ಹಲ್ಲಿನಿಂದ ತೆಂಗಿನಕಾಯಿ ಸುಲಿದು ಚೆನ್ನಪಟ್ಟಣ ವ್ಯಕ್ತಿ ದಾಖಲೆ ನಿರ್ಮಾಣ 
ರಾಜ್ಯ

ಹಲ್ಲಿನಿಂದ ತೆಂಗಿನಕಾಯಿ ಸುಲಿದು ಚೆನ್ನಪಟ್ಟಣ ವ್ಯಕ್ತಿ ದಾಖಲೆ ನಿರ್ಮಾಣ

ಇವರ ಹಲ್ಲಿ ಯಾವುದೇ ಆಯುಧಗಳಿಂದಲೂ ಗಟ್ಟಿಯಾಗಿದೆ. ಇವರು ತಮ್ಮ ಹಲ್ಲುಗಳನ್ನು ಬಳಸಿ ಮನುಷ್ಯರನ್ನು ಮೇಲೆತ್ತುವರು, ತೆಂಗಿನಕಾಯಿ ಸಿಪ್ಪೆ ಸುಲಿಯುತ್ತಾರೆ.

ಮೈಸೂರು: ಇವರ ಹಲ್ಲು ಯಾವುದೇ ಆಯುಧಗಳಿಗಿಂತ ಗಟ್ಟಿಯಾಗಿದೆ. ಇವರು ತಮ್ಮ ಹಲ್ಲುಗಳನ್ನು ಬಳಸಿ ಮನುಷ್ಯರನ್ನು ಮೇಲೆತ್ತುವರು, ತೆಂಗಿನಕಾಯಿ ಸಿಪ್ಪೆ ಸುಲಿಯುತ್ತಾರೆ. ಚೆನ್ನಪಟ್ಟಣದ ಪಟ್ಟು ಎನ್ನುವಲ್ಲಿ ವಾಸವಿರುವ ಪಿ.ಜೆ. ಗೌತಮ್ ವರ್ಮ ಅವರ ವಿಚಾರವನ್ನು ನಾವಿಲ್ಲಿ ಹೇಳುತ್ತಿದ್ದೇವೆ. ಇವರು ಇದೇ ಸೋಮವಾರದಂದು ಮೂವತ್ತು ಸೆಕೆಂಡ್ ಗಳಲ್ಲಿ ಎರಡು ತೆಂಗಿನ ಕಾಯಿಗಳ ಸಿಪ್ಪೆ ಸುಲಿಯುವ ಮೂಲಕ, 54 ಕೆಜಿ ತೂಕದ ಮನುಷ್ಯನನ್ನು ತನ್ನ  ಹಲ್ಲಿನಿಂದ ಎತ್ತುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಹೆಸಾರು ನೊಂದಾಯಿಸಿದ್ದಾರೆ.
ಈಗಾಗಲೇ ಎರಡು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಎರಡು ಲಿಂಕಾ ರೆಕಾರ್ಡ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಗೌತಮ್ ವರ್ಮ ಅವರ ಹೆಸರಲ್ಲಿದೆ. ಇದೀಗ ಅವರು ಆರನೇ ಬಾರಿಗೆ ದಾಖಲೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮುಖೇನ ಅವರು ತಮ್ಮದೇ ಹಳೆ ದಾಖಲೆಗಳನ್ನು ಪುಡಿಗಟ್ಟಲು ಹೊರಟಿದ್ದಾರೆ. ಅವರ ನೂತನ ಸಾಹಸವನ್ನು ವೀಡಿಯೋ ಚಿತ್ರೀಕರಣ ಮಾಡಿ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳಿಗೆ ರವಾನಿಸಲಾಗಿದೆ.
ಕೇರಳದ ಜಾರ್ಜ್ ಐದು ನಿಮಿಷದಲ್ಲಿ ಮೂರು ತೆಂಗಿನಕಾಯಿಯ ಸಿಪ್ಪೆಯನ್ನು ಹಲ್ಲಿನಿಂದ ಸುಲಿದದ್ದನ್ನು ಕಂಡ ಗೌತಮ್ ಅವರಿಂದ ಪ್ರೇರಿತರಾಗಿ ತಾವೂ ಹಲ್ಲಿನ ಸಹಾಯದಿಂದ ತೆಂಗಿನಕಾಯಿ ಸುಲಿಯಲು ಮುಂದಾದರು. 1996 ನಾಲ್ಕು ವರ್ಷಗಳ ಕಾಲ ಸತತ ಅಭ್ಯಾಸ ನಡೆಸಿದ ಇವರು 2000ನೇ ವರ್ಷದಲ್ಲಿ ತಮ್ಮ ಹೆಸರಲ್ಲಿ ಪ್ರಥಮ ದಾಖಲೆ ಬರೆದರು.  ಇದಾದ ನಂತರ ಮತ್ತೆ ಮತ್ತೆ ಹೊಸ ದಾಖಲೆ ಮಾಡುತ್ತಾ ಸಾಗಿದ್ದ ಗೌತಮ್ ಇಂದು ತಮ್ಮ ಹಲ್ಲು ಬಳಸಿ ನಿಮಿಷಕ್ಕೆ 45 ತೆಂಗಿನಕಾಯಿ ಸುಲಿಯಬಲ್ಲರು, ಗರಿಷ್ಠ 80 ಕೆಜಿ ತೂಕದ ಮನುಷ್ಯರನ್ನು ಎತ್ತಬಲ್ಲರು.
ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಗೌತಮ್ ಯೋಗ ಹಾಗೂ ದೈಹಿಕ ಕಸರತ್ತುಗಳನ್ನು ಅಭ್ಯಾಸ ಮಾಡುತ್ತಾರೆ, ಪ್ರತಿ ದಿನವೂ ಒಂದೂವರೆ ತಾಸು ಅವರು ಯೋಗ ನಡೆಸುತ್ತಾರೆ. ಅವರು ತಮ್ಮ ಹಲ್ಲುಗಳಿಗೆ ಆಯುರ್ವೇದ ಮೂಲಿಕೆಗಳ ಪೇಸ್ಟ್ ಬಳಸುತ್ತಾರೆ.  ಹಲ್ಲು ಗಟ್ಟಿಯಾಗಿ ಬುಳಿಯುವುದಕ್ಕಾಗಿ ಅವರು ಸಿಹಿ ಪದಾರ್ಥಗಳನ್ನು ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೆ. 
ಗೌತಮ್ ಇದಾಗಲೇ ರಾಜ್ಯದ ನಾನಾ ಸ್ಥಳಗಳಲ್ಲಿ ನೆಲೆಸಿ ಇಂತಹಾ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂಭತ್ತಕ್ಕೂ ಹೆಚ್ಚು ಜನರ ವಿವರ ಕಲೆ ಹಾಕಿದ್ದಾರೆ. 'ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್' ಹೆಸಾರಿನಲ್ಲಿ ಅವುಗಳನ್ನೆಲ್ಲಾ ಒತ್ತಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದು ಅವರು ನಿರ್ಧರಿಸಿದ್ದು  2018 ಜನವರಿಯಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT