ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಆರು ಮಂದಿ ದರೋಡೆಕೋರರ ಬಂಧನ

ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಆರು ಮಂದಿಯ ಗ್ಯಾಂಗನ್ನು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸ...

ಬೆಂಗಳೂರು: ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಆರು ಮಂದಿಯ ಗ್ಯಾಂಗನ್ನು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜೆ.ಪಿ.ನಗರದ ಕಾರ್ತಿಕ್, ಸುನಿಲ್, ಹಾರೋಹಳ್ಳಿಯ ರಾಹುಲ್, ಬನಶಂಕರಿಯ ಸೆಂತಿಲ್ ಕುಮಾರ್ ಮತ್ತು ನವೀನ್,ಯಡಿಯೂರಿನ ರೋಹಿತ್ ನನ್ನು ಬಂಧಿಸಲಾಗಿದೆ. ಇವರ ಬಳಿಯಿಂದ ಕಾರು, 9 ದ್ವಿಚಕ್ರ ವಾಹನಗಳು, 24 ಮೊಬೈಲ್ ಫೋನ್, 32 ಇಂಚಿನ ಎಲ್ ಇಡಿ ಟಿವಿ, 6 ಹೋಂ ಥಿಯೇಟರ್, 78 ಗ್ರಾಂನ ಬೆಳ್ಳಿಯ ಸರ, ಕಠಾರಿ, ಚಾಕುಗಳು ಮತ್ತು ಒಂದು ರಾಡ್ ನ್ನು ವಶಪಡಿಸಿಕೊಳ್ಳಲಾಗಿದೆ.

ಕದ್ದ ಬೈಕುಗಳನ್ನು ಓಡಿಸುತ್ತಿದ್ದ ಆರೋಪಿಗಳು ಔಟರ್ ರಿಂಗ್ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಹೋಗಿ ಅಲ್ಲಿ ಸಂಚರಿಸುವವರಿಂದ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗುತ್ತಿದ್ದರು. ಕದ್ದ ಫೋನನ್ನು ಮಾರಾಟ ಮಾಡಿದರೆ, ಬೈಕಿನಲ್ಲಿ ಪೆಟ್ರೋಲ್ ಮುಗಿಯುವವರೆಗೆ ಓಡಿಸಿ ಅರ್ಧದಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದರು.

ಗುಂಪಿನಲ್ಲಿದ್ದ ಅತ್ಯಂತ ಚಿಕ್ಕ 16 ವರ್ಷದವನು ಹಣವನ್ನು ಆಲ್ಕೋಹಾಲ್ ಗೆ ಬಳಸುತ್ತಿದ್ದ. ಕಳೆದ ಎರಡು ತಿಂಗಳಲ್ಲಿ 17 ಕೇಸುಗಳು ದಾಖಲಾಗಿವೆ. ಹಣವನ್ನೆಲ್ಲಾ ಖರ್ಚು ಮಾಡಿದ್ದರಿಂದ ಪೊಲೀಸರಿಗೆ ವಸ್ತುಗಳು ಮಾತ್ರ ಸಿಕ್ಕಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!