ತಿಸಿಕೊಂಡು ಎರಡು ರಾಜ್ಯಗಳ ಗಡಿಭಾಗವಾದ ಅತ್ತಿಬೆಲೆ ಬಳಿ ಬಿಟ್ಟು ಬಂದಿದ್ದಾರೆ. ನಮಗಾಗಿ ರಿಸ್ಕ್ ತೆಗೆದುಕೊಂಡ ಶಿವಣ್ಣ ಅವರು ಇದಕ್ಕಾಗಿ ಒಂದು ರೂಪಾಯಿ ಕೂಡ ನಮ್ಮಿಂದ ಕೇಳಲಿಲ್ಲ ಎಂದು ಕೆಪಿಎನ್ ಟ್ರಾವೆಲ್ಸ್ ನ ಮ್ಯಾನೇಜರ್ ಅನ್ಸಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT